'ಮಮ್ತಾಜ್' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ಮಮ್ತಾಜ್' ಮೂಲಕ ಬೆಳ್ಳಿತೆರೆಗೆ ಹಿಂದಿರುಗಿದ ಧರ್ಮ

'ಒಲವೆ ವಿಸ್ಮಯ'ದ ಬಳಿಕ ನಟ ಧರ್ಮ ಕೀರ್ತಿರಾಜ್ ಅವರ ಯಾವುದೇ ಸಿನೆಮಾಗಳು ಮೂರೂ ವರ್ಷದವರೆಗೆ ಬಿಡುಗಡೆಯಾಗಿಲ್ಲ. ಶಾಂತಿಯುತವಾಗಿ ಕಾಯುತ್ತಿದ್ದ

ಬೆಂಗಳೂರು: 'ಒಲವೆ ವಿಸ್ಮಯ'ದ ಬಳಿಕ ನಟ ಧರ್ಮ ಕೀರ್ತಿರಾಜ್ ಅವರ ಯಾವುದೇ ಸಿನೆಮಾಗಳು ಮೂರೂ ವರ್ಷದವರೆಗೆ ಬಿಡುಗಡೆಯಾಗಿಲ್ಲ. ಶಾಂತಿಯುತವಾಗಿ ಕಾಯುತ್ತಿದ್ದ ಯುವ ನಟ ಈಗ 'ಮಮ್ತಾಜ್' ಮೂಲಕ ಹಿಂದಿರುಗಿದ್ದಾರೆ. ಸಿನೆಮಾ ಶುಕ್ರವಾರ ಬಿಡುಗಡೆಯಾಗಲಿದೆ.

"ನನಗೆ ಸಿನೆಮಾ ವಿಷಯದ ಮೇಲೆ ಭರವಸೆ ಇದೆ ಮತ್ತು ಇದು ಕಮರ್ಷಿಯಲ್ ಲವ್ ಸ್ಟೋರಿ. ಈ ಸಿನೆಮಾದಲ್ಲಿ ನನ್ನ ನೃತ್ಯ ಮತ್ತು ಆಕ್ಷನ್ ಕೌಶಲ್ಯವನ್ನು ತೋರಿಸಲು ಸಾಧ್ಯವಾಗಿದೆ. ನನ್ನಲ್ಲಿ ಒಳ್ಳೆಯ ಬದಲಾವಣೆಯನ್ನು ಜನ ಗುರುತಿಸಲಿದ್ದಾರೆ ಎಂದು ನಂಬಿದ್ದೇನೆ" ಎನ್ನುತ್ತಾರೆ ಧರ್ಮ.

ಬೇರೆ ಸಮಯಗಳಲ್ಲಿ ನಡೆಯದಂತೆ ಈ ಬಾರಿ ಧರ್ಮ ಅವರೇ ಸ್ಕ್ರಿಪ್ಟ್ ಆಯ್ಕೆ ಮಾಡಿದ್ದಾರಂತೆ. "ದೀರ್ಘ ಕಾಲದ ನಂತರ ನನ್ನ ತಂದೆ, ನನ್ನ ವೃತ್ತಿ ಜೀವನಕ ಆಯ್ಕೆ ನೀಡಿದ್ದರು. ಆದುದರಿಂದ ಸ್ಕ್ರಿಪ್ಟ್ ಆಯ್ಕೆ ಮಾಡುವಾಗ ತಂದೆಯವರ ಜೊತೆ ನಾನೂ ಇದ್ದೆ. ಮಮ್ತಾಜ್ ಗೆಲ್ಲುವ ಎಲ್ಲ ನಿರೀಕ್ಷೆ ಇದೆ" ಎನ್ನುತ್ತಾರೆ ನಟ.

ಹಲವಾರು ವರ್ಷಗಳ ಗ್ಯಾಪ್ ನಂತರ ಶರ್ಮಿಳಾ ಮಾಂಡ್ರೆ ಕೂಡ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ದರ್ಶನ್ ಅತಿಥಿ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ರಾಘವ ಮುರಳಿ ನಿರ್ದೇಶನದ ಚಿತ್ರವನ್ನು ನರಸಿಂಹ ಮೂರ್ತಿ ಮತ್ತು ಸದಾಶಿವ ನಿರ್ಮಿಸಿದ್ದಾರೆ. ೧೯ ವರ್ಷದ ಪ್ರವೀಣ್ ಸಂಗೀತ ನೀಡಿದ್ದು ಪವನ್ ಗೀತರಚನೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT