ದಕ್ಷಿಣ ಭಾರತದ ನಟಿ ಲಕ್ಷ್ಮಿ ರೈ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಹೊಸ ಜೂಲಿ ಲಕ್ಷ್ಮಿ ರೈ

ಕುಂದಾನಗರಿಯ ಬೆಡಗಿ ನಟಿ ಲಕ್ಷ್ಮಿ ರೈ ಬಾಲಿವುಡ್‍ನ ಮೋಸ್ಟ್ ಹಾಟ್ ನಟಿ ಎಂಬ ಪಟ್ಟಕ್ಕೇರಲು ರೆಡಿಯಾಗಿದ್ದಾರೆ..

ಕುಂದಾನಗರಿಯ ಬೆಡಗಿ ನಟಿ ಲಕ್ಷ್ಮಿ ರೈ ಬಾಲಿವುಡ್‍ನ ಮೋಸ್ಟ್ ಹಾಟ್ ನಟಿ ಎಂಬ ಪಟ್ಟಕ್ಕೇರಲು ರೆಡಿಯಾಗಿದ್ದಾರೆ.

ದೀಪಕ್ ಶಿವದಾಸನಿ ನಿರ್ದೇಶನದ `ಜೂಲಿ 2' ಚಿತ್ರಕ್ಕೆ ಬಿಕಿನಿ ತೊಟ್ಟಿರುವ ಆಕೆ, ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚುವಂತೆ ಕಾಣಿಸಿಕೊಂಡಿರುವುದು ಬಾಲಿವುಡ್‍ನ ಸದ್ಯದ ಹಾಟ್ ಟಾಪಿಕ್. ಬಿಕಿನಿ  ತೊಟ್ಟಿರುವ ಆಕೆಯ ಫೋಟೋಗಳನ್ನು ನೋಡಿದ ನಟಿ ನೇಹಾ ದೂಪಿಯಾ ಕೂಡ ಹೊಟ್ಟೆ ಉರಿಸಿಕೊಂಡಿದ್ದಾರಂತೆ. ಕಾರಣ, 2004ರಲ್ಲಿ ಅವರೂ ಜೂಲಿಯಾಗಿ ನಟಿಸಿ ವಿವಾದಕ್ಕೂ  ಕಾರಣವಾಗಿದ್ದರು. ಆ ಕಾಲಕ್ಕೆ ನೇಹಾಳ ಬೋಲ್ಡ್‍ನೆಸ್ ಕಂಡವರು, ನೇಹಾ ಅಂದ್ರೆ ಸಿಕ್ಕಾಪಟ್ಟೆ ಹಾಟ್ ಅಂತಲೇ ಚುಡಾಯಿಸಿದ್ದರು.

ಈಗ ಅದೇ ಮಾತುಗಳು ಲಕ್ಷ್ಮಿ ರೈ ಕಡೆಗೆ ತಿರುಗುತ್ತಿವೆ. ಆಕೆಯ ಸಿನಿ ಜರ್ನಿಯಲ್ಲಿ `ಜೂಲಿ 2' 50ನೇ ಚಿತ್ರ. ಅಷ್ಟೇ ಅಲ್ಲ, ಬಾಲಿವುಡ್‍ನಲ್ಲಿ ಇದೇ ಮೊದಲ ಬಾರಿಗೆ ಕ್ಯಾಮೆರಾ  ಎದುರಿಸುತ್ತಿದ್ದಾರೆ.  ನಾಯಕಿ ಪ್ರಧಾನವಾದ `ಜೂಲಿ 2 ' ಚಿತ್ರದ ಮೂಲಕವೇ ಬಾಲಿವುಡ್‍ನಲ್ಲೂ ನೆಲೆ ಕಂಡುಕೊಳ್ಳುವ ತವಕದಲ್ಲಿರುವ ಆಕೆ, ಈ ಹಿಂದೆಯೆೀ ಬಿಕಿನಿ ತೊಡಲು ರೆಡಿಯಾಗಿದ್ದಾಗಿ ಸುದ್ದಿಯಾಗಿತ್ತು.  ಅದೀಗ ಸಾಧ್ಯವಾಗುತ್ತಿದೆ. ಚಿತ್ರೀಕರಣದ ಫೋಟೋಗಳು ಈಗಾಗಲೇ ಬಾಲಿವುಡ್ ಅಂಗಳದಲ್ಲೂ ಹರಡಿವೆ. ಅಂತರ್ಜಾಲದಲ್ಲಂತೂ ವೈರಲ್ ಆಗಿದ್ದು, ಬಾಲಿವುಡ್ ಮಂದಿ ನಿಬ್ಬೆರಗಾಗಿ  ನೋಡುತ್ತಿದ್ದಾರೆ. ಪಾತ್ರದಲ್ಲಿ ನಟನೆಗೆ ಹೆಚ್ಚು ಅವಕಾಶ ಇರೋದ್ರಿಂದ, ಪಾತ್ರಕ್ಕೆ ತಕ್ಕಂತೆ ಅದು ಅನಿವಾರ್ಯವೂ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.

26 ವರ್ಷದ ಈ ನಟಿ ತೆಲುಗು, ಕನ್ನಡ ಹಾಗೂ ತಮಿಳು ಚಿತ್ರಗಳ ನಂತರ ಈಗ ಲಕ್ಷ್ಮಿ ರೈ ಬಾಲಿವುಡ್ ನತ್ತ ಮುಖ ಹಾಕಿದ್ದಾರೆ.ಅಲ್ಲಿನ ಮರ್ಮಗಳ ನ್ನು ಅರ್ಥ ಮಾಡಿಕೊಂಡ ಹಿನ್ನೆಲೆಯೋ ಅಥವಾ  ಪಾತ್ರದ ಅಗತ್ಯವೋ ಇದೇ ಮೊದಲ ಬಾರಿಗೆ ಆಕೆ ಬಿಕಿನಿ ತೊಡಲು ರೆಡಿಯಾಗಿದ್ದು ಮಾತ್ರ ಆಕೆಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಕ್ಟೋಬರ್ ನಿಂದ ಚಿತ್ರೀಕರಣ  ಶುರುವಾಗಿದ್ದು, 2016ಕ್ಕೆ ಬಹುತೇಕ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT