ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಅಪ್ಪನಿಂದ ಎಂದಿಗೂ ಪಾಕೆಟ್ ಮನಿ ಪಡೆದಿಲ್ಲ: ದೀಪಿಕಾ ಪಡುಕೋಣೆ

ಬಾಲಿವುಡ್ ನಲ್ಲಿ ಅತೀಹೆಚ್ಚು ವೇತನ ಪಡೆಯುವ ನಟಿಯರ ಸಾಲಿನಲ್ಲಿರುವ, ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಬೆಡಗಿ ಜನಪ್ರಿಯ ನಟಿ ದೀಪಿಕಾಗೆಗೆ ಹಣಕಾಸಿನ ವ್ಯವಹಾರವೇ ಗೊತ್ತಿಲ್ಲವೆಂದರೆ ನಂಬಲಾಗುತ್ತದೆಯೇ. ಹೌದು ನಂಬಲೇಬೇಕೆಂದು ದೀಪಿಕಾ ಹೇಳುತ್ತಾರೆ...

ಬಾಲಿವುಡ್ ನಲ್ಲಿ ಅತೀಹೆಚ್ಚು ವೇತನ ಪಡೆಯುವ ನಟಿಯರ ಸಾಲಿನಲ್ಲಿರುವ, ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಬೆಡಗಿ ಜನಪ್ರಿಯ ನಟಿ ದೀಪಿಕಾಗೆಗೆ ಹಣಕಾಸಿನ ವ್ಯವಹಾರವೇ ಗೊತ್ತಿಲ್ಲವೆಂದರೆ ನಂಬಲಾಗುತ್ತದೆಯೇ. ಹೌದು ನಂಬಲೇಬೇಕೆಂದು ದೀಪಿಕಾ ಹೇಳುತ್ತಾರೆ.

ನನಗೆ ಹಣಕಾಸಿನ ವ್ಯವಹಾರ ನೋಡಿಕೊಳ್ಳಲು ಬರುವುದಿಲ್ಲ. ಹೀಗಾಗಿ ಇದರ ಜವಾಬ್ದಾರಿಯನ್ನು ನನ್ನ ತಂದೆಗೆ ಹಾಗೂ ಅಣ್ಣನಾದ ಮಾಜಿ ಬ್ಯಾಡ್ಮಿಂಟನ್ ಪ್ರಕಾಶ್ ಪಡುಕೋಣೆ ಅವರಿಗೆ ನೀಡಿದ್ದೇನೆ ಎಂದು ದೀಪಿಕಾ ಹೇಳಿಕೊಂಡಿದ್ದಾಳೆ.

ಮುಂಬೈನಲ್ಲಿ ಆಯೋಜಿಸಿದ್ದ ಖಾಸಗಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾನು ಮೊದಲು ಸಂಪಾದಿಸಿದ ಹಣದ ಬಗ್ಗೆಯೂ ನನಗೆ ನೆನಪಿಲ್ಲ. ಈ ವರೆಗೂ ನಾನು ಎಷ್ಟು ಹಣವನ್ನು ಸಂಪಾದಿಸಿದ್ದೇನೆಂಬುದು ನನಗೇ ತಿಳಿದಿಲ್ಲ. ನಾನು ಸಂಪಾದಿಸಿದ ಹಣವನ್ನು ಹೇಗೆ ಮತ್ತು ಎಲ್ಲಿ ಹೂಡಿಕೆ ಮಾಡಿಬೇಕೆಂಬ ಬಗ್ಗೆ ತಿಳಿದಿಲ್ಲ. ಹಾಗಾಗಿ ಹಣಕಾಸಿನ ಎಲ್ಲಾ ವ್ಯವಹಾರವನ್ನು ನನ್ನ ತಂದೆಯೇ ನೋಡಿಕೊಳ್ಳುತ್ತಾರೆ. ಇದಲ್ಲದೆ ನನಗೆ ತಂತ್ರಜ್ಞಾನದ ಬಗ್ಗೆಯೂ ಅಷ್ಟಾಗಿ ಗೊತ್ತಿಲ್ಲ. ಇಂದಿಗೂ ಆಪ್ಸ್ ಗಳೆಂದರೇನು ಎಂಬುದು ನನಗೆ ಸಂಪೂರ್ಣವಾಗಿ ಗೊತ್ತಿಲ್ಲ. ಕೇವಲ ಫೋಟೋ ತೆಗೆಯುವುದು ಮತ್ತು ಅವುಗಳನ್ನು ಪ್ರಿಂಟ್ ಕೊಡುವುದು ಮತ್ತೆ ಅವುಗಳನ್ನು ಅಲ್ಬಂನಲ್ಲಿಡುವುದಷ್ಟೇ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ತನ್ನ ಬಾಲ್ಯದ ನೆನಪುಗಳ ಬಗ್ಗೆ ಮಾತನಾಡಿರುವ ಅವರು, ನಾನು ಚಿಕ್ಕವಳಿದ್ದಾಗಿನಿಂದಲೂ ಅಪ್ಪ ನ ಬಳಿ ಪಾಕೆಟ್ ಮನಿ ಪಡೆದೇ ಇಲ್ಲ. ಹಣಕಾಸಿನ ವ್ಯವಹಾರವೆಂದರೆ ನನಗೆ ಅರ್ಥವಾಗುವುದಿಲ್ಲ. ಹೀಗಾಗಿ ಹಣಕಾಸಿನ ವ್ಯವಹಾರ ಹಾಗೂ ನಾನು ತುಂಬಾನೇ ದೂರ. ಹಣಕಾಸಿನ ವ್ಯವಹಾರವನ್ನೆಲ್ಲಾ ಅಪ್ಪ ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

Street Dog attack: ಬೀದಿ ನಾಯಿ ಸಮಸ್ಯೆಗೆ ಉಪಾಯ ಕಂಡುಕೊಂಡ ಗದಗ ಜನತೆ, ಕಾಟದಿಂದ ಮುಕ್ತಿಗೆ ಬಣ್ಣ ನೀರಿನ ಪ್ರಯೋಗ..!

ನಮ್ಮವರು ಬೇರೆ ಧರ್ಮದವರ ಪ್ರಾರ್ಥನೆ ಸ್ಥಳಗಳಿಗೆ ಹೋಗುವುದಿಲ್ಲವೇ? ಯದುವೀರ್ ಬಿಜೆಪಿ ಜೊತೆ ಸೇರಿ ಇತಿಹಾಸ ಮರೆತಿದ್ದಾರೆ: DKS

SCROLL FOR NEXT