ಬಾಲಿವುಡ್ ನಟಿ ಹೂಮ ಖುರೇಶಿ 
ಸಿನಿಮಾ ಸುದ್ದಿ

ಶಕೀಲಾ ಬಯೋಪಿಕ್ ಗೆ ಆಸಕ್ತಿ ತೋರಿದ ಹೂಮ ಖುರೇಶಿ

ದೀರ್ಘ ಕಾಲದ ವಿರಾಮದ ನಂತರ ಮತ್ತೆ ನಿರ್ದೇಶನಕ್ಕಿಳಿದು 'ಲವ್ ಯು ಆಲಿಯಾ' ನಿರ್ದೇಶಿಸಿದ ಇಂದ್ರಜಿತ್ ಲಂಕೇಶ್ ಮತ್ತೆ ವಿರಮಿಸುವ ಇರಾದೆಯಲ್ಲಿಲ್ಲ. 'ಲವ್ ಯು ಆಲಿಯಾ' ಸಿನೆಮಾಗೆ

ಬೆಂಗಳೂರು: ದೀರ್ಘ ಕಾಲದ ವಿರಾಮದ ನಂತರ ಮತ್ತೆ ನಿರ್ದೇಶನಕ್ಕಿಳಿದು 'ಲವ್ ಯು ಆಲಿಯಾ' ನಿರ್ದೇಶಿಸಿದ ಇಂದ್ರಜಿತ್ ಲಂಕೇಶ್ ಮತ್ತೆ ವಿರಮಿಸುವ ಇರಾದೆಯಲ್ಲಿಲ್ಲ. 'ಲವ್ ಯು ಆಲಿಯಾ' ಸಿನೆಮಾಗೆ ಶಕೀಲಾ ಅವರನ್ನು ಕರೆತಂದಿದ್ದ ಇಂದ್ರಜಿತ್, ಅವರ ಆತ್ಮಕತೆಯನ್ನು ಸಿನೆಮಾ ಮಾಡುವ ಉತ್ಸಾಹ ತೋರಿದ್ದರು. ಶಕೀಲಾ ಅವರ ಆತ್ಮಕತೆಯ ಸಿನೆಮಾ ಹಕ್ಕುಗಳನ್ನು ಕೂಡ ಅವರು ಖರೀದಿಸಿದ್ದರು.

ಈಗ ಈ ಕಥೆಗೆ ಬೆಳಕು ನೀಡುವ ಸಮಯ ಬಂದಿದೆ ಎನ್ನತ್ತಾರೆ ಇಂದ್ರಜಿತ್. ಈ ಸಿನೆಮಾವನ್ನು ಹಿಂದಿಯಲ್ಲಿ ಮಾತ್ರ ನಿರ್ದೇಶಿಸಬೇಕು ಎಂದುಕೊಂಡಿರುವ ಲಂಕೇಶ್ ಬಾಲಿವುಡ್ ನಟಿ ಹೂಮ ಖುರೇಶಿ ಅವರ ಬಳಿ ಪಾತ್ರವನ್ನು ಚರ್ಚಿಸಿದ್ದು, ಖುರೇಶಿ ಕೂಡ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಶಕೀಲಾ ದಕ್ಷಿಣ ಭಾರತದ ನಟಿಯಾಗಿದ್ದು ಇಲ್ಲೇ ಹೆಚ್ಚು ಜನಪ್ರಿಯ ಅಲ್ಲವೇ ಎಂದು ಇಂದ್ರಜಿತ್ ಅವರನ್ನು ಪ್ರಶ್ನಿಸಿದರೆ "ಸಿಲ್ಕ್ ಸ್ಮಿತಾ ಕೂಡ ದಕ್ಷಿಣದವರೇ. ಆದರೆ ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಬಾಲಿವುಡ್ ನವರು ಅವರ ಜೀವನಾಧಾರಿತ 'ಡರ್ಟಿ ಪಿಕ್ಚರ್' ಮಾಡಿದರು. ಹಿಂದಿಗೆ ವಿಶಾಲವಾದ ಮಾರುಕಟ್ಟೆಯಿದೆ. ಇವರ ಕಥೆಯನ್ನು ಹೆಚ್ಚು ಜನಕ್ಕೆ ತಲುಪಿಸಲು ಸಹಕಾರಿಯಾಗುವಂತೆ ಕಾರ್ಪೊರೆಟ್ ಸಂಸ್ಥೆಗಳ ಹೂಡಿಕೆಗೆ ಪ್ರಯತ್ನಿಸುತ್ತಿದ್ದೇವೆ" ಎನ್ನುತ್ತಾರೆ.

ಚಿತ್ರೀಕರಣದ ಮುಂಚಿನ ಕೆಲಸಗಳನ್ನು ನಿರ್ದೇಶಕ ಆಗಲೇ ಪ್ರಾರಂಭಿಸಿದ್ದಾರಂತೆ. ಈಗ ಅವರು ಮುಂಬೈ ಪ್ರಯಾಣ ಬೆಳೆಸುತ್ತಿದ್ದು, ಹೂಮ ಅವರನ್ನು ಭೇಟಿ ಮಾಡಿ ಸ್ಕ್ರಿಪ್ಟ್ ಮತ್ತು ಶಕೀಲಾ ಅವರ ಆತ್ಮಕಥೆಯನ್ನು ಚರ್ಚಿಸಲಿದ್ದಾರಂತೆ,

ಎಲ್ಲವೂ ಸುಸೂತ್ರವಾಗಿ ನಡೆದರೆ ಇಂದ್ರಜಿತ್ ಬಾಲಿವುಡ್ ಗೆ ಚೊಚ್ಚಲ ಪ್ರವೇಶ ನೀಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT