ಸಿನಿಮಾ ಸುದ್ದಿ

ತೇಜಸ್ವಿನಿಗೆ ಸಿಹಿ ಸುದ್ದಿ

Sumana Upadhyaya

ತೇಜಸ್ವಿನಿ ಗೊತ್ತಲ್ವಾ? ಕನ್ನಡದ ಹುಡುಗಿ ಅದೇ 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಮಗಳಾಗಿ  ಕಾಣಿಸಿಕೊಂಡಾಕೆ.

ಈಕೆ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿದ್ದು ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಹಾಗಂತ, ತೇಜಸ್ವಿನಿ ಎಂದೂ ತಮ್ಮ ಬಣ್ಣದ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಸಿಕ್ಕ ಅವಕಾಶಗಳನ್ನು ಒಪ್ಪಿ ನಟಿಸುತ್ತಲೇ ಬಂದಿದ್ದಾಳೆ. ಮೊನ್ನೆ ಪ್ರಭುದೇವ್ ಜತೆ ತೆಗೆಸಿಕೊಂಡ ಫೋಟೋವೊಂದು ಸುಮ್ಮನೆ ಗಾಸಿಪ್ ಗೆ ಕಾರಣವಾಯಿತು.

ಇದೀಗ ಬಹಳ ದಿನಗಳ ಬಳಿಕ ಮತ್ತೆ ಸುದ್ದಿಯಾಗಿದ್ದಾರೆ. ಹಾಗಂತ ಇನ್ಯಾರದೋ ಜತೆ ಫೋಟೋ ತೆಗೆಸಿಕೊಂಡು ಸುದ್ದಿಯಾಗಿದ್ದಾರಾ ಅಂದುಕೊಳ್ಳಬೇಡಿ. ಅವರು ಹೊಸದೊಂದು ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅನ್ನೋದೇ ಹೊಸ ಸುದ್ದಿ.

ತೇಜಸ್ವಿನಿ ಈಗ ಖುಷಿಯಲ್ಲಿದ್ದಾರೆ, ಆ ಖುಷಿಗೆ ಕಾರಣ, ಈ ವಾರ ಅವರ ಅಭಿನಯದ ಗೂಳಿಹಟ್ಟಿ ತೆರೆ ಕಾಣುತ್ತಿದೆ. ಅಷ್ಟೇ ಅಲ್ಲ, ಅವರು ನಾಯಕಿಯಾಗಿ ಆಯ್ಕೆಯಾದ ಹೊಸ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಆಲ್ ದಿ ಬೆಸ್ಟ್ ತೇಜಸ್ವಿನಿ.

SCROLL FOR NEXT