ರಚಿತಾ ರಾಮ್ 
ಸಿನಿಮಾ ಸುದ್ದಿ

ರಚಿತಾಳ ಚಕ್ರವ್ಯೂಹ

ಸಣ್ಣ ಅವಧಿಯಲ್ಲೇ ಕನ್ನಡ ಚಿತ್ರರಂಗದಲ್ಲಿ ಇಮೇಜ್ ರೂಪಿಸಿಕೊಂಡಿರುವ ಬೆಡಗಿ ರಚಿತಾ ರಾಮ್ ಈಗ ಮತ್ತೊಂದು ದೊಡ್ಡ ಬಿಡುಗಡೆಯ ತವಕದಲ್ಲಿದ್ದಾರೆ. ಅರಸಿ ಧಾರಾವಾಹಿಯಿಂದ ಹಿಡಿದು ನಂತರ

ಬೆಂಗಳೂರು: ಸಣ್ಣ ಅವಧಿಯಲ್ಲೇ ಕನ್ನಡ ಚಿತ್ರರಂಗದಲ್ಲಿ ಇಮೇಜ್ ರೂಪಿಸಿಕೊಂಡಿರುವ ಬೆಡಗಿ ರಚಿತಾ ರಾಮ್ ಈಗ ಮತ್ತೊಂದು ದೊಡ್ಡ ಬಿಡುಗಡೆಯ ತವಕದಲ್ಲಿದ್ದಾರೆ. ಅರಸಿ ಧಾರಾವಾಹಿಯಿಂದ ಹಿಡಿದು ನಂತರ ೨೦೧೩ ರ ಬುಲ್ ಬುಲ್, ದಿಲ್ ರಂಗೀಲಾ, ಅಂಬರೀಶಾ, ರನ್ನ ಮತ್ತು ರಥಾವರದಲ್ಲಿ ಕಾಣಿಸಿಕೊಂಡಿರುವ ನಟಿ ಅತಿ ಬೇಡಿಕೆಯುಳ್ಳ ನಟಿಯಾಗಿ ಹೊರಹೊಮ್ಮಿದ್ದಾರೆ.

ಪುನೀತ್ ರಾಜಕುಮಾರ್ ಜೊತೆಗೆ ಮೊದಲ ಸಿನೆಮಾದಲ್ಲಿ ನಟಿಸಿರುವ ನಟಿ ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ಹೀಗೆ "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪುನೀತ್ ಜೊತೆಗೆ ಕೆಲಸ ಮಾಡಲು ಚಕ್ರವ್ಯೂಹ ಸರಿಯಾದ ಸಿನೆಮಾ ಆಗಿತ್ತು. ಅಲ್ಲದೆ ನಿರ್ದೇಶಕ ಸರವಣನ್ ಜೊತೆಗೂ ವಿಶಿಷ್ಟ ಅನುಭವ. ಭಾಷೆಯ ಹೊರತಾಗಿಯೂ ಅವರ ಅತ್ಯುತ್ತಮ ಕೌಶಲ್ಯದಿಂದ ಎಲ್ಲಿ ಬೇಕಾದರೂ ಸಲ್ಲಬಹುದು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ" ಎನ್ನುತ್ತಾರೆ ರಚಿತಾ.

ಸರವಣನ್ ಅವರ ವೃತ್ತಿಪರತೆಯನ್ನು ಕೊಂಡಾಡುವ ರಚಿತಾ "ಕ್ಲೈಮ್ಯಾಕ್ಸ್ ವೇಳೆ ನನ್ನ ಮೊಣಕೈ ಉಳುಕಿಸಿಕೊಂಡು ಚಿತ್ರೀಕರಣಕ್ಕೆ ಹೋಗಲಾಗುತ್ತಿರಲಿಲ್ಲ. ಆದುದರಿಂದ ಡ್ಯೂಪ್ ಬಳಸಿ ಚಿತ್ರೀಕರಣ ಸಂಪೂರ್ಣಗೊಳಿಸಲು ಕೇಳಿಕೊಂಡೆ. ಆದರೆ ಅದನ್ನು ಅವರು ನಿರಾಕರಿಸಿ ನಾನು ಗುಣವಾಗುವವರೆಗೂ ಕಾದರು. ಸಿನೆಮಾ ಇಷ್ಟು ಚೆನ್ನಾಗಿ ಮೂಡಿ ಬಂದಿರುವುದಕ್ಕೆ ಸಂಗೀತ ನಿರ್ದೇಶಕ ಎಸ್ ಎಸ್ ಥಮನ್ ಮತ್ತು ಸಿನೆಮ್ಯಾಟೋಗ್ರಾಫರ್ ಶಣ್ಮುಗ ಸುಂದರಮ್ ಅವರ ಪಾತ್ರವೂ ದೊಡ್ಡದು" ಎನ್ನುತ್ತಾರೆ.

ಸಾಧು ಕೋಕಿಲಾ, ಭವ್ಯಾ, ಅಭಿಮನ್ಯು ಸಿಂಗ್ ಮತ್ತು ರಂಗಾಯಣ ರಘು ಕೂಡ ನಟಿಸಿರುವ ಚಕ್ರವ್ಯೂಹ ನಾಳೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT