ನಟ ವಿಜಯ್ ರಾಘವೇಂದ್ರ 
ಸಿನಿಮಾ ಸುದ್ದಿ

ಕೌಟುಂಬಿಕ ಸಿನೆಮಾಗಳಿಂದ ಡಾರ್ಕ್ ಸಿನೆಮಾದತ್ತ ಹೊರಳಿದ ವಿಜಯ್

ಕೌಟುಂಬಿಕ ಚಲನಚಿತ್ರಗಳಲ್ಲೇ ಸಾಮಾನ್ಯವಾಗಿ ಪಾತ್ರ ಮಾಡುವ ನಟ ವಿಜಯ್ ರಾಘವೇಂದ್ರ ಈಗ ವಿರಾಜ್ ಅವರ ಚೊಚ್ಚಲ ನಿರ್ದೇಶನದ 'ಯದಾ ಯದಾ ಹಿ ಧರ್ಮಸ್ಯ'ದಲ್ಲಿ...

ಬೆಂಗಳೂರು: ಕೌಟುಂಬಿಕ ಚಲನಚಿತ್ರಗಳಲ್ಲೇ ಸಾಮಾನ್ಯವಾಗಿ ಪಾತ್ರ ಮಾಡುವ ನಟ ವಿಜಯ್ ರಾಘವೇಂದ್ರ ಈಗ ವಿರಾಜ್ ಅವರ ಚೊಚ್ಚಲ ನಿರ್ದೇಶನದ 'ಯದಾ ಯದಾ ಹಿ ಧರ್ಮಸ್ಯ'ದಲ್ಲಿ ನೆಗೆಟಿವ್ ಪಾತ್ರ ಮಾಡಲು ಮುಂದಾಗಿದ್ದಾರೆ.

ಶುಕ್ರವಾರ ಈ ಸಿನೆಮಾದ ಮುಹೂರ್ತ ನೆರವೇರಿದ್ದು, ವಿನಯ್ ರಾಜಕುಮಾರ್ ಕ್ಲ್ಯಾಪ್ ಮಾಡಿದ್ದಾರೆ. 'ಯದಾ ಯದಾ..'ದಲ್ಲಿ ವಿಜಯ್ ರಾಘವೇಂದ್ರ ಅವರ ಹೊಸ ಅವತಾರದ ಬಗ್ಗೆ ಉತ್ಸುಕರಾಗಿರುವ ವಿರಾಜ್ "ಭೂಗತ ಲೋಕದ ಈ ಸಿನೆಮಾದಲ್ಲಿ ವಿಜಯ್ ನೆಗೆಟಿವ್ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಆದರೆ ಸಾಮಾನ್ಯರಿಗೆ ಅವರು ರಕ್ಷಕ. ಇದಕ್ಕಾಗಿ ತಮ್ಮ ಇಮೇಜ್ ಅನ್ನು ವಿಜಯ್ ಬದಲಾಯಿಸಿಕೊಳ್ಳಲಿದ್ದು, ಇಂತಹ ಪಾತ್ರ ಅವರ ಜೀವನದಲ್ಲೇ ಮೊದಲು ಎಂದಿದ್ದಾರೆ ವಿಜಯ್. ಅಲ್ಲದೆ ತಮ್ಮ ದೇಹ ದಾಢ್ಯವನ್ನು ಕೂಡ ವೃದ್ಧಿಸಿಕೊಳ್ಳುತ್ತಿದ್ದು ಕೈಮ್ಯಾಕ್ಸ್ ಚಿತ್ರೀಕರಣದ ಹೊತ್ತಿಗೆ ಸಿಕ್ಸ್ ಪ್ಯಾಕ್ ಹೊಂದುವ ಸಾಧ್ಯತೆ ಇದೆ" ಎನ್ನುತ್ತಾರೆ.

ವಿಜಯ್ ವೈವಿಧ್ಯಮಯ ನಟ ಆದರೆ ಅವರನ್ನು ಒಂದೇ ವಿಧದ ಚಿತ್ರಕ್ಕೆ ಸೀಮಿತಗೊಳಿಸಿದ್ದಾರೆ. ನಟನಾಗಿ ಅವರಿಗೆ ವಿವಿಧ ಗುಣಗಳಿವೆ ನಿರ್ದೇಶಕನಾಗಿ ನನಗೆ ಅವುಗಳನ್ನು ಹೊರತರುವುದು ಮುಖ್ಯ ಎನ್ನುವ ವಿರಾಜ್ ತಾವೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಲು ಮುಂದಾಗಿದ್ದಾರೆ. "ಇದು ನಿಜ ಘಟನೆಯೊಂದನ್ನು ಆಧರಿಸಿದ ಕಮರ್ಷಿಯಲ್ ಸಿನೆಮಾ" ಎಂದು ವಿವರಿಸುತ್ತಾರೆ.

ಏಪ್ರಿಲ್ ೨೫ ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬೆಂಗಳೂರು, ಮಡಿಕೇರಿ, ಗೋವಾ ಮತ್ತಿತೆಡೆ ಚಿತ್ರೀಕರಣಗೊಳ್ಳಲಿದೆಯಂತೆ. ರವಿಶಂಕರ್, ಸಾಧು ಕೋಕಿಲಾ, ಸುಧಾ ಬೆಳವಾಡಿ ತಾರಾಗಣದ ಭಾಗವಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT