ಸಿನಿಮಾ ಸುದ್ದಿ

ಎರಡು ದೃಶ್ಯಗಳಿಂದಾಗಿ 'ದೃಶ್ಯಂ' ತಮಿಳು ರಿಮೇಕ್ ತಿರಿಸ್ಕರಿಸಿದ ರಜನಿ

Lingaraj Badiger

ಚೆನ್ನೈ: ಎರಡು ನಿರ್ದಿಷ್ಟ ದೃಶ್ಯಗಳ ಕಾರಣದಿಂದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಲೆಯಾಳಂ ಬ್ಲಾಕ್‌ಬಸ್ಟರ್ ಮೂವಿ 'ದೃಶ್ಯ'ದಲ್ಲಿ ಅಭಿನಯಿಸಲು ನಿರಾಕರಿಸಿದ್ದಾರೆ.

ಮೂಲಗಳ ಪ್ರಕಾರ, ದೃಶ್ಯಂ ತಮಿಳು ರಿಮೇಕ್ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡಲು ನಿರ್ದೇಶಕ ಜೀತು ಜೋಸೆಫ್ ಅವರು ಸಹ ಒಪ್ಪಿಕೊಂಡಿದ್ದರು. ಆದರೆ ಆ ಚಿತ್ರದಲ್ಲಿನ ಎರಡು ದೃಶ್ಯಗಳಿಂದ ತಮ್ಮ ಅಭಿಮಾನಿಗಳಿಗೆ ಬೇಸರವಾಗಬುಹುದು ಎಂಬ ಕಾರಣದಿಂದ ರಜನಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

'ರಜನಿಕಾಂತ್ ಸರ್ ಅವರು ಕಥೆಯನ್ನು ತುಂಬಾ ಇಷ್ಟಪಟ್ಟಿದ್ದರು. ಆದರೆ ಆ ಚಿತ್ರದಲ್ಲಿನ ಎರಡು ದೃಶ್ಯಗಳು ಅವರಿಗೆ ಇಷ್ಟವಾಗಲಿಲ್ಲ ಎಂದು ಜೀತು ಹೇಳಿರುವುದಾಗಿ' ಮೂಲಗಳು ತಿಳಿಸಿವೆ.

'ರಜನಿಗೆ ಇಷ್ಟವಾಗದ ಮೊದಲ ದೃಶ್ಯ ಎಂದರೆ, ಪೊಲೀಸರು ನಾಯಕನನ್ನು ಹಿಗ್ಗಾಮುಗ್ಗಾ ಥಳಿಸುವುದು. ಮತ್ತೊಂದು ಚಿತ್ರದ ಕ್ಲೈಮ್ಯಾಕ್ಸ್. ರಜನಿ ಅವರನ್ನು ಥಳಿಸುವ ದೃಶ್ಯವನ್ನು ಅವರ ಅಭಿಮಾನಿಗಳು ಇಷ್ಟಪಡುತ್ತಾರೆ ಎಂಬ ನಂಬಿಕೆ ಅವರಿಗೆ ಇರಲಿಲ್ಲ. ಹೀಗಾಗಿ ಅವರು ಚಿತ್ರವನ್ನು ಒಪ್ಪಿಕೊಂಡಿಲ್ಲ' ಎಂದು ಮೂಲಗಳು ತಿಳಿಸಿವೆ.

ರಜನಿ ನಿರಾಕರಿಸಿದ ಬಳಿಕ, ದೃಶ್ಯಂ ತಮಿಳು ರಿಮೇಕ್ 'ಪಾಪನಾಸಂ' ಚಿತ್ರದಲ್ಲಿ ಕಮಲ್ ಹಾಸನ್ ಅಭಿನಯಿಸಿದ್ದು, ಚಿತ್ರ ಈಗ ತಮಿಳುನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

SCROLL FOR NEXT