ನಟ ದುನಿಯಾ ವಿಜಯ್ 
ಸಿನಿಮಾ ಸುದ್ದಿ

ದುನಿಯಾ ವಿಜಯ್-ನಾಗಶೇಖರ್ ಜೋಡಿಯಲ್ಲಿ 'ಮಾಸ್ತಿ ಗುಡಿ' - ಗಂಧದಗುಡಿ ಭಾಗ ೩

ನಿರ್ದೇಶಕ ನಾಗಶೇಖರ್ ನಿರ್ದೇಶಿಸಬೇಕಿದ್ದ ಬಹುಭಾಷಾ ಚಲನಚಿತ್ರ ಮುದಿನ ವರ್ಷ ಜೂನ್ ಗೆ ಮೂಂದೂಡಲಾಗಿದ್ದು, ಅಲ್ಲಿಯವರೆಗೆ ಸಮಯಹರಣ ಮಾಡದೆ ಹೊಸ ಸಿನೆಮಾವೊಂದನ್ನು

ಬೆಂಗಳೂರು: ನಿರ್ದೇಶಕ ನಾಗಶೇಖರ್ ನಿರ್ದೇಶಿಸಬೇಕಿದ್ದ ಬಹುಭಾಷಾ ಚಲನಚಿತ್ರ ಮುದಿನ ವರ್ಷ ಜೂನ್ ಗೆ ಮೂಂದೂಡಲಾಗಿದ್ದು, ಅಲ್ಲಿಯವರೆಗೆ ಸಮಯಹರಣ ಮಾಡದೆ ಹೊಸ ಸಿನೆಮಾವೊಂದನ್ನು ಘೋಷಿಸಿದ್ದಾರೆ. ದುನಿಯಾ ವಿಜಯ್ ನಾಯಕ ನಟನಾಗಿ ನಟಿಸಲಿರುವ ಚಿತ್ರದ ಹೆಸರು 'ಮಾಸ್ತಿ ಗುಡಿ' ಮತ್ತು ಅಡಿ ಶೀರ್ಷಿಕೆ 'ಗಂಧದ ಗುಡಿ ಭಾಗ ೩'. ಸದ್ಯಕ್ಕೆ ವಿಜಯ್ ಅವರಿಗೆ ಒಂದು ಸಾಲಿನ ಕಥೆ ಹೇಳಿರುವ ನಾಗಶೇಖರ್, ಇಬ್ಬರೂ ಒಟ್ಟಿಗೆ ಸ್ಕ್ರೀನ್ ಪ್ಲೇ ಬರೆಯಲಿದ್ದಾರತೆ.

"ನಾನು ನನ್ನ ಬಹುಭಾಷಾ ಚಲನಚಿತ್ರ 'ಗಡಿಯಾರ'ಕ್ಕೆ ಹಸಿರು ನಿಶಾನೆ ಕೊಡಲು ನಿರ್ಮಾಪಕರಿಗೆ ಕಾಯುತ್ತಿದ್ದೆ. ಈ ನಡುವೆ ವಿಜಯ್ ಗಾಗಿ ಒಂದು ಸಾಲಿನ ಕಥೆ ಹೆಣೆಯಲು ಅವಕಾಶ ಸಿಕ್ಕಿತು. ಅವರು ಬೇರೊಬ್ಬ ನಿರ್ದೇಶಕನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ನನಗೆ ಸಮಯ ಇರುವುದನ್ನು ತಿಳಿದ ಅವರು ಸಿನೆಮಾ ನಿರ್ದೇಶಿಸಲು ನನಗೆ ತಿಳಿಸಿದ್ದಾರೆ" ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.

ಕಬಿನಿ ಅಣೆಕಟ್ಟಿನ ಬಳಿಯಿರುವ 'ಮಾಸ್ತಿಗುಡಿ' ದೇವಸ್ಥಾನದ ಬಳಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರವಂತೆ ಇದು. ದುನಿಯಾ ವಿಜಯ್ ಗೆಳೆಯರಾದ ಸುಂದರ್ ಪಿ ಗೌಡ ಮತ್ತು ಅನಿಲ್ ಕುಮಾರ್ ವಿ ಚಿತ್ರದ ನಿರ್ಮಾಪಕರು.

ಸಾಧು ಕೋಕಿಲಾ ಸಿನೆಮಾಗೆ ಸಂಗೀತ ನೀಡಲಿದ್ದು ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. ಇಬ್ಬರು ನಾಯಕನಟಿಯರ ಶೋಧನೆ ನಡೆಯುತ್ತಿದೆಯಂತೆ. "ಹುಲಿಗಳನ್ನು ಉಳಿಸಿ ಕಾಡು ಉಳಿಸಿ" ಎಂಬ ಧ್ಯೇಯ ಸಿನೆಮಾದಲ್ಲಿ ಧ್ವನಿಸಲಿದೆಯಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT