ಎಸ್. ನಾರಾಯಣ್(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಎಸ್. ನಾರಾಯಣ್ ಗೆ ಪುಲಿ ಚಿತ್ರದ ವಿತರಣೆ ಹಕ್ಕು

ಸ್ಯಾಂಡಲ್ ವುಡ್ ನ ನಿರ್ದೇಶಕ ಎಸ್.ನಾರಾಯಣ್ ಇತ್ತೀಚೆಗೆ ಚಿತ್ರ ವಿತರಣೆಯ ಕೆಲಸವನ್ನೂ ಪ್ರಾರಂಭಿಸಿದ್ದಾರೆ.

ಸ್ಯಾಂಡಲ್ ವುಡ್ ನ ನಿರ್ದೇಶಕ ಎಸ್.ನಾರಾಯಣ್ ಅವರನ್ನು ನಿರ್ದೇಶಕ, ನಟ, ಬರಹ, ಸಂಯೋಜನೆ ಮತ್ತು ನಿರ್ಮಾಣ ಹೀಗೆ ವಿವಿಧ ವೃತ್ತಿಯಲ್ಲಿ ನೋಡಿದ್ದೀರ, ಹಲವರಿಗೆ ಗೊತ್ತಿಲ್ಲದ ವಿಷಯವೇನೆಂದರೆ ಅವರು ಇತ್ತೀಚೆಗೆ ಚಿತ್ರ ವಿತರಣೆಯ ಕೆಲಸವನ್ನೂ ಪ್ರಾರಂಭಿಸಿದ್ದಾರೆ.

ಬಹುಮುಖಪ್ರತಿಭೆ ಎಸ್. ನಾರಾಯಣ್, ತಮಿಳಿನ ಬಹುನಿರೀಕ್ಷಿತ 'ಪುಲಿ' ಚಿತ್ರದ ವಿತರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಕರ್ನಾಟಕದಲ್ಲಿ ಪುಲಿ ಚಿತ್ರದ ವಿತರಣೆ ಮಾಡಲು ಸುದೀಪ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂಬುದೂ ಒಂದು ಕಾರಣವಾಗಿದೆ. 130 ಕೋಟಿ ರೂಪಾಯಿ ವೆಚ್ಚದಲ್ಲಿ ಪುಲಿ ಚಿತ್ರ ನಿರ್ಮಾಣವಾಗಿದ್ದು ವಿಜಯ್, ಶ್ರೀದೇವಿ, ಆದಿತ್ಯ, ಪ್ರಭು, ಶ್ರುತಿ ಹಾಸನ್, ಹನ್ಸಿಕ, ನಂದಿತ ಶ್ವೇತ ಮುಂತಾದ ತಾರಾಗಣವನ್ನು ಹೊಂದಿದೆ.

ಬಾಹುಬಲಿ ಚಿತ್ರದಲ್ಲಿ ಯೋಧನ ಪಾತ್ರ ಮಾಡಿದ್ದ ಸುದೀಪ್, ಪುಲಿ ಚಿತ್ರದಲ್ಲೂ ಮಿಂಚಿದ್ದಾರೆ. ಸುದೀಪ್ ವಿರುದ್ಧದ ಪಾತ್ರದಲ್ಲಿ ವಿಜಯ್ ಅಭಿನಯಿಸಿರುವುದು ಪುಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ

  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT