ಪಿಕೆ 
ಸಿನಿಮಾ ಸುದ್ದಿ

ಪಿಕೆ: ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಕ್ಷಮೆಯಾಚಿಸಿದ ಅಮೀರ್

ಪಿಕೆ ಸಿನೆಮಾದ ನಿರ್ದೇಶಕ ನಿರ್ಮಾಪಕ ನಟ ಯಾರಿಗೂ ಯಾರ ಭಾವನೆಯನ್ನು ನೋಯಿಸುವ ಉದ್ದೇಶ ಇರಲಿಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್

ಪಿಕೆ ಸಿನೆಮಾದ ನಿರ್ದೇಶಕ ನಿರ್ಮಾಪಕ ನಟ ಯಾರಿಗೂ ಯಾರ ಭಾವನೆಯನ್ನು ನೋಯಿಸುವ ಉದ್ದೇಶ ಇರಲಿಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್ ನೆನ್ನೆ ಕ್ಷಮೆಯಾಚಿಸಿದ್ದಾರೆ.

ಪಿಕೆ ಸಿನೆಮಾದ ಡಿವಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮೀರ್ "ಸಿನೆಮಾವನ್ನು ಬಹುತೇಕ ಮಂದಿ ಇಷ್ಟಪಟ್ಟಿದ್ದಾರೆ. ಈ ಸಿನೆಮಾ ಇಂದ ಒಬ್ಬನಿಗೆ ನೋವಾಗಿದ್ದರೆ ಕೂಡ ಅದಕ್ಕೆ ನನಗೆ ಬೇಸರವಿದೆ. ಏಕೆಂದರೆ ಅದು ನಮ್ಮ ಉದ್ದೇಶವಾಗಿರಲಿಲ್ಲ. ಇದು ಪ್ರಮುಖ ವಿಷಯ ಆದುದರಿಂದ ಹೇಳುತ್ತಿದ್ದೇನೆ. ಜನರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ" ಎಂದಿದ್ದಾರೆ.

ಬೇರೆ ಗ್ರಹದಿಂದ ಅನ್ಯಜೀವಿಯಾಗಿ ಬರುವ ಅಮೀರ್ ಖಾನ್, ದೇವರನ್ನು ಹುಡುಕುವ ನೆಪದಲ್ಲಿ ಹಲವು ಧರ್ಮಗಳ ರೀತಿ ರಿವಾಜುಗಳನ್ನು ಮತ್ತು ದೇವಮಾನವರನ್ನು ಸಿನೆಮಾದಲ್ಲಿ ಕುಚೋದ್ಯ ಮಾಡುತ್ತಾರೆ. ಇದರಿಂದ ಕುಪಿತಗೊಂಡಿದ್ದ ಹಲವಾರು ಹಿಂದು ಸಂಘಟನೆಗಳು ಪ್ರತಿಭಟಿಸಿದ್ದಲ್ಲದೆ, ಸಿನೆಮಾದ ನಿಷೇಧಕ್ಕೆ ಆಗ್ರಹಿಸಿದ್ದರು. ಹೀಗಿದ್ದು ಸಿನೆಮಾ ಗಲ್ಲಾಪೆಟ್ಟಿಯಲ್ಲಿ ಹಣ ದೋಚಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT