ಚಾಲೆಂಜಿಂಗ್ ಸ್ಟಾರ್ ದರ್ಶನ್ 
ಸಿನಿಮಾ ಸುದ್ದಿ

ನಿರ್ದೇಶಕನಿಲ್ಲದೆ ಮುಂದುವರೆದ 'ಐರಾವತ' ಚಿತ್ರೀಕರಣ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಐರಾವಾತ' ಸಿನೆಮಾದ ಪರಿಚಯಾತ್ಮಕ ಹಾಡಿನ ಚಿತ್ರೀಕರಣ ೧೦೦ ಜನ ಹಿನ್ನಲೆ ನೃತ್ಯಕಾರರೊಂದಿಗೆ ಇತ್ತೀಚೆಗಷ್ಟೇ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಐರಾವಾತ' ಸಿನೆಮಾದ ಪರಿಚಯಾತ್ಮಕ ಹಾಡಿನ ಚಿತ್ರೀಕರಣ ೧೦೦ ಜನ ಹಿನ್ನಲೆ ನೃತ್ಯಕಾರರೊಂದಿಗೆ ಇತ್ತೀಚೆಗಷ್ಟೇ ಮುಗಿದಿದೆ. ಜುಲೈ ೧೭ರಂದು ನಿರ್ದೇಶಕ ಎ ಪಿ ಅರ್ಜುನ್ ಅವರ ಅನುಪಸ್ಥಿತಿಯಲ್ಲೇ ಸ್ವಿಟ್ಸರ್ಲ್ಯಾಂಡ್ ಗೆ ತೆರಳಿ ಚಿತ್ರೀಕರಣ ಮುಗಿಸಿದ್ದಾರೆ. ನಟ ದರ್ಶನ, ನಾಯಕ ನಟಿ ಊರ್ವಶಿ ರೌಟೇಲ ಹಾಗೂ ನೃತ್ಯ ನಿರ್ದೇಶಕ ಕಲಿ ಮಾಸ್ತರ್ ಮತ್ತಿತರ ಸಹ ನಿರ್ದೇಶಕರೊಂದಿಗೆ ಹಿಮ ಪರ್ವತ ನಾಡಿನಲ್ಲಿ ಉಳಿದೆರಡು ಹಾಡುಗಳ ಚಿತ್ರೀಕರಣ ಮುಗಿಸಲಿದ್ದಾರಂತೆ.

ಎ ಪಿ ಅರ್ಜುನ್ ಮತ್ತು ನಟ ದರ್ಶನ್ ಅವರ ನಡುವಿನ ಭಿನಾಭಿಪ್ರಾಯ ತೀವ್ರ ಮಾತಿನ ಚಕಮಕಿಗೆ ಎಡೆಮಾಡಿಕೊಟ್ಟಿತ್ತು. ಇದು ಎ ಪಿ ಅರ್ಜುನ್ ಅವರನ್ನು ದೂರ ಇಡುವ ಮಟ್ಟಕ್ಕೆ ಬೆಳೆದಿದೆ ಎಂದು ತಿಳಿದುಬಂದಿದೆ.

ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿರುವ ನಿರ್ದೇಶಕ ತುರ್ತು ಕೆಲಸದಿಂದ ಚಿತ್ರೀಕರಣದಿಂದ ದೂರ ಉಳಿಯಬೇಕಾಗಿ ಬಂತು ಎಂದಿದ್ದಾರೆ. "ಚಿತ್ರೀಕರಣದ ನಂತರದ ಕೆಲಸಗಳು ಬೇಕಾದಷ್ಟಿದ್ದವು ಆದುದರಿಂದ ನಾನು ಇಲ್ಲೇ ಉಳಿದೆ ಎಂದಿದ್ದಾರೆ. ಎಡಿಟಿಂಗ್ ನಲ್ಲಿ ನಾನು ನಿರತನಾಗಿದ್ದೇನೆ" ಎನ್ನುತ್ತಾರೆ ಅರ್ಜುನ್.

ಸಂದೇಶ್ ನಾಗರಾಜ್ ಈ ಸಿನೆಮಾದ ನಿರ್ಮಾಪಕ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT