ಉಪ್ಪಿ೨ ಕಟೌಟ್ 
ಸಿನಿಮಾ ಸುದ್ದಿ

ಉಪ್ಪಿ ೨ ಮೊದಲ ದಿನವೇ ದಾಖಲೆ ಗಳಿಕೆ

ಬಹಳ ನಿರೀಕ್ಷೆಯ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ನೆನ್ನೆ ಕರ್ನಾಟಕದಾದ್ಯಂತ ಬಿಡುಗಡೆ ಕಂಡಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವು ಪ್ರೇಕ್ಷಕರು ಉಪ್ಪಿ ಖದರ್ ಇದರಲ್ಲಿ ಇಲ್ಲ

ಬೆಂಗಳೂರು: ಬಹಳ ನಿರೀಕ್ಷೆಯ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ನೆನ್ನೆ ಕರ್ನಾಟಕದಾದ್ಯಂತ ಬಿಡುಗಡೆ ಕಂಡಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವು ಪ್ರೇಕ್ಷಕರು ಉಪ್ಪಿ ಖದರ್ ಇದರಲ್ಲಿ ಇಲ್ಲ ಎಂದರೆ ಇನ್ನೂ ಕೆಲವು ಅಭಿಮಾನಿಗಳು ಉಪ್ಪಿ ಹವಾ ಒಂಚೂರು ಕುಂದಿಲ್ಲ ಎನ್ನುತ್ತಾರೆ.

ಏನಾದರೂ ಆಗಲಿ ಗಲ್ಲಾಪೆಟ್ಟಿ ಗಳಿಕೆ ಮಾತ್ರ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಮೊದಲ ದಿನವೇ ದಾಖಲೆ ಗಳಿಕೆ ಕಂಡಿದೆ ಎನ್ನುತ್ತವೆ ಮೂಲಗಳು. ಮೂಲಗಳನ್ನು ನಂಬುವುದಾದರೆ ಉಪ್ಪಿ೨ ಕರ್ನಾಟಕದಲ್ಲೇ ಮೊದಲ ದಿನ ೯ ಕೋಟಿ ಗಳಿಕೆ ಕಂಡಿದೆಯಂತೆ. ಹೀಗೆ ಎಲ್ಲ ಕನ್ನಡ ಚಿತ್ರಗಳ ಮೊದಲ ದಿನನದ ದಾಖಲೆಯನ್ನು ನುಚ್ಚು ನೂರು ಮಾಡಿದೆ ಎನ್ನಲಾಗಿದೆ. ಇದೇ ಕುತೂಹಲವನ್ನು ಸಿನೆಮಾ ಕಾಯ್ದುಕೊಳ್ಳಲು ಸಾಧ್ಯವಾದರೆ ವಾರಾಂತ್ಯದ ಗಳಿಕೆ ೨೫ ಕೋಟಿ ಮೀರಲಿದೆ ಎನ್ನಲಾಗಿದೆ.

ಆಂಧ್ರ ಮತ್ತು ತೆಲಂಗಾಣದಲ್ಲಿ ಕೂಡ ಸಿನೆಮಾ ಮಂದಿರಗಳು ಮೊದಲ ದಿನ ೭೫% ತುಂಬಿದ್ದವು ಎಂದು ಮೂಲಗಳು ತಿಳಿಸಿವೆ. ಇದನ್ನು ಕಾಯ್ದುಕೊಂಡರೆ ಭಾನುವಾರದ ಅಂತ್ಯಕ್ಕೆ ಅಲ್ಲಿ ೨೦ಕೋಟಿ ಗಳಿಕೆ ಕಾಣಲಿದೆ ಎನ್ನಲಾಗುತ್ತಿದೆ. ಆದುದರಿಂದ ಎರಡು ಭಾಷೆಗಳಲ್ಲಿನ ಒಟ್ಟು ಗಳಿಕೆ ಭಾನುವಾರದ ಅಂತ್ಯಕ್ಕೆ ೪೫ ಕೋಟಿ ಮೀರಬಹುದು ಎಂಬುದು ಪಂಡಿತರ ಲೆಕ್ಕಾಚಾರ.

ಆದರೆ ಈ ಲೆಕ್ಕಾಚಾರಗಳಿಗೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಕೆಲವರು ಹಾಸ್ಯ ಮಾಡುತ್ತಿದ್ದು, ಉಪ್ಪಿ೨ ಸಿನೆಮಾದಲ್ಲಿ ವರ್ತಮಾನವನ್ನಷ್ಟೇ ಯೋಚಿಸಬೇಕೆಂದು ಉಪೇಂದ್ರ ಬೋಧಿಸುತ್ತಾರೆ. ಹೀಗೆ ಭವಿಷ್ಯದ ಗಳಿಕೆ ಲೆಕ್ಕಾಚಾರ ಹಾಕುವುದು ಸರಿಯೇ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT