ನಟಿ ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

ರಾಗಿಣಿ ಜೊತೆ ಕೆಲಸ ಮಾಡುವುದಿಲ್ಲ: ನಿರ್ದೇಶಕ ರಾಜು

'ನಾಟಿ ಕೋಳಿ' ಸುತ್ತ ಇದ್ದ ವಿವಾದಗಳು ಒಂದು ತಿಂಗಳು ಕಳೆದರೂ ಬಗೆಹರಿಯುವ ಯಾವುದೇ ಲಕ್ಷಣಗಳಿಲ್ಲ. ಈಗ ಅಂತಿಮವಾಗಿ ನಿರ್ದೇಶಕ ಶ್ರೀನಿವಾಸ ರಾಜು

ಬೆಂಗಳೂರು: 'ನಾಟಿ ಕೋಳಿ' ಸುತ್ತ ಇದ್ದ ವಿವಾದಗಳು ಒಂದು ತಿಂಗಳು ಕಳೆದರೂ ಬಗೆಹರಿಯುವ ಯಾವುದೇ ಲಕ್ಷಣಗಳಿಲ್ಲ. ಈಗ ಅಂತಿಮವಾಗಿ ನಿರ್ದೇಶಕ ಶ್ರೀನಿವಾಸ ರಾಜು ಅವರು ನಟಿ ರಾಗಿಣಿ ದ್ವಿವೇದಿ ಅವರಿಲ್ಲದೆ ಸಿನೆಮಾ ಚಿತ್ರೀಕರಣ ಮುಂದುವರೆಸಲು ನಿರ್ಧರಿಸಿದ್ದಾರೆ.

ನಟಿ ತನ್ನ ಬಗ್ಗೆ ಸಲಿಗೆ ತೆಗೆದುಕೊಂಡಿರುವುದಕ್ಕೆ ಕುಪಿತರಾಗಿರುವ ರಾಜು, ನಿರ್ಮಾಪಕ ವೆಂಕಟ್ ಅವರನ್ನು ಭೇಟಿ ಮಾಡಿದ್ದಾರೆ. ರಾಗಿಣಿ ಅವರು ನಟಿಸಲು ಹಲವಾರು ಷರತ್ತುಗಳನ್ನು ವಿಧಿಸಿದ್ದಾರೆ ಎಂದು ವೆಂಕಟ್ ತಿಳಿಸಿದರು. ಅವರಿಗೆ ಪ್ರಚಾರ ವಿನ್ಯಾಸದ ಮೇಲೆ ನಿಯಂತ್ರಣ ಬೇಕಂತೆ. ಇದು ಸಾಧ್ಯವಿಲ್ಲ. ಆದುದರಿಂದ ನಾನು ಅವರ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಿರ್ಮಾಪಕರಿಗೆ ತಿಳಿಸಿದ್ದೇನೆ ಎನ್ನುತ್ತಾರೆ ರಾಜು.

ನನ್ನ ನಿರ್ದೇಶನ ಸಾಮರ್ಥ್ಯದ ಬಗ್ಗೆ ಅವರಿಗೆ ಸಂದೇಹಗಳಿವೆಯಂತೆ. ಇದು ಒರಟಾಗಿ ಕೇಳಬಹುದು ಆದರೆ ಅವರು ಕೆಲವ ಒಬ್ಬ ನಟಿ. ಅವರಿಗೆ ಪ್ರಚಾರದ ಮೇಲೆ ನಿಯಂತ್ರಣ ನಾನು ಬಿಟ್ಟುಕೊಡುತ್ತೇನೆ ಎಂದು ಹೇಗೆ ತಿಳಿದರೋ? ನನಗೆ ಬೇರೆ ನಟಿಯನ್ನು ಹಾಕಿಕೊಂಡು ಸಿನೆಮಾ ಮಾಡುವುದು ಗೊತ್ತು. ನಾಟಿ ಕೋಳಿ ಸಿನೆಮಾ ಬರೆದು, ಚಿತ್ರತಂಡವನ್ನೆಲ್ಲಾ ಒಗ್ಗೂಡಿಸಿದ ಮೇಲೆ ನನಗೆ ಫಲ ಸಿಗುವುದು ಹೀಗೆ. ವೆಂಕಟ್ ಅವರು ಮನವಿ ಮಾಡಿದ್ದಕ್ಕೆ ರಾಗಿಣಿ ಅವರಿಗೆ ಒಂದು ವಾರದ ಹಿಂದೆ ಮತ್ತೆ ಸ್ಕ್ರಿಪ್ಟ್ ಓದಿದ್ದೇನೆ. ಆದರೂ ಅವರು ತೊಂದರೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುತ್ತಾರೆ ರಾಜು.

ಈಗ ನೂತನ ನಾಯಕ ನಟಿಯ ಶೋಧನೆಯಲ್ಲಿದ್ದರೆ ಶ್ರೀನಿವಾಸ್. "ಮೊದಲ ದಿನದ ಫೋಟೊ ಶೂಟ್ ನಿಂದಲೂ ಎಲ್ಲ ತೊಂದರೆಗಳಿಗೆ ರಾಗಿಣಿಯವರೇ ಕಾರಣ ಎಂದು ತಿಳಿದಿತ್ತು. ಆದರೆ ಅವರನ್ನು ರಕ್ಷಿಸಲು ಬಹಳ ಪ್ರಯತ್ನ ಪಟ್ಟೆ, ಇನ್ನು ಸಾಧ್ಯವಿಲ್ಲ. ಅವರಿಲ್ಲದೆ ಈ ಸಿನೆಮಾ ಸಾಧ್ಯವಿಲ್ಲ ಎಂದು ತಿಳಿದರೆ ಅವರ ತಪ್ಪದು. ಹಾಗೆಯೇ ವೆಂಕಟ್ ಅವರಿಗೆ ರಾಗಿಣಿಯೇ ನಾಯಕಿಯಾಗಬೇಕೆಂದರೆ ಅವರು ಬೇರೆ ನಿರ್ದೇಶಕರನ್ನು ಹುಡುಕಬೇಕು. ಅವರು ನನ್ನ ಕಡೆಗಿದ್ದರೂ ಈ ಪಾತ್ರಕ್ಕೆ ಸೂಕ್ತ ನಟಿ ಸಿಗುವವರೆಗೂ ಚಿತ್ರೀಕರಣ ಮುಂದೂಡಲು ನಾನು ಸಿದ್ಧ. ಆದರೆ ರಾಗಿಣಿಯವರನ್ನು ಹೊರಹಾಕಲಾಗಿದೆ" ಎನ್ನುತ್ತಾರೆ ನಿರ್ದೇಶಕರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT