ನಾನಾ ಪಾಟೇಕರ್ -ಪ್ರತ್ಯೂಷ ಬ್ಯಾನರ್ಜಿ 
ಸಿನಿಮಾ ಸುದ್ದಿ

ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಸುದ್ದಿ ಬಿಟ್ಟು ರೈತರ ಆತ್ಮಹತ್ಯೆ ಸುದ್ದಿಗಳತ್ತ ಗಮನ ಹರಿಸಿ

ಆ ಹುಡುಗಿ (ಪ್ರತ್ಯೂಷ ಬ್ಯಾನರ್ಜಿ) ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಆದರೆ ಈ ಮಾಧ್ಯಮಗಳು ಯಾಕೆ ಪ್ರತಿ ದಿನ ಅದೇ ಸುದ್ದಿಯನ್ನು...

ಮುಂಬೈ: ಆ ಹುಡುಗಿ (ಪ್ರತ್ಯೂಷ ಬ್ಯಾನರ್ಜಿ) ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಆದರೆ ಈ ಮಾಧ್ಯಮಗಳು ಯಾಕೆ ಪ್ರತಿ ದಿನ ಅದೇ ಸುದ್ದಿಯನ್ನು  ಹೈಲೈಟ್ ಮಾಡಿ ತೋರಿಸುತ್ತಲೇ ಇರುತ್ತವೆ?  ಇಲ್ಲಿ ರೈತ ಆತ್ಮಹತ್ಯೆ ಮಾಡುತ್ತಿದ್ದರೆ ಆ ಬಗ್ಗೆ ಯಾಕೆ ಗಮನ ಹರಿಸುವುದಿಲ್ಲ? ಅವರ ಬದುಕಿಗೆ ಬೆಲೆ ಇಲ್ಲವೆ?  ಹೀಗಂತ ಪ್ರಶ್ನಿಸಿದ್ದು ಬೇರೆ ಯಾರೂ ಅಲ್ಲ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ .
ನಾನಾ ಪಾಟೇಕರ್ ಮಹರಾಷ್ಟ್ರದಲ್ಲಿ ಬರ ಪೀಡಿತ ಪ್ರದೇಶದ ರೈತರಿಗೆ ಸಹಾಯ ಮಾಡುತ್ತಲೇ ಇರುತ್ತಾರೆ. ನಾನಾ ಪಾಟೇಕರ್ ಮತ್ತು ಮರಾಠಿ ನಟ ಮಾರ್ಕಂಡ್ ಅನಾಸ್ಪುರೆ ಜತೆಗೂಡಿ ಆರಂಭಿಸಿ ನಾಮ್ ಫೌಂಡೇಷನ್ ಬರಪೀಡಿತ ಪ್ರದೇಶದ ರೈತರಿಗೆ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ.
ಮಳೆ ಕೈ ಕೊಟ್ಟ ಕಾರಣ ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ ಜಿಲ್ಲೆಗಳು ಬರ ಪೀಡಿತವಾಗಿವೆ. ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ರೈತರ ಆತ್ಮಹತ್ಯೆಯ ಬಗ್ಗೆ ಸುದ್ದಿಯೊಂದು ಪ್ರಕಟವಾಗುವುದು ಬಿಟ್ಟರೆ, ರೈತರ ಬವಣೆ ಬಗ್ಗೆ ಮಾಧ್ಯಮಗಳು ತಲೆ ಕೆಡಿಸಿಕೊಂಡಿಲ್ಲ. 
ಸರ್ಕಾರೇತರ ಸಂಸ್ಥೆಯ ಜತೆ ಸೇರಿ ಬರ ಪೀಡಿತ ಪ್ರದೇಶಗಳಿಗೆ ನಾನಾ ಸಹಾಯ ಹಸ್ತ ನೀಡುತ್ತಿದ್ದಾರೆ. ಇವರ ಈ ಎನ್‌ಜಿಒಗೆ ಕಳೆದ ಎರಡು ವಾರಗಳಲ್ಲಿ ರು. 6 ಕೋಟಿ ದೇಣಿಗೆ ಬಂದಿತ್ತು. 
ನಾನಾ ಪಾಟೇಕರ್ ಅವರಂತೆಯೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಅಮೀರ್ ಖಾನ್ ಕೂಡಾ ರೈತರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ.
ಅಮೀರ್ ಖಾನ್ ಎರಡು ಜಿಲ್ಲೆಗಳನ್ನು ದತ್ತು ಪಡೆದರೆ, ಅಕ್ಷಯ್ ಕುಮಾರ್ ರು. 50 ಲಕ್ಷ ಸಹಾಯ ಧನವನ್ನು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!