ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ 
ಸಿನಿಮಾ ಸುದ್ದಿ

ಹಂಚಿಕೆದಾರರಿಗೆ ನಷ್ಟ ಭಾವುಕರಾದ ರಾಕ್‌ಲೈನ್

ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ ಲಿಂಗಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್...

ಬೆಂಗಳೂರು: ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ ಲಿಂಗಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರಾ? ಲಿಂಗಾ ಚಿತ್ರದಿಂದ ಆರ್ಥಿಕವಾಗಿ ತಮಗೆ ಭಾರೀ ನಷ್ಟವಾಗಿದೆಯೆಂದು ವಿತರಕರು ಪ್ರತಿಭಟನೆ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ ರಾಕ್‌ಲೈನ್ ವೆಂಕಟೇಶ್ ಮಾತನಾಡುತ್ತಾ ಭಾವುಕರಾಗಿ ಕಣ್ಣೀರಿಟ್ಟರು ಎಂದು ಚೆನ್ನೈನ ಸುದ್ದಿ ಮೂಲವೊಂದು ಹೇಳಿದೆ.

ದೊಡ್ಡ ಮೊತ್ತಕ್ಕೆ ಲಿಂಗಾ ಚಿತ್ರದ ಹಂಚಿಕೆ ಪಡೆದಿದ್ದ ವಿತರಕರಿಗೆ ಈ ಚಿತ್ರದಿಂದ ಅಪಾರ ನಷ್ಟವಾಗಿದೆ ಎಂಬ ಸುದ್ದಿ ಕಳೆದ ನಾಲ್ಕು ವಾರಗಳಿಂದ ಹರಿದಾಡುತ್ತಲೇ ಇದ್ದು ಶನಿವಾರದಂದು ನಷ್ಟಕ್ಕೊಳಗಾದ ಹಲವು ಹಂಚಿಕೆದಾರರು ಚೆನ್ನೈಯಲ್ಲಿ ನಿರಶನ ಮಾಡಿದ್ದರು. ಮರೀನಾ ಪಿಕ್ಚರ್ಸ್‌ನ ಸಿಂಗಾರವೇಲನ್ ಸೇರಿದಂತೆ ಇನ್ನಿತರ ಹಂಚಿಕೆದಾರರು, ಈ ಚಿತ್ರದಿಂದಾಗಿರುವ ನಷ್ಟ ತುಂಬಿ ಕೊಡುವಂತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆಗೆ ಮಾತನಾಡಲು ಮಧ್ಯಪ್ರವೇಶಿಸಬೇಕೆಂದು ರಜನೀಕಾಂತ್‌ರನ್ನು ವಿನಂತಿಸಿಕೊಂಡಿದ್ದರು.

ಈ ತನಕ ರಜನಿ ಅಥವಾ ರಾಕ್‌ಲೈನ್ ಆಗಲೀ ಚಿತ್ರದ ಆರ್ಥಿಕ ವಹಿವಾಟಿನ ಬಗ್ಗೆ, ವಿತರಕರ ಸಂಕಷ್ಟದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ವಿತರಕರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಲು ರಾಕ್‌ಲೈನ್ ವೆಂಕಟೇಶ್ ಫೋನ್‌ನಲ್ಲಿಯೂ ಲಭ್ಯವಿಲ್ಲದ ಕಾರಣ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ಬಾರಿ ಫೆ.1ರ ಭಾನುವಾರ ಕೇಂದ್ರ ಬಜೆಟ್, ಜ. 29ಕ್ಕೆ ಆರ್ಥಿಕ ಸಮೀಕ್ಷೆ ಮಂಡನೆ!

'ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ': ಲುಟ್ನಿಕ್ ಹೇಳಿಕೆ ತಳ್ಳಿಹಾಕಿದ MEA, ಹೇಳಿದ್ದೇನು?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಪದೇ ಪದೇ ದಾಳಿ: ಭಾರತ ಹೇಳಿದ್ದೇನು?

ದ್ವೇಷ ಭಾಷಣ ಬಿಟ್ಟು 19 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ; ಎರಡು ಮಸೂದೆ ವಾಪಸ್

ಕಾವೇರಿ ನದಿ ಸಂರಕ್ಷಣೆಗೆ ಹಣ ಮೀಸಲಿಡಿ: ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಒಡೆಯರ್ ಪತ್ರ!

SCROLL FOR NEXT