ಬೆಂಗಳೂರು-೫೬೦೦೨೩ ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ಈ ವಾರ ನಾಲ್ಕು ಕನ್ನಡ ಚಿತ್ರಗಳ ಬಿಡುಗಡೆ

ದೀಪಾವಳಿ ಹಬ್ಬದ ನಂತರವೂ ಕನ್ನಡ ಸಿನೆಮಾಗಳ ಹಬ್ಬ ಮುಂದುವರೆದಿದೆ. ಸಿನೆರಸಿಕರಿಗೆ ಖುಷಿತರಬಲ್ಲ ಸಂಗತಿಯೆಂದರೆ ಈ ವಾರ ನಾಲ್ಕು ಸಿನೆಮಾಗಳು ತೆರೆ ಕಾಣಲಿವೆ.

ಬೆಂಗಳೂರು: ದೀಪಾವಳಿ ಹಬ್ಬದ ನಂತರವೂ ಕನ್ನಡ ಸಿನೆಮಾಗಳ ಹಬ್ಬ ಮುಂದುವರೆದಿದೆ. ಸಿನೆರಸಿಕರಿಗೆ ಖುಷಿತರಬಲ್ಲ ಸಂಗತಿಯೆಂದರೆ ಈ ವಾರ ನಾಲ್ಕು ಸಿನೆಮಾಗಳು ತೆರೆ ಕಾಣಲಿವೆ.

ಆಕ್ಟೋಪಸ್: 'ವಾಸ್ಕೋಡಿಗಾಮ' ಮತ್ತು ತಮಿಳಿನ 'ತೂಂಗವಾನಮ್'ನಲ್ಲಿ ಕಿಶೋರ್ ಅವರನ್ನು ಕಂಡಿರುವ ನೆನಪು ಹಸಿಹಸಿಯಾಗಿರುವಾಗಲೇ ಈಗ ಕಿಶೋರ್ ನಾಯಕನಟನಾಗಿ ನಟಿಸಿರುವ 'ಆಕ್ಟೋಪಸ್' ಗುರುವಾರ ಬಿಡುಗಡೆಗೆ ಸಿದ್ಧವಾಗಿದೆ. ಯಜ್ಞಾ ಶೆಟ್ಟಿ ನಾಯಕ ನಟಿಯಾಗಿದ್ದು ನಿರ್ದೇಶನ ಪಿ ಅಣ್ಣಯ್ಯನವರದ್ದು.

ಬಾಕ್ಸರ್: ನಟ ಧನಂಜಯ್ ಅವರು ಕನ್ನಡದಲ್ಲಿ ಯಶಸ್ಸು ಕಾಣುತ್ತಿರುವ ಯುವನಟ. ದೃಶ್ಯಂ ಹುಡುಗಿ ಎಂದೇ ಖ್ಯಾತರಾದ ಕೃತಿಕಾ ಸಹನಟಿ. ಪ್ರೀತಮ್ ಗುಬ್ಬಿ ನಿರ್ದೇಶನದ ಈ ಚಿತ್ರಕ್ಕಾ ಹರಿಕೃಷ್ಣ ಅವರ ಸಂಗೀತವಿದೆ. ಶುಕ್ರವಾರದಿಂದ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

ಬೆಂಗಳೂರು-೫೬೦೦೨೩: ಕಿರುತೆರೆಯಲ್ಲಿ ಹೆಸುರುವಾಸಿ ಕಾರ್ತಿಕ್ ಜಯರಾಂ (ಜೆಕೆ) ಬೆಳ್ಳಿತೆರೆಯಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. 'ಕಿರಾತಕ'  ನಿರ್ದೇಶಕ ಪ್ರದೀಪ್ ರಾಜ್ ನಿರ್ದೇಶನದಲ್ಲಿ ಈಗ ಜೆಕೆ ಮತ್ತೆ ಬೆಳ್ಳಿತೆರೆಗೆ ಬಂದಿದ್ದಾರೆ. ಚೆನ್ನೈ-600028 ಸಿನೆಮಾದ ರಿಮೇಕ್ ಇದು. ಈ ಚಿತ್ರವಾದರೂ ಜೆಕೆಗೆ ಬೆಳ್ಳಿತೆರೆಯಲ್ಲಿ ಭವಿಷ್ಯ ದೊರಕಿಸಿಕೊಡುವುದೇ?

ಮಾಮು ಟಿ ಅಂಗಡಿ: ಹೊಸಬರ ಪಡೆ ಕಟ್ಟಿಕೊಂಡು ಚಿತ್ರ ನಿರ್ದೇಶಿಸಿರುವ ಪರಮೇಶ್ ಅತಿಥಿ ನಟರಾಗಿ ನಟಿಸಲು ಶ್ರೀನಗರ ಕಿಟ್ಟಿ, ಅಜಯ್ ರಾವ್ ಮತ್ತು ಪ್ರೇಮ್ ಇವರನ್ನು ಕರೆತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ರಿಲೀಸ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

CM ಕುರ್ಚಿಗಾಗಿ ಬಣ ಬಡಿದಾಟ: ಸಿದ್ದರಾಮಯ್ಯ vs ಡಿಕೆಶಿ 'ಹೈಡ್ರಾಮ' ಈಗ ದೆಹಲಿಗೆ ಶಿಫ್ಟ್; ಎಲ್ಲರ ಚಿತ್ತ ಹೈಕಮಾಂಡ್ ನತ್ತ!

ಅಸ್ಸಾಂ ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಅಂಗೀಕಾರ; ಬುಡಕಟ್ಟು ಜನಾಂಗಕ್ಕೆ ವಿನಾಯಿತಿ

ಹವಾಯಿ ದ್ವೀಪದಲ್ಲಿ ಮತ್ತೆ ಸ್ಫೋಟಿಸಿದ ಜ್ವಾಲಾಮುಖಿ: ಬರೊಬ್ಬರಿ 400 ಅಡಿ ಎತರಕ್ಕೆ ಚಿಮ್ಮಿದ ಲಾವಾರಸ, ರಣರೋಚಕ ವಿಡಿಯೋ

'ಸಿಎಂ ಸ್ಥಾನದಿಂದ ಸಿದ್ದರಾಮಯ್ಯರ ಕೆಳಗಿಳಿಸಿದರೆ ನಿಮಗೇ ಅಪಾಯ': ಕಾಂಗ್ರೆಸ್ ಗೆ ಅಹಿಂದ ಸಮುದಾಯಗಳ ಖಡಕ್ ಎಚ್ಚರಿಕೆ

SCROLL FOR NEXT