ಜಿಗರ್​ಥಂಡಾ 
ಸಿನಿಮಾ ಸುದ್ದಿ

'ಜಿಗರ್​ಥಂಡಾ' ರಿಮೇಕ್ ನಲ್ಲಿ ರಾಹುಲ್, ರವಿ ಶಂಕರ್

ವೀಕ್ಷಕರು ಮತ್ತು ವಿಮರ್ಶಕರ ಸಮ ಮೆಚ್ಚಿಗೆ ಪಡೆದ ತಮಿಳು ಭೂಗತ-ಸಂಗೀತ ಚಲನಚಿತ್ರ 'ಜಿಗರ್​ಥಂಡಾ' ಕನ್ನಡಕ್ಕೂ ಬರಲಿದೆ. ರಾಹುಲ್ ಮತ್ತು ರವಿ ಶಂಕರ್ ಮುಖ್ಯ

ಚೆನ್ನೈ: ವೀಕ್ಷಕರು ಮತ್ತು ವಿಮರ್ಶಕರ ಸಮ ಮೆಚ್ಚಿಗೆ ಪಡೆದ ತಮಿಳು ಭೂಗತ-ಸಂಗೀತ ಚಲನಚಿತ್ರ 'ಜಿಗರ್ಥಂಡಾ' ಕನ್ನಡಕ್ಕೂ ಬರಲಿದೆ. ರಾಹುಲ್ ಮತ್ತು ರವಿ ಶಂಕರ್ ಮುಖ್ಯ ಪಾತ್ರಧಾರಿಗಳು. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನೆಮಾವನ್ನು ನಟ ಸುದೀಪ್ ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.

"ಮೂಲ ಸಿನೆಮಾದಲ್ಲಿ ಸಿದ್ದಾರ್ಥ್ ಪತ್ರವನ್ನು ರಾಹುಲ್ ಅವರೂ, ಬಾಬ್ಬಿ ಸಿಂಹ ಅವರ ಪಾತ್ರವನ್ನು ನಾನು ನಿರ್ವಹಿಸಲಿದ್ದೇವೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ" ಎಂದು ರವಿಶಂಕರ್ ತಿಳಿಸಿದ್ದಾರೆ.

ಮೂಲದಲ್ಲಿ ಲಕ್ಷ್ಮಿ ಮೆನನ್ ಮಾಡಿದ ಪಾತ್ರಕ್ಕೆ ಸಂಯುಕ್ತ ಹೊರನಾಡ್ ಆಯ್ಕೆಯಾಗಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರವಿಶಂಕರ್ "ನಾನು ಮೂಲ ಚಿತ್ರವನ್ನು ನೋಡಿದ್ದಾಗ ಸಿಂಹ ಅವರ ನಟನೆಯನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಅವರು ಆ ಪಾತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದರು. ನನ್ನ ನಟನಾ ಅನುಭವದೊಂದಿಗೆ ಈ ಪಾತ್ರಕ್ಕೆ ಹೊಸ ಆಯಾಮವನ್ನು ತರಲಿದ್ದೇನೆ" ಎನ್ನುತ್ತಾರೆ.

ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT