ನಿರ್ದೇಶಕ ಅವಿರಾಮ್ ಕಂಠೀರವ ಅವರೊಂದಿಗೆ ಚಿಕ್ಕಣ್ಣ 
ಸಿನಿಮಾ ಸುದ್ದಿ

ಗಾಯಕನಾದ ಹಾಸ್ಯನಟ ಚಿಕ್ಕಣ್ಣ

ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಹಾಸ್ಯನಟ ಚಿಕ್ಕಣ್ಣ ಈಗ ಮತ್ತೊಂದು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ.

ಬೆಂಗಳೂರು: ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಹಾಸ್ಯನಟ ಚಿಕ್ಕಣ್ಣ ಈಗ ಮತ್ತೊಂದು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ಕಿರಾತಕ, ಅಧ್ಯಕ್ಷ, ರಾಜ ಹುಲಿ, ಬಾಂಬೆ ಮಿಠಾಯಿ ಚಿತ್ರಗಳಲ್ಲಿ ತಮ್ಮ ಹಾಸ್ಯನಟನೆಯಿಂದ ಪ್ರೇಕ್ಷಕರ ಮನಗೆದ್ದ ಚಿಕ್ಕಣ್ಣ ಈಗ ಹಿನ್ನಲೆ ಗಾಯಕನಾಗಿ ಮಾರ್ಪಾಡಾಗಿದ್ದಾರೆ.

ಎರಡು ಸಿನೆಮಾಗಳಲ್ಲಿ ಈಗ ಚಿಕ್ಕಣ್ಣ ಹಿನ್ನಲೆಗಾಯಕರಾಗಿದ್ದರೆ. ಫೇಸ್ ಬುಕ್ ನಲ್ಲಿ ಮಾತ್ರ ಪ್ರಸಾರವಾಗಲಿರುವ 'ಹಲೋ' ಎಂಬ ಅಂತರ್ಜಾಲ ಧಾರಾವಾಹಿ ಮತ್ತು ಗಿರಿಗಿಟ್ಲೆ ಸಿನೆಮಾಗಳಿಗೆ ಚಿಕ್ಕಣ್ಣ ಕಂಠದಾನ ಮಾಡಿದ್ದಾರೆ. "ಅವಿರಾಮ್ ಕಂಠೀರವ ನಿರ್ದೇಶಿರುವ ಹಲೋ ಧಾರಾವಾಹಿಯ ಹಾಡಿಗೆ ಹಾಸ್ಯ ಲೇಪನ ಇದೆ. ದಿನರಾತ್ರಿ ದೂರವಾಣಿ ಬಳಕೆಯ ಉಪಯೋಗಗಳು ಮತ್ತು ಅವಾಂತರಗಳ ಹಾಸ್ಯ ಕಥೆಯನ್ನು ಇದು ಹೊಂದಿದೆ. ಹಿನ್ನಲೆ ಗಾಯಕನಾಗುವುದು ಕಷ್ಟದ ಕೆಲಸ, ಅವಿರಾಮ್ ಅವರ ಪ್ರತಿಭೆಗೆ ಸೋತು ಒಪ್ಪಿಕೊಂಡೆ. ಪ್ರೀತಿಯಿಂದ ತಿರಸ್ಕೃತಗೊಂಡ ಭಾವನಾತ್ಮಕ ಹಾಡನ್ನು ಗಿರಿಗಿಟ್ಲೆ ಸಿನೆಮಾದಲ್ಲಿ ಹಾಡಿದ್ದೇನೆ" ಎನ್ನುತ್ತಾರೆ ನಟ ಚಿಕ್ಕಣ್ಣ.

ಬಾಂಬೆ ಮಿಠಾಯಿಯ ನಂತರ ಚಿಕ್ಕಣ್ಣ ಸುದೀಪ್ ಅವರ 'ರನ್ನ' ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಯಶ್ ಅವರ ಮಾಸ್ಟರ್ ಪೀಸ್ ಹಾಗು ನಮಗಾಗಿ, ರಾಮಲೀಲಾ, ಟೈಸನ್, ನಾಗರಕಟ್ಟೆ, ಚೆರ್ರಿ, ಮದುವೆಯ ಮಮತೆಯ ಕರೆಯೋಲೆ ಸಿನೆಮಾಗಳಲ್ಲು ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT