ಬಿಜೆಪಿ ಸದಸ್ಯ, ನಟ ಗಜೇಂದ್ರ ಚೌಹಾನ್ 
ಸಿನಿಮಾ ಸುದ್ದಿ

ಎಫ್ ಟಿ ಐ ಐ ಮುಖ್ಯಸ್ಥ ನೇಮಕ ವಿವಾದ: ನನಗೊಂದು ಅವಕಾಶ ಕೊಡಿ ಎಂದ ಗಜೇಂದ್ರ ಚೌಹಾನ್

ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್ ಟಿ ಐ ಐ) ವಿದ್ಯಾರ್ಥಿಗಳು ನಟ ಗಜೇಂದ್ರ ಚೌಹಾನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿರುವ ನಡೆಯನ್ನು ವಿರೋಧಿಸಿ ಅನಿರ್ಧಿಷ್ಟ ಕಾಲದವರೆಗೆ ಪ್ರತಿಭಟನೆ ಮಾಡುವ

ನವದೆಹಲಿ: ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್ ಟಿ ಐ ಐ) ವಿದ್ಯಾರ್ಥಿಗಳು ನಟ ಗಜೇಂದ್ರ ಚೌಹಾನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿರುವ ನಡೆಯನ್ನು ವಿರೋಧಿಸಿ ಅನಿರ್ಧಿಷ್ಟ ಕಾಲದವರೆಗೆ ಪ್ರತಿಭಟನೆ ಮಾಡುವ ವರದಿ ಬಿತ್ತರವಾಗುತ್ತಿದ್ದಂತೆ ನನ್ನ ಬಗ್ಗೆ ತೀರ್ಪು ನೀಡುವುದಕ್ಕೂ ಮುಂಚೆ ನನಗೆ ಅವಕಾಶ ನೀಡಿ ಎಂದು ಬಿಜೆಪಿ ಸದಸ್ಯ, ನಟ ಗಜೇಂದ್ರ ಚೌಹಾನ್ ತಿಳಿಸಿದ್ದಾರೆ.

ಯಾವುದೇ ತೀರ್ಮಾನಕ್ಕೆ ಬರುವುದಕ್ಕೆ ಮುಂಚಿತವಾಗಿ ನನ್ನ ಜೊತೆ ಕೂತು ಚರ್ಚಿಸಿ ಎಂದು ವಿದ್ಯಾರ್ಥಿ ಸಂಘಟನೆಗೆ ಕರೆ ಕೊಟ್ಟಿದ್ದಾರೆ.

"ನನ್ನ ಹಿನ್ನಲೆ ತಿಳಿಯದೆ, ನನ್ನ ಬಗ್ಗೆ ತಿಳಿಯದೆ, ನನ್ನ ಸಾಮರ್ಥ್ಯವನ್ನು ತಿಳಿಯದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

"ನನ್ನ ಎದುರು ಕೂತು ಮಾತನಾಡಿ. ಆಗಲೂ ಕೂಡ ನಿಮಗೆ ಬೇಡವೆನ್ನಿಸಿದರೆ ಬೇರೆ ಆಯ್ಕೆ ಬಗ್ಗೆ ಚಿಂತಿಸಬಹುದು. ನನ್ನ ಹೆಸರನ್ನು ಸೂಚಿಸಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತನ್ನದೇ ಆದ ಸಮಯವನ್ನು ತೆಗೆದುಕೊಂಡಿದೆ. ನನ್ನ ಹಿನ್ನಲೆ ಮತ್ತು ಸಾಮರ್ಥ್ಯದ ಬಗ್ಗೆ ಅವರು ಪರೀಕ್ಷೆ ನಡೆಸಿರುತ್ತಾರೆ. ನಾನು ಪಕ್ಷದ ಜೊತೆಯಲ್ಲಿದ್ದೇನೆ ಎನ್ನುವುದಷ್ಟೇ ಅಲ್ಲ, ಬೇರೆಯ ಸಂಗತಿಗಳೂ ಇವೆ" ಎಂದು ಚೌಹಾನ್ ಟೈಮ್ಸ್ ನೌಗೆ ತಿಳಿಸಿದ್ದಾರೆ.

ಬಿ ಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ 'ಯುಧಿಷ್ಠಿರ' ಪಾತ್ರದಲ್ಲಿ ಚೌಹಾನ್ ಪ್ರಖ್ಯಾತರಾಗಿದ್ದರು. 'ಭಾಗಬನ್', 'ತುಮಕೋ ನ ಭೂಲ್ ಪಾಯೆಂಗೆ' ಇತ್ಯಾದಿ ಚಲನಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕೂಡ ನಟಿಸಿದ್ದಾರೆ.

ತಮ್ಮ ಕೆಲಸ ಮತ್ತು ಸಾಮರ್ಥ್ಯದಿಂದ ಸಂಸ್ಥೆಗೆ ನ್ಯಾಯ ಒದಗಿಸಬಲ್ಲ ಮತ್ತೊಬ್ಬ ಅಧ್ಯಕ್ಷನನ್ನು ಕೂಡಲೆ ನೇಮಿಸುವಂತೆ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT