ನಟ ಶ್ರೀಮುರಳಿ 
ಸಿನಿಮಾ ಸುದ್ದಿ

ಬಾಕ್ಸಾಫೀಸಿನಲ್ಲಿ ಓಟ ಮುಂದುವರೆಸಿದ ರಥಾವರ; ಜಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಹೊಸ ಚಿತ್ರ

ಭಾರಿ ಯಶಸ್ಸಿನ 'ಉಗ್ರಂ' ನಂತರ 'ರಥಾವರ' ಕೂಡ ನಟ ಶ್ರೀಮುರಳಿ ಅವರನ್ನು ಕೈಹಿಡಿದಿರುವುದು ಗಾಂಧಿನಗರದಲ್ಲಿ ನಟನಿಗೆ ಉತ್ತುಂಗ ಸ್ಥಾನ ದೊರೆತಂತಾಗಿದೆ.

ಬೆಂಗಳೂರು: ಭಾರಿ ಯಶಸ್ಸಿನ 'ಉಗ್ರಂ' ನಂತರ 'ರಥಾವರ' ಕೂಡ ನಟ ಶ್ರೀಮುರಳಿ ಅವರನ್ನು ಕೈಹಿಡಿದಿರುವುದು ಗಾಂಧಿನಗರದಲ್ಲಿ ನಟನಿಗೆ ಉತ್ತುಂಗ ಸ್ಥಾನ ದೊರೆತಂತಾಗಿದೆ. ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ವಿತರಕ ಜಯಣ್ಣ "ರಥಾವರ ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಕಾಣುತ್ತಿದ್ದು ಎರಡು ವಾರಗಳಲ್ಲಿ ೧೦ ಕೋಟಿ ಗಳಿಸಿದೆ" ಎಂದಿದ್ದಾರೆ.

ಈಗ ಸದ್ಯಕ್ಕೆ ಶ್ರೀಮುರಳಿ ಅವರಿಗೆ ಹಲವಾರು ಅವಕಾಶಗಳು ಒದಗಿ ಬಂದಿದ್ದರೂ, ಎಚ್ಚರಿಕೆ ನಡೆ ಇಟ್ಟಿರುವ ನಟ ಮುಂದಿನ ಚಿತ್ರವನ್ನು ಜಯಣ್ಣ-ಭೋಗೇಂದ್ರ ಅವರ ನಿರ್ಮಾಣ ಸಂಸ್ಥೆಯಡಿ ಒಪ್ಪಿಕೊಂಡಿದ್ದು, ವಿವರಗಳು ಮುರಳಿ ಅವರ ಹುಟ್ಟು ಹಬ್ಬವಾದ ಡಿಸೆಂಬರ್ ೧೭ ರಂದು ಹೊರಬೀಳಲಿವೆ ಎನ್ನಲಾಗಿದೆ.

ಈ ಯೋಜನೆಯ ವಿಶೇಷವೆಂದರೆ, ಉಗ್ರಂ ಸಿನೆಮಾ ನೀಡಿದ ಪ್ರಶಾಂತ್ ನೀಲ್ ಜೊತೆಗೆ ಕೆಲಸ ಮಾಡುತ್ತಿದ್ದ ನಾರ್ಥನ್ ಈ ಸಿನೆಮಾ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕ ಟೋಪಿ ತೊಡಲಿದ್ದಾರೆ. ನಾರ್ಥನ್, ಯಶ್ ಅವರ 'ಮಾಸ್ಟರ್ ಪೀಸ್' ನಲ್ಲಿ ಗೀತರಚನೆ ಕೂಡ ಮಾಡಿದ್ದಾರೆ.

ನೂತನ ಚಿತ್ರದ ಒಂದು ಸಾಲಿನ ಕಥೆ ಸಿದ್ಧವಾಗಿದ್ದು "ಮುಂದಿನ ಎರಡು ತಿಂಗಳುಗಳಲ್ಲಿ ಕಥೆ ಸಿದ್ಧವಾಗುತ್ತದೆ. ಜೊತೆ ಜೊತೆಗೇ ಇತರ ತಾರಾಗಣದ ಆಯ್ಕೆಯೂ ನಡೆಯುತ್ತದೆ" ಎಂದು ತಿಳಿಸುತ್ತಾರೆ ಜಯಣ್ಣ.

ಸದ್ಯಕ್ಕೆ 'ರಥಾವರ' ಪ್ರಚಾರ ಕಾರ್ಯ ಕೈಗೊಂಡಿರುವ ಶ್ರೀಮುರಳಿ ತುಮಕೂರು ಚಿತ್ರದುರ್ಗ ಇತ್ಯಾದಿ ಪ್ರದೇಶಗಳಲ್ಲಿ ಪ್ರವಾಸ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?