ಬಾಹುಬಲಿ ನಾಯಕ ನಟ ಪ್ರಭಾಸ್ 
ಸಿನಿಮಾ ಸುದ್ದಿ

ಮೂರು ವರ್ಷದ ಸತತ ದುಡಿಮೆಯ ನಂತರ ಯೂರೋಪ್ ಪ್ರವಾಸ ಹೊರಟ ಪ್ರಭಾಸ್

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿಗೆ ಮೂರು ವರ್ಷಗಳ ಕಾಲ ಸತತ ಬಸವಳಿದ ನಂತರ ಈಗ ನಟ ಪ್ರಭಾಸ್ ಅವರು ರಜೆ ತೆಗೆದುಕೊಂಡು ತಮ್ಮ

ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿಗೆ ಮೂರು ವರ್ಷಗಳ ಕಾಲ ಸತತ ಬಸವಳಿದ ನಂತರ ಈಗ ನಟ ಪ್ರಭಾಸ್ ಅವರು ರಜೆ ತೆಗೆದುಕೊಂಡು ತಮ್ಮ ಗೆಳೆಯರೊಂದಿಗೆ ಯೂರೋಪ್ ಪ್ರವಾಸ ಮಾಡಲಿದ್ದಾರಂತೆ.

ವರದಿಗಳ ಪ್ರಕಾರ ರಾಜಮೌಳಿ ಕೂಡ ಕುಟುಂಬದೊಂದಿಗೆ ರಜೆ ತೆಗೆದುಕೊಂಡು ಪ್ರವಾಸಕ್ಕೆ ಹೋಗಲಿದ್ದಾರಂತೆ.

'ಬಾಹುಬಲಿ' ಸಿನೆಮಾದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿರುವ ಪ್ರಬಾಸ್, ಸಿನೆಮಾಗೆ ಸಿಕ್ಕಿರುವ ಯಶಸ್ಸಿನಿಂದ ಸಂತಸಗೊಂಡಿದ್ದು ಎಲ್ಲ ಶ್ರೇಯಸ್ಸು ಸಿನೆಮಾದ ಸ್ಕ್ರಿಪ್ಟ್ ಗೆ ಸಲ್ಲಬೇಕು ಎಂದಿದ್ದಾರೆ.

"ಸಿನೆಮಾದ ಎಲ್ಲ ನಟರಿಗಿಂತಲೂ ಸ್ಕ್ರಿಪ್ಟ್ ಉನ್ನತವಾದದ್ದು. ಸ್ಕ್ರಿಪ್ಟ್ ಚೆನ್ನಾಗಿದ್ದಲಿ ಮಾತ್ರ ಸಿನೆಮಾ ಗೆಲ್ಲುತ್ತದೆ, ನಾವು ನಟರು ಸ್ಕ್ರಿಪ್ಟ್ ಗೆ ಜೀವ ತುಂಬುತ್ತೇವೆ" ಎಂದು ತಿಳಿಸಿದ್ದಾರೆ.

ಬಾಹುಬಲಿಯ ಎರಡನೆ ಭಾಗದ ಚಿತ್ರೀಕರಣ ಕೂಡ ಸುಮಾರು ೪೦% ಸಂಪೂರ್ಣಗೊಂಡಿದೆಯಂತೆ.

"ನಾವು ಸೆಪ್ಟಂಬರ್ ನಲ್ಲಿ ಚಿತ್ರೀಕರಣ ಮತ್ತೆ ಪ್ರಾರಂಭಿಸಲಿದ್ದೇವೆ. ನನ್ನ ಶಕ್ತಿಯನ್ನು ನವೀಕರಿಸಲು ಕೆಲವು ದಿನಗಳ ರಜೆ ತೆಗೆದುಕೊಳ್ಳುತ್ತಿದ್ದೇನೆ. ರಾಜಮೌಳಿ ನಮ್ಮನ್ನು ಮತ್ತೆ ಸುಧೀರ್ಘ ಚಿತ್ರೀಕರಣಕ್ಕೆ ತೊಡಗಿಸಿಕೊಳ್ಳುತ್ತಾರೆ ಎಂದು ತಿಳಿದಿದೆ" ಎಂದು ಅವರು ತಿಳಿಸಿದ್ದಾರೆ.

೨೦೧೬ರಲ್ಲಿ ಬಾಹುಬಲಿ ೨ನೆ ಭಾಗ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT