'ಜಗ್ಗು ದಾದ'ದಲ್ಲಿ ದರ್ಶನ್ 
ಸಿನಿಮಾ ಸುದ್ದಿ

'ಜಗ್ಗುದಾದ'ನ ಮೊದಲ ನೋಟ

ನಟ ದರ್ಶನ್ ಅಭಿನಯದ ಮಿ ಐರಾವತ ೨೫ನೆ ದಿನದತ್ತ ನಡೆಯುತ್ತಿದೆ. ಈ ಸಮಯದಲ್ಲಿ 'ಜಗ್ಗು ದಾದ' ಸಿನೆಮಾದ ಚಿತ್ರೀಕರಣದಲ್ಲಿ ನಿರತವಾಗಿರುವ ದರ್ಶನ್ ಶೂಟಿಂಗ್ ಪ್ರಗತಿಯತ್ತ

ಬೆಂಗಳೂರು: ನಟ ದರ್ಶನ್ ಅಭಿನಯದ ಮಿ ಐರಾವತ ೨೫ನೆ ದಿನದತ್ತ ನಡೆಯುತ್ತಿದೆ. ಈ ಸಮಯದಲ್ಲಿ 'ಜಗ್ಗು ದಾದ' ಸಿನೆಮಾದ ಚಿತ್ರೀಕರಣದಲ್ಲಿ ನಿರತವಾಗಿರುವ ದರ್ಶನ್ ಶೂಟಿಂಗ್ ಪ್ರಗತಿಯತ್ತ ಗಮನ ಹರಿಸಿದ್ದಾರೆ.

"ನನ್ನ ಅಭಿಮಾನಿಗಳು ನನ್ನಿಂದ ನಿರೀಕ್ಷಿಸುವ ಸಿನೆಮಾಗಳನ್ನೆ ನಾನು ಯಾವಾಗಲೂ ಆಯ್ಕೆ ಮಾಡಿದ್ದೇನೆ. ಅಲ್ಲದೆ ನನಗೆ ಹೆಚ್ಚು ಮಹಿಳಾ ಅಭಿಮಾನಿಗಳಿದ್ದಾರೆ. ಅವರು ನಾನು ಮುಂದಿನ ಹಾಸ್ಯ ಪಾತ್ರ ಯಾವಾಗ ಮಾಡುವುದು ಎಂದು ಕೇಳುತ್ತಿರುತ್ತಾರೆ. ಅವರಿಗೆ ನನ್ನ 'ದತ್ತ' ಸಿನೆಮಾ ಇಷ್ಟವಾಗಿತ್ತು. ಆದುದರಿಂದ ಈಗ 'ಜಗ್ಗು ದಾದ' ಆಯ್ಕೆ ಮಾಡಿಕೊಂಡಿದ್ದೇನೆ" ಎನ್ನುತ್ತಾರೆ ದರ್ಶನ್.

ಜಗ್ಗು ದಾದ ಕಥಾ ವಸ್ತು ಹೀಗಿದೆ. ಸಿನೆಮಾದ ಹಿರೋ ರೌಡಿಯಾಗಿರುತ್ತನೆ. ತನ್ನ ತಾತನ ಆಸೆ ಪೂರೈಸಲು ಮದುವೆಯಾಗಿರಬೇಕಾಗಿರುತ್ತದೆ. ಆದರೆ ಕರ್ನಾಟಕದಾದ್ಯಂತ ಅವನಿಗೆ ವಧು ಸಿಗದೇ ಹೋಗಲು, ದೊಡ್ಡ ಉದ್ದಿಮೆದಾರನಾಗಿ ಹುಡುಗಿ ಹುಡುಕಲು ಮುಂಬೈ ಹೋಗುವ ಹಾಸ್ಯ ಸನ್ನಿವೇಶಗಳೇ ಸಿನೆಮಾ ಕಥೆ.

"ಜಗ್ಗು ದಾದ ಮನರಜನೆಯ ಸಿನೆಮಾ. ಎಲ್ಲರೂ ಈ ಸಿನೆಮಾವನ್ನು ಇಷ್ಟ ಪಡುತ್ತಾರೆ" ಎಂಬ ಭರವಸೆ ತೋರುತ್ತಾರೆ ದರ್ಶನ್. ಸಿನೆಮಾದಲ್ಲಿ ದೀಕ್ಷಾ ಸೇಥ್ ನಾಯಕ ನಟಿ. ಸೃಜನ್ ಲೋಕೇಶ್, ಗಾಯತ್ರಿ ಅಯ್ಯರ್, ವಿಶಾಲ್ ಹೆಗಡೆ, ವಿಷ್ಣು, ಅಶ್ವಿನ್ ಮತ್ತು ಯುವ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT