ಸಿನಿಮಾ ಸುದ್ದಿ

ಪಿಕೆ: ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಕ್ಷಮೆಯಾಚಿಸಿದ ಅಮೀರ್

Guruprasad Narayana

ಪಿಕೆ ಸಿನೆಮಾದ ನಿರ್ದೇಶಕ ನಿರ್ಮಾಪಕ ನಟ ಯಾರಿಗೂ ಯಾರ ಭಾವನೆಯನ್ನು ನೋಯಿಸುವ ಉದ್ದೇಶ ಇರಲಿಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್ ನೆನ್ನೆ ಕ್ಷಮೆಯಾಚಿಸಿದ್ದಾರೆ.

ಪಿಕೆ ಸಿನೆಮಾದ ಡಿವಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮೀರ್ "ಸಿನೆಮಾವನ್ನು ಬಹುತೇಕ ಮಂದಿ ಇಷ್ಟಪಟ್ಟಿದ್ದಾರೆ. ಈ ಸಿನೆಮಾ ಇಂದ ಒಬ್ಬನಿಗೆ ನೋವಾಗಿದ್ದರೆ ಕೂಡ ಅದಕ್ಕೆ ನನಗೆ ಬೇಸರವಿದೆ. ಏಕೆಂದರೆ ಅದು ನಮ್ಮ ಉದ್ದೇಶವಾಗಿರಲಿಲ್ಲ. ಇದು ಪ್ರಮುಖ ವಿಷಯ ಆದುದರಿಂದ ಹೇಳುತ್ತಿದ್ದೇನೆ. ಜನರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ" ಎಂದಿದ್ದಾರೆ.

ಬೇರೆ ಗ್ರಹದಿಂದ ಅನ್ಯಜೀವಿಯಾಗಿ ಬರುವ ಅಮೀರ್ ಖಾನ್, ದೇವರನ್ನು ಹುಡುಕುವ ನೆಪದಲ್ಲಿ ಹಲವು ಧರ್ಮಗಳ ರೀತಿ ರಿವಾಜುಗಳನ್ನು ಮತ್ತು ದೇವಮಾನವರನ್ನು ಸಿನೆಮಾದಲ್ಲಿ ಕುಚೋದ್ಯ ಮಾಡುತ್ತಾರೆ. ಇದರಿಂದ ಕುಪಿತಗೊಂಡಿದ್ದ ಹಲವಾರು ಹಿಂದು ಸಂಘಟನೆಗಳು ಪ್ರತಿಭಟಿಸಿದ್ದಲ್ಲದೆ, ಸಿನೆಮಾದ ನಿಷೇಧಕ್ಕೆ ಆಗ್ರಹಿಸಿದ್ದರು. ಹೀಗಿದ್ದು ಸಿನೆಮಾ ಗಲ್ಲಾಪೆಟ್ಟಿಯಲ್ಲಿ ಹಣ ದೋಚಿತ್ತು.

SCROLL FOR NEXT