ನಟ ನಿರ್ದೇಶಕ ಕಮಲ ಹಾಸನ್ 
ಸಿನಿಮಾ ಸುದ್ದಿ

ಕಮಲ ಹಾಸನ್ ಅವರ ಮುಂದಿನ ಚಿತ್ರದ ತೆಲುಗು ಶೀರ್ಷಿಕೆ 'ಚೀಕಟಿ ರಾಜ್ಯಂ'

ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ನಟನೆಯ 'ಉತ್ತಮ ವಿಲನ್' ನಿರೀಕ್ಷಿತ ಯಶಸ್ಸು ಕಾಣದಿದ್ದರೂ ನಟ ನಿರ್ದೇಶಕ ಕಮಲ ಹಾಸನ್ ಈಗ ತಮಿಳು ಚಿತ್ರ

ಹೈದರಾಬಾದ್: ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ನಟನೆಯ 'ಉತ್ತಮ ವಿಲನ್' ನಿರೀಕ್ಷಿತ ಯಶಸ್ಸು ಕಾಣದಿದ್ದರೂ ನಟ ನಿರ್ದೇಶಕ ಕಮಲ ಹಾಸನ್ ಈಗ ತಮಿಳು ಚಿತ್ರ 'ತೂಂಗಾವಾನಮ್' ಚಿತ್ರದ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಈ ಸಿನೆಮಾದ ಚಿತ್ರೀಕರಣ ಇಂದು ಪ್ರಾರಂಭವಾಗಲಿದ್ದು ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲೂ ಚಿತ್ರೀಕರಣಗೊಳ್ಳಲಿದೆ.

"ಈ ಚಿತ್ರದ ತೆಲಗು ಅವತರಿಣಿಕೆಯ ಶೀರ್ಷಿಕೆಯನ್ನು 'ಚೀಕಟಿ ರಾಜ್ಯಂ' ಎಂದಿಡಲಾಗಿದೆ. ಇದು ದ್ವಿಭಾಷಾ ಚಲನಚಿತ್ರ. ಇದರ ಮೊದಲ ನೋಟವನ್ನು ಭಾನುವಾರ ಅನಾವರಣಗೊಳಿಸಲಾಗುವುದು' ಎಂದು ಚಲನಚಿತ್ರ ಮೂಲಗಳಿಂದ ತಿಳಿದುಬಂದಿದೆ.

ಕಮಲ್ ಹಾಸನ್ ಅವರ ದೀರ್ಘ ಕಾಲದ ಗೆಳೆಯ ರಾಜೇಶ್ ಎಂ ಸೆಲ್ವಾ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ತ್ರಿಶಾ ಕೃಷ್ಣನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಕಮಲ್ ಅವರ ಪತ್ನಿಯ ಪಾತ್ರಕ್ಕೆ ಮನಿಷಾ ಕೊಯಿರಾಲ ಅವರನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ. ಗಿಬ್ರಾನ್ ಸಂಗೀತ ನೀಡಲಿದ್ದು, ಕಮಲ್ ಸಿನೆಮಾಗೆ ಸಂಗೀತ ನಿರ್ದೇಶಿಸುತ್ತಿರುವುದು ಇದು ನಾಲ್ಕನೆಯ ಬಾರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT