ನಟ ಪಂಜು 
ಸಿನಿಮಾ ಸುದ್ದಿ

'ಗೀತ ಬ್ಯಾಂಗಲ್ ಸ್ಟೋರ್ಸ್' ಗೆ ಯೋಗಾನುಯೋಗ

ವಿತರಕರಿಲ್ಲದೆ ನೆನೆಗುದಿಗೆ ಬಿದ್ದಿದ್ದ 'ಗೀತ ಬ್ಯಾಂಗಲ್ ಸ್ಟೋರ್ಸ್' ಸಿನೆಮಾಗೆ ಮುಕ್ತಿ ನೀಡಿದ್ದಾರೆ ನಿರ್ದೇಶಕ-ನಟ-ವಿತರಕ ಯೋಗರಾಜ್ ಭಟ್.

ಬೆಂಗಳೂರು: ವಿತರಕರಿಲ್ಲದೆ ನೆನೆಗುದಿಗೆ ಬಿದ್ದಿದ್ದ 'ಗೀತ ಬ್ಯಾಂಗಲ್ ಸ್ಟೋರ್ಸ್' ಸಿನೆಮಾಗೆ ಮುಕ್ತಿ ನೀಡಿದ್ದಾರೆ ನಿರ್ದೇಶಕ-ನಟ-ವಿತರಕ ಯೋಗರಾಜ್ ಭಟ್. 'ಯೋಗರಾಜ್ ಫಿಲಂಸ್' ಮೂಲಕ ಮಂಜು ಮಿತ್ರ ನಿರ್ದೇಶನದ ಚೊಚ್ಚಲ ಚಲನಚಿತ್ರ ಜುಲೈ ನಲ್ಲಿ ತೆರೆ ಕಾಣಲಿದೆ.

೧೦ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಟ ಪಂಜು ಸಿನೆಮಾ ಬಿಡುಗಡೆ ಕಾಣುತ್ತಿರುವುದಕ್ಕೆ ಉತ್ಸುಕರಾಗಿದ್ದಾರೆ. ತಮಗೆ ಪಾತ್ರ ದೊರಕಿಸಿಕೊಡಲು ನೆರವಾದ ನಟ ಲೂಸ್ ಮಾದ ಅಲಿಯಾಸ್ ಯೋಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ಗ್ರಾಮೀಣ ಹಿನ್ನಲೆಯ ಚಿತ್ರ. ಜೀವನಕ್ಕಾಗಿ ರೇಶ್ಮೆ ಹುಳು ಸಾಕಾಣೆ ಮಾಡುವ ಯುವಕ ಮತ್ತು ಅವನ ಕುಟುಂಬದ ಸುತ್ತ ಕಥೆ ಸುತ್ತುತ್ತದೆ ಎನ್ನುತ್ತಾರೆ ಪಂಜು.

"ಹೆಸರಿನಿಂದ ಇದು ನಟಿ ಕೇಂದ್ರಿತ ಸಿನೆಮಾ ಎಂದು ತಪ್ಪು ತಿಳಿಯಬಹುದು. ಆದರೆ ಬಳೆ ಅಂಗಡಿಹಾಕಿಕೊಡುವ ಯುವಕನೇ ಸಿನೆಮಾದ ಹೀರೋ. 'ಗೀತಾ ಬ್ಯಾಂಗಲ್ ಸ್ಟೋರ್ಸ್' ಅಂಗಡಿ ಪ್ರಾಂಭಿಸಲು ಅವನು ಪಡುವ ಕಷ್ಟ ಕೋಟಲೆಗಳೇ ಸಿನೆಮಾದ ಹೂರಣ" ಎನ್ನುತ್ತಾರೆ ನಟ.

ಮಂಡ್ಯ ಮೂಲದ ಪಂಜು ತಮ್ಮ ಪದವಿ ಶಿಕ್ಷಣ ಪೂರ್ಣಗೊಳಿಸಲು ಬೆಂಗಳೂರಿಗೆ ಬಂದರಂತೆ. "ನನ್ನ ನಟನಾ ಆಸಕ್ತಿ ನನ್ನನ್ನು ಬೆನಕ ರಂಗ ಸಂಸ್ಥೆಯತ್ತ ಕರೆದೊಯ್ಯಿತು. ಅಲ್ಲಿಂದ ಧಾರಾವಾಹಿಗಳಿಗೆ ಜಿಗಿದೆ. ಮಿಲನ ಪ್ರಕಾಶ್ ಅವರ 'ಲಕುಮಿ'ಯಲ್ಲಿ ನನಗೆ ಮೊದಲ ಅವಕಾಶ ಸಿಕ್ಕಿದ್ದು. ಧಾರಾವಾಹಿಯಲ್ಲಿ ಹಳ್ಳಿ ಹುಡುಗನ ಪಾತ್ರವನ್ನು ಮೆಚ್ಚಿ ನಿರ್ದೇಶಕರ ಸಹೋದರ ನನ್ನ ಹೆಸರನ್ನು ಮಂಜು ಮಿತ್ರ ಅವರಲ್ಲಿ ಹೇಳಿದರು. ಅವರು ನನಗೆ ಪಾತ್ರ ನೀಡಿದರು, ನಂತರ ಸ್ಕ್ರಿಪ್ಟ್ ಓದಿದ ಮೇಲೆ ಆ ಪಾತ್ರ ನನಗೆ ಏಕೆ ನೀಡಿದರು ಎಂದು ಅರ್ಥವಾಯಿತು" ಎನ್ನುತ್ತಾರೆ ಪಂಜು.

ಚಲನಚಿತ್ರದಲ್ಲಿ ಅಚ್ಯುತ್ ರಾವ್, ಭವ್ಯ ಮತ್ತು ವಿನಯ್ ಪ್ರಸಾದ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ ಮೈತ್ರಿ ಸಿನೆಮಾದ ನಿರ್ದೇಶಕ ಬಿ ಎಂ ಗಿರಿರಾಜ್ ಖಳನಾಯಕನ ಪಾತ್ರ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT