ಭರ್ಜರಿ ಸಿನೆಮಾದಲ್ಲಿ ಧೃವ ಸರ್ಜಾ ಮತ್ತು ತಾರಾ 
ಸಿನಿಮಾ ಸುದ್ದಿ

ಭರ್ಜರಿ ಅಡಚಣೆ ಮುಕ್ತ; ಚಿತ್ರೀಕರಣ ಪ್ರಾರಂಭ

'ಬಹದ್ದೂರ್' ಸಿನೆಮಾ ಮೂಲಕ ನಿರ್ದೇಶನಕ್ಕಿಳಿದ ಚೇತನ್ ಕುಮಾರ್ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದ ನಂತರ ಮತ್ತೆ ಉತ್ಸುಕರಾಗಿದ್ದಾರೆ. ಏಪ್ರಿಲ್ ನಲ್ಲಿ

ಬೆಂಗಳೂರು: 'ಬಹದ್ದೂರ್' ಸಿನೆಮಾ ಮೂಲಕ ನಿರ್ದೇಶನಕ್ಕಿಳಿದ ಚೇತನ್ ಕುಮಾರ್ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದ ನಂತರ ಮತ್ತೆ ಉತ್ಸುಕರಾಗಿದ್ದಾರೆ. ಏಪ್ರಿಲ್ ನಲ್ಲಿ ಆರ್ ಎಸ್ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣವಾಗಬೇಕಿದ್ದ 'ಭರ್ಜರಿ' ಹಲವಾರು ಕಾರಣಗಳಿಂದ ತಡವಾಗಿತ್ತು. ಆದರೆ ಈಗ ಎಲ್ಲ ಅಡಚಣೆಗಳು ನಿವಾರಣೆಯಾಗಿದ್ದು ನವೆಂಬರ್ ೨೦ ರಿಂದ ಚಿತ್ರೀಕರಣ ಪ್ರಾರಂಭವಾಗಿದೆ.

ಭರ್ಜರಿಯಾ ವಿಶಿಷ್ಟತೆ ಎಂದರೆ ಇದು ನಾಯಕಿಯ(ರಚಿತಾ ರಾಮ್) ಕೆನ್ನೆಗುಳಿಯ ಸುತ್ತ ಕಥೆ ಸುತ್ತಲಿದೆಯಂತೆ. "ಭಾರತೀಯ ಸಿನೆಮಾರಂಗದಲ್ಲಿ ಈ ರೀತಿಯ ಪ್ರಯತ್ನ ಇದೇ ಮೊದಲು ಎನ್ನುವ ಅವರು, ಸಿನೆಮಾದ ಮೊದಾಲಾರ್ಧದಲ್ಲಿ ನಗರ ಪ್ರದೇಶಗಳ ಬಗ್ಗೆ ಅತ್ಯುತ್ತಮ ಚಿತ್ರೀಕರಣ ಇರುತ್ತದೆ" ಎನ್ನುತ್ತಾರೆ ಚೇತನ್.

ಚಕ್ರವ್ಯೂಹದ ಚಿತ್ರೀಕರಣ ಮುಗಿಸಿರುವ ರಚಿತಾ ರಾಮ್ ಈಗ ಧೃವ ಸರ್ಜಾ, ತಾರಾ, ಸುಚೇಂದ್ರ ಪ್ರಸಾದ್. ಸಾಧು ಕೋಕಿಲಾ, ಜೈ ಜಗದೀಶ್ ಮುಂತಾದವರ ಜೊತೆ ಚಿತ್ರತಂಡ ಸೇರಲಿದ್ದಾರಂತೆ.

ಬಹದ್ದೂರ್ ನಲ್ಲಿ ಧೃವ್ ಅವರು ತೋರಿಸಿದ ಮಾಂತ್ರಿಕತೆ ಇಲ್ಲಿ ಮರುಕಳಿಸಲಿದೆ ಎಂಬ ಭರವಸೆ ತೋರುತ್ತಾರೆ ಚೇತನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT