ಬೆಂಗಳೂರು: ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ಬಹುನಿರೀಕ್ಷಿತ ಚಿತ್ರ ತಡವಾಗಿಯಾದರೂ, ಈ ವಾರ ತೆರೆ ಕಾಣಲು ಸಿದ್ಧವಾಗಿದೆ. ಬಾಬು ಅವರ ಪುತ್ರ ಆದಿತ್ಯ ಮತ್ತು ನಟಿ ಸಂಜನಾ ನಟನೆಯ ಈ ಚಿತ್ರ ಬಾಬು ಆವರು ಸುಮಾರು ಒಂದು ದಶಕದ ನಂತರ ಬಿಡುಗಡೆ ಮಾಡುತ್ತಿರುವ ಚಿತ್ರ. ಅವರ ಹಿಂದಿನ ಸಿನೆಮಾ ಮೋಹಿನಿ ೨೦೦೬ರಲ್ಲಿ ಬಿಡುಗಡೆಯಾಗಿತ್ತು.
ಸದ್ಯಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಬಾಬು "ನಾನು ರೆಬೆಲ್ ಚಿತ್ರೀಕರಣ ಮಾಡುತ್ತಿರುವಾಗ ಅಮೆರಿಕಾಕ್ಕೆ ಹೋಗಬೇಕಾಗಿ ಬಂತು. ಅದು ಶೈಕ್ಷಣಿಕ ಪ್ರವಾಸ. ಇತ್ತೀಚಿನ ದಿನದ ಬೆಳವಣಿಗೆಯ ಗ್ರಾಫಿಕ್ಸ್ ಮತ್ತು ಚಲನಚಿತ್ರ ತಂತ್ರಜ್ಞಾನಗಳನ್ನು ತಿಳಿದುಬಂದೆ. ಜೇಮ್ಸ್ ಕ್ಯಾಮರಾನ್ ಅವರನ್ನು ಕೂಡ ಭೇಟಿ ಮಾಡಿಬಂದೆ" ಎನ್ನುತ್ತಾರೆ ಬಾಬು.
"ನಾನು ಅಮೇರಿಕಾದಲ್ಲೂ ೨ತಿಂಗಳು ಇದ್ದೆ ಮತ್ತು ಹಾಲಿವುಡ ಪ್ರವಾಸ ಮಾಡಿದೆ. ನಂತರ ಸಿಲೋನ್ ಗೆ ಕೂಡ ತೆರಲು ಅಲ್ಲಿನ ಸರ್ಕಾರದ ಜೊತೆ ಸಹ ನಿರ್ಮಾಣ ಮಾಡುವ ಸಾಧ್ಯತೆಗಳನ್ನು ಕೂಡ ಚರ್ಚಿಸಿ ಬಂದೆ" ಎನ್ನುತ್ತಾರೆ ಬಾಬು.
ರೆಬೆಲ್ ಸಿನೆಮಾದ ವಿಷಯ ಇಂದಿಗೂ ಕೂಡ ಪ್ರಸ್ತುತ. ಇದು ಸೇನೆಯಲ್ಲಿರುವ ಭ್ರಷ್ಟಾಚಾರದ ಬಗ್ಗೆ ಎಂದಿದ್ದರೆ ಬಾಬು.
"ಸೇನೆ ಹೇಗೆ ಸೈನಿಕರ ಕಲ್ಯಾಣದ ಬಗ್ಗೆ ಚಿಂತಿಸುವುದಿಲ್ಲ ಎಂಬುದನ್ನು ಚರ್ಚಿಸಿದ್ದೇನೆ. ಸುಹಾಸಿನಿ ಐಎಸ್ ಅಧಿಕಾರಿ ಮತ್ತು ಭದ್ರತಾ ಕಾರ್ಯದರ್ಶಿ ಪಾತ್ರವಹಿಸಿದ್ದಾರೆ. ಆದಿತ್ಯ ಅವರ ಮಗನಾಗಿ ಕೆಲಸ ಮಾಡಿದ್ದಾನೆ. ಚಲನಚಿತ್ರ ಪರಿಹಾರಕ್ಕಾಗಿ ಹುಡುಕುತ್ತದೆ ಹಾಗೂ ಕೊನೆಗೆ ಭಾರತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ನಾನು ದೆಹಲಿ ಸಿಂಗಪುರ ಮತ್ತು ಇತರ ಪ್ರದೇಶಗಳನ್ನು ಚಿತ್ರೀಕರಣಕ್ಕೆ ಬಳಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.