ಗಿರೀಶ್ ಕಾಸರವಳ್ಳಿ(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಜು.25 ರಿಂದ ಭಾರತೀಯ ವಿದ್ಯಾಭವನದದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರಗಳ ಚಿತ್ರೋತ್ಸವ

ಗಿರೀಶ್ ಕಾಸರವಳ್ಳಿ ಅವರ ಚಿತ್ರೋತ್ಸವವನ್ನು ಜು. 25 ರಿಂದ 29 ರವರೆಗೆ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು: ಗಿರೀಶ್ ಕಾಸರವಳ್ಳಿ ಅವರ 10 ಚಿತ್ರಗಳ ಚಿತ್ರೋತ್ಸವವನ್ನು ಜು. 25 ರಿಂದ 29 ರವರೆಗೆ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಚಿತ್ರೋತ್ಸವ ಉದ್ಘಾಟನೆ ದಿನ ಬೆಳಿಗ್ಗೆ 10 :30 ರಿಂದ ರಾತ್ರಿ 8 ಗಂಟೆ ವರೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಗುಲಾಬಿ ಟಾಕೀಸ್ ನಾಯಿ ನೆರಳು, ಮತ್ತು ಕ್ರೌರ್ಯ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಜು.26 ರ ಬೆಳಿಗ್ಗೆ 10 :30 ರಿಂದ ರಾತ್ರಿ 8ರವರೆಗೆ ತಾಯಿ ಸಾಹೇಬ, ಘಟಶ್ರಾದ್ಧ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಅಂತೆಯೇ ಜು.27 ರ ಮಧ್ಯಾಹ್ನ 3.30 ರಿಂದ ರಾತ್ರಿ 8ರವರೆಗೆ ತಬರನ ಕಥೆ ಮತ್ತು ದ್ವೀಪ ಚಲನಚಿತ್ರ, ಜು.28 ರಂದು ಕನಸೆಂಬ ಕುದುರೆಯನೇರಿ, ಹಸೀನಾ ಹಾಗೂ ಜು.29 ರಂದು ಅದೂರು ಗೋಪಾಲಕೃಷ್ಣ ಚಲನಚಿತ್ರಗಳು ಪ್ರದರ್ಶನವಾಗಲಿವೆ. ಇದರೊಂದಿಗೆ ಪ್ರತಿದಿನ ಚಲನಚಿತ್ರ ತಜ್ಞರು ಮತ್ತು ವಿಮರ್ಶಕರು ಒಳಗೊಂಡಂತೆ ಚರ್ಚೆ ಸಂವಾದ ನಡೆಯಲಿದೆ.

ಚಲನಚಿತ್ರ ಪ್ರದರ್ಶನದೊಂದಿಗೆ ಪ್ರತಿದಿನ ಚಲನಚಿತ್ರ ತಜ್ಞರು ಮತ್ತು ವಿಮರ್ಶಕರು ಪಾಲ್ಗೊಳ್ಳುವ ಚರ್ಚೆ-ಸಂವಾದ ನಡೆಯುತ್ತವೆ. ಕನ್ನಡ ಚಿತ್ರರಂಗದ ಪ್ರತಿಭಾವಂತರ ಚಿತ್ರೋತ್ಸವ ಏರ್ಪಡಿಸುವ ನಡೆಯನ್ನು ಭಾರತೀಯ ವಿದ್ಯಾಭವನ ಕಳೆದವರ್ಷ ಟಿ.ಎಸ್. ನಾಗಾಭರಣರ 14 ವೈವಿಧ್ಯಮಯ ಚಿತ್ರಗಳ ಚಿತ್ರೋತ್ಸವದೊಂದಿಗೆ ಪ್ರಾರಂಭಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT