ಹ್ಯಾಪಿ ಬರ್ತ್ ಡೇ ಸಿನೆಮಾ ಭಿತ್ತಿ ಚಿತ್ರ 
ಸಿನಿಮಾ ಸುದ್ದಿ

ಮತ್ತೊಬ್ಬ ರಾಜಕಾರಣಿಯ ಮಗ ಸಿನೆಮಾ ಪಾದಾರ್ಪಣೆಗೆ ಸಿದ್ಧ

ಈ ವಸಂತದಲ್ಲಿ ರಾಜಕಾರಿಣಿಗಳ ಮಕ್ಕಳ ದಂಡೇ ಕನ್ನಡ ಚಿತ್ರೋದ್ಯಮಕ್ಕೆ ಬರಲು ಕಾತರಿಸುತ್ತಿದೆ...

ಬೆಂಗಳೂರು: ಈ ವಸಂತದಲ್ಲಿ ರಾಜಕಾರಿಣಿಗಳ ಮಕ್ಕಳ ದಂಡೆ ಕನ್ನಡ ಚಿತ್ರೋದ್ಯಮಕ್ಕೆ ಬರಲು ಕಾತರಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಮತ್ತು ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಈಗಾಗಲೇ ಚಲನಚಿತ್ರ ಪಾದಾರ್ಪಣೆಯನ್ನು ಘೋಷಿಸಿದ್ದಾರೆ. ಈಗ ಇವರನ್ನು ಸೇರಿಕೊಳ್ಳಲು ಸಿದ್ಧರಾಗುತ್ತಿರುವುದು ಬೇರ್ಯಾರೂ ಅಲ್ಲ, ಕುಮಾರಸ್ವಾಮಿಯವರ ಸಹೋದ್ಯೋಗಿ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್.

ನಿರ್ದೇಶಕ ಮಹೇಶ್ ಸುಖಧರೆ ಅವರ '"ಹ್ಯಾಪಿ ಬರ್ತ್ ಡೇ" - ಮಗ್ನೇ ಐತೆ ನಿಂಗೆ' ಸಿನೆಮಾದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಸಚಿನ್ ನಟನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಸುಖಧರೆ ಅವರ ಸ್ವಂತ ಸಂಸ್ಥೆಯಡಿಯೇ ನಿರ್ಮಾಣವಾಗುತ್ತಿರುವ ಈ ಸಿನೆಮಾಗೆ ಹಿರಿಯ ನಟರಾದ ಅಂಬರೀಶ್, ಶಿವರಾಜಕುಮಾರ್, ದರ್ಶನ್ ಮತ್ತು ಯಶ್ ಅವರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ.

ಸಿನೆಮಾ ಉದ್ಯಮಕ್ಕೆ ಬಂದಿದ್ದು ಅನಿರೀಕ್ಷಿತ ಎನ್ನುತ್ತಾರೆ ಸಚಿನ್. "ಇಲ್ಲಿರುವ ಸ್ಪರ್ಧೆಯ ಬಗ್ಗೆ ಮಾತನಾಡುವುದಕ್ಕೆ ಇದಿನ್ನೂ ನನಗೆ ಆರಂಭ. ನಾನು ನನ್ನ ನಟನಾ ಕುಶಲತೆಯನ್ನು ತೋರಿಸುವತ್ತ ಗಮನ ಹರಿಸಲಿದ್ದೇನೆ" ಎನ್ನುತ್ತಾರೆ ಸಚಿನ್.

ಕನ್ನಡ ಚಿತ್ರರಂಗದ ಇತರ ನಟರಿಂದ ಸ್ಫೂರ್ತಿ ಪಡೆದಿದ್ದೇನೆ ಎನ್ನುವ ಸಚಿನ್ "ನಾನು ದರ್ಶನ್ ಅವರಿಂಗ ಆಕ್ಷನ್ ಕಲಿತೆ. ಸುದೀಪ್ ಅವರಿಂದ ಸಮರ್ಪಿಸಿಕೊಳ್ಳುವುದನ್ನು ಕಲಿತೆ. ಪುನೀತ್ ಅವರಿಂದ ಸ್ಟೈಲ್, ಯಶ್ ಅವರಿಂದ ಪರಿಪೂರ್ಣತೆ ಮತ್ತು ಶಿವರಾಜ್ ಕುಮಾರ್ ಅವರಿದ ಶಕ್ತಿಯುತವಾಗಿರುವುದನ್ನು ಕಲಿತೆ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT