ಆರ್.ಜೆ. ರೋಹಿತ್ ನಿರೂಪಣೆಯಲ್ಲಿ ಮೂಡಿಬರಲಿರುವ ಡಿವೈಡೆಡ್ ರಿಯಾಲಿಟಿ ಶೋ 
ಸಿನಿಮಾ ಸುದ್ದಿ

ರೋಹಿತ್ ಡಿವೈಡೆಡ್

ಪ್ರತಿ ಸಂಚಿಕೆಯಲ್ಲಿ 3 ಸ್ಪರ್ಧಿಗಳು ಭಾಗವಹಿಸುತ್ತಾರೆ. ಈ ಮೂರೂ ಜನ...

ಪ್ರತಿ ಸಂಚಿಕೆಯಲ್ಲಿ 3 ಸ್ಪರ್ಧಿಗಳು ಭಾಗವಹಿಸುತ್ತಾರೆ. ಈ ಮೂರೂ ಜನ ಒಬ್ಬರಿಗೊಬ್ಬರು ಪರಿಚಿತರಾಗೋದು 'ಡಿವೈಡೆಡ್‌' ವೇದಿಕೆಯ ಮೇಲೆ ಬಂದಾಗಲೇ. ಒಚ್ಚು ನಾಲ್ಕು ರೌಂಡ್‌ಗಳಲ್ಲಿ 10 ಪ್ರಶ್ನೆಗಳನ್ನು ಇಲ್ಲಿ ಸ್ಪರ್ಧಿಗಳು ಎದುರಿಸಬೇಕಾಗಿರುತ್ತೆ. ಮೊದಲನೇ ರೌಂಡ್‌ನಲ್ಲಿ 25 ಸಾವಿರ ಬಹುಮಾನದ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತೆ.

'ವೀಕೆಂಡ್ ವಿಥ್ ರಮೇಶ್‌' ಮತ್ತು 'ಲೈಫ್ ಸೂಪರ್ ಗುರೂ' ಜನಪ್ರಿಯತೆಯ ನಂತರ ಇದೀಗ 'ಡಿವೈಡೆಡ್‌' ಎಂಬ ಮತ್ತೊಂದು ನೂತನ ರಿಯಾಲಿಟಿ ಶೋಗೆ ಜೀ ಕನ್ನಡ ಸಜ್ಜಾಗಿದೆ.

ಆರ್.ಜೆ. ರೋಹಿತ್ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಶೋ 10 ಲಕ್ಷ ರುಪಾಯಿಯ ಬಹುಮಾನವನ್ನು ಒಳಗೊಂಡಿದ್ದು, ಪ್ರತಿ ಸಂಚಿಕೆಯಲ್ಲಿ 3 ಸ್ಪರ್ಧಿಗಳು ಭಾಗವಹಿಸುತ್ತಾರೆ. ಈ ಮೂರೂ ಜನ ಒಬ್ಬರಿಗೊಬ್ಬರು ಪರಿಚಿತರಾಗೋದು 'ಡಿವೈಡೆಡ್‌' ವೇದಿಕೆಯ ಮೇಲೆ ಬಂದಾಗಲೇ.

ಒಟ್ಟು ನಾಲ್ಕು ರೌಂಡ್‌ಗಳಲ್ಲಿ 10 ಪ್ರಶ್ನೆಗಳನ್ನು ಇಲ್ಲಿ ಸ್ಪರ್ಧಿಗಳು ಎದುರಿಸಬೇಕಾಗಿರುತ್ತೆ. ಮೊದಲನೇ ರೌಂಡ್‌ನಲ್ಲಿ 25 ಸಾವಿರ ಬಹುಮಾನದ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತೆ. ಎರಡನೇ ರೌಂಡ್‌ನಲ್ಲಿ 50 ಸಾವಿರಕ್ಕೆ ಮೂರು ಪ್ರಶ್ನೆಗಳಿಗೆ ುತ್ತರಿಸಬೇಕು. ಮೂರನೇ ರೌಂಡ್‌ನಲ್ಲಿ 1 ಪ್ರಶ್ನೆಯನ್ನ ಸ್ಪರ್ಧಿಗಳು ಎದುರಿಸಬೇಕಾಗುತ್ತದೆ. ಇಲ್ಲಿ ಒಂದು ಪ್ರಶ್ನೆಗೆ ಮೂಲರು ಸ್ಫರ್ಧಿಗಳು ಒಟ್ಟಾಗಿ ಚರ್ಚಿಸಿ ಒಮ್ಮತಕ್ಕೆ ಬಂದು ಉತ್ತರಿಸಬೇಕು. ಇದಕ್ಕೆ 100 ಸೆಕೆಂಡುಗಳ ಕಾಲಾವಕಾಶವಿರುತ್ತೆ.

ಪ್ರಶ್ನೆಯೊಂದಕ್ಕೆ ಉತ್ತರಿಸಲು 100 ಸೆಕೆಂಡುಗಳ ರಿವರ್ಸ್ ಕೌಂಟಿಂಗ್ ಶುರುವಾಗಿರುತ್ತದೆ. ಸೆಕೆಂಡುಗಳು ಕಡಿಮೆಯಾದಷ್ಟು ಪ್ರಶ್ನೆಯ ಒಟ್ಟು ಮೊತ್ತದ ಹಣವೂ ಕಡಿತವಾಗುತ್ತದೆ. ಇಡೀ ಸ್ಪರ್ಧೆಟಲ್ಲಿ ಒಟ್ಟು 3 ಲೈಫ್‌ಲೈನ್‌ಗಳಿರುತ್ತವೆ. (ಎರಡು ತಪ್ಪು ಉತ್ತರಗಳಿಗೆ ಮತ್ತು 1 ಪ್ರಶ್ನೆಯನ್ನು 'ಪಾಸ್‌' ಮಾಡುವುದಕ್ಕೆ) ಅಂತಿಮವಾಗಿ ಮೂವರೂ ಸ್ಪರ್ಧಿಗಳು ಗೆಲ್ಲುವ ಹಣದಲ್ಲಿ ಯಾವ ಸ್ಫರ್ಧಿ ಎಷ್ಟು ಹಣ ಹಂಚಿಕೊಳ್ಳಬೇಕು? ಇದರಲ್ಲಿ ಯಾರ ಪಾಲು ಎಷ್ಟು? ಎಂಬುದನ್ನೂ ಸ್ಪರ್ಧಿಗಳೇ ನಿರ್ಧರಿಸಬೇಕು. ಅದಕ್ಕೂ 15 ಸೆಕೆಂಡುಗಳು ಒಮ್ಮತಕ್ಕೆ ಬರದೇ ಹೋದರೆ ಮತ್ತೆ 100 ಸೆಕೆಂಡುಗಳ ಲೆಕ್ಕದಲ್ಲಿ ಕಡಿತಗೊಳ್ಳುತ್ತದೆ. ಎಂಡೋಮಾಲ್ ಪ್ರೋಡಕ್ಷನ್ ಸಂಸ್ಥೆ 'ಡಿವೈಡೆಡ್‌' ಕಾರ್ಯಕ್ರಮದ ನಿರ್ಮಾಣ ಮಾಡುತ್ತಿದ್ದು. ಜ.3 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ರಿಂದ 9 ವರೆಗೆ ಪ್ರಸಾರವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT