'ಮಾರಿ' ಸಿನೆಮಾದ ಭಿತ್ತಿಚಿತ್ರ 
ಸಿನಿಮಾ ಸುದ್ದಿ

'ಮಾರಿ'ಗೆ ಹೆಮ್ಮಾರಿಯಂತೆ ಕಾಡುತ್ತಿರುವ ಬಾಹುಬಲಿ

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಲನಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರ ಮಾಲೀಕರಿಗೆ ಧರ್ಮಸಂಕಷ್ಟ!

ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಲನಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರ ಮಾಲೀಕರಿಗೆ ಧರ್ಮಸಂಕಷ್ಟ! ಅತ್ಯುತ್ತಮ ಪ್ರದರ್ಶನ ನೀಡುತ್ತಿರುವಾಗಲೂ ಯಾವ ರೀತಿಯ ಸಂಕಷ್ಟ ಎಂದಿರೇ? ಏಕೆಂದರ ಶುಕ್ರವಾರ ಬಾಲಾಜಿ ಮೋಹನ್ ನಿರ್ದೇಶನದ ಧನುಶ್ ನಟನೆಯ 'ಮಾರಿ' ಬಿಡುಗಡೆಯಾಗುತ್ತಿದೆ. ಈ ಚಲನಚಿತ್ರದ ಬಿಡುಗಡೆಯಾ ದಿನಾಕವನ್ನು ಬಹಳ ಹಿಂದೆಯೇ ನಿಗದಿ ಮಾಡಲಾಗಿದ್ದು, ಸಿನೆಮಾ ಪ್ರದರ್ಶನಕ್ಕೆ ಪ್ರಾದೇಶಿಕ ವಿತರಕರು ಮತ್ತು ಚಲನಚಿತ್ರ ಮಾಲೀಕರು ಈಗಾಗಲೇ ಮುಂಗಡ ಹಣ ನೀಡಿದ್ದಾರೆ. ಇಂತಹ ಸಮಯದಲ್ಲಿ ತುಂಬಿದ ಚಿತ್ರಮಂದಿರಗಳಲ್ಲಿ ಓಡುತ್ತಿರುವ 'ಬಾಹುಬಲಿ'ಯನ್ನು 'ಮಾರಿ'ಗಾಗಿ ಓಡಿಸುವುದು ಹೇಗೆ?

ಆದರೆ ಮಾರುಕಟ್ಟೆ ಭಾವನೆಗಳು ಧನುಶ್ ಪರವಾಗಿವೆ. ಏಕೆಂದರೆ ಧನುಶ್ ಅವರ ಈ ಹಿಂದಿನ ಎರಡು ಚಿತ್ರಗಳು 'ವೇಲಯಿಲ್ಲ ಪಟ್ಟಧಾರಿ' ಮಾತು 'ಆನೆಗನ್' ಬ್ಲಾಕ್ ಬಸ್ಟರ್ ಸಿನೆಮಾಗಳು. ಅಲ್ಲದೆ ಬಾಹುಬಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದರು ಮೂಲತಃ ತೆಲುಗು ಸಿನೆಮಾ. ಇದು ಒಂದು ವಾರ ಓಡಬಹುದಷ್ಟೇ ಎಂಬುದು ಎಲ್ಲರ ಎಣಿಕೆಯಾಗಿತ್ತು. ಆದರೆ ಈಗ ಅದು ಎಲ್ಲ ಎಣಿಕೆಗಳನ್ನು ಸುಳ್ಳಾಗಿಸಿ ಎರಡೇ ದಿನಗಳಲ್ಲಿ ನೂರು ಕೋಟಿ ಬಾಚಿ ಹೆಮ್ಮಾರಿಯಂತೆ ಮುನ್ನುಗ್ಗುತ್ತಿದೆ.

ಪರಿಸ್ಥಿತಿ ಹೀಗಿರುವಾಗ ಚಲನಚಿತ್ರಮಂದಿರ ಮಾಲೀಕರು ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಬಳಿ ಹೋಗಿ, 'ಮಾರಿ' ಚಿತ್ರದ ಬಿಡುಗಡೆಯನ್ನು ಮೂಂದೂಡುವಂತೆ ಮನವಿ ಮಾಡಲು ಮುಂದಾಗಿದ್ದಾರಂತೆ.

ಆದುದರಿಂದ 'ಬಾಹುಬಲಿ' ಎಂಬ ಹೆಮ್ಮಾರಿ ತಮಿಳು 'ಮಾರಿ' ಮುನ್ನುಗ್ಗಲು ದಾರಿ ಮಾಡಿಕೊಡುವುದೇ ಅಥವಾ 'ಮಾರಿ' ಇನ್ನೂ ಸ್ವಲ ದಿನ ಮೌನಕ್ಕೆ ಶರಣಾಗಬೇಕಾದೀತೆ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT