ನಟಿ ಶ್ರದ್ಧಾ ಶ್ರೀನಾಥ್ 
ಸಿನಿಮಾ ಸುದ್ದಿ

ಶ್ರದ್ಧಾ ಶ್ರೀನಾಥ್ ಮುಂದಿನ ಚಿತ್ರ 'ಗೆಳೆಯನ ಗೆಳತಿ'

'ಯು-ಟರ್ನ್' ಮೂಲಕ ಚಿತ್ರರಂಗದ ಗಮನ ಸೆಳೆದ ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯಕ್ಕೆ 'ಉಳಿದವರು ಕಂಡಂತೆ' ಸಿನೆಮಾದ ತಮಿಳು ರಿಮೇಕ್ 'ನಿವಿನ್ ಪೌಲಿ'

ಬೆಂಗಳೂರು: 'ಯು-ಟರ್ನ್' ಮೂಲಕ ಚಿತ್ರರಂಗದ ಗಮನ ಸೆಳೆದ ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯಕ್ಕೆ 'ಉಳಿದವರು ಕಂಡಂತೆ' ಸಿನೆಮಾದ ತಮಿಳು ರಿಮೇಕ್ ಸಿನೆಮಾದಲ್ಲಿ ನಿವಿನ್ ಪೌಲಿ ಜೊತೆಗೆ ನಟಿಸುತ್ತಿರುವ ನಟಿ ಮಣಿರತ್ನಂ ಅವರ ಮುಂದಿನ ಚಿತ್ರ 'ಕಾಟ್ರೆ ವೇಳೆಯಿಲೈ' ನಲ್ಲಿಯೂ ಪಾತ್ರ ಪಡೆದಿದ್ದಾರೆ. 
ಕನ್ನಡದಲ್ಲಿ ಶ್ರದ್ಧಾ ಸದ್ಯಕ್ಕೆ ಸುನಿ ಅವರ 'ಆಪರೇಷನ್ ಅಲಮೇಲಮ್ಮ' ಮತ್ತು ಪ್ರದೀಪ್ ವರ್ಮಾ ಅವರ 'ಊರ್ವಿ' ಸಿನೆಮಾಗಳಲ್ಲಿ ನಟಿಸುತ್ತಿದ್ದರೆ, ಈಗ ಚೊಚ್ಚಲ ನಿರ್ದೇಶಕ ಕಿಶೋರ್ ಕುಮಾರ್ ಅವರ ಸಿನೆಮಾದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. 
ಶೀರ್ಷಿಕೆ 'ಗೆಳೆಯನ ಗೆಳತಿ' ಎಂದಿದ್ದು ಸಿನೆಮಾ ಸೆಪ್ಟೆಂಬರ್ ಎರಡನೇ ವಾರದಿಂದ ಚಿತ್ರೀಕರಣ ಪ್ರಾರಂಭಿಸಲಿದೆ. ಶ್ರದ್ಧಾ ಜೊತೆಗೆ ಪ್ರಭು ನಟಿಸಲಿದ್ದಾರೆ. ಪ್ರಭು ಕೂಡ ಸದ್ಯಕ್ಕೆ 'ಊರ್ವಿ' ಸಿನೆಮಾದಲ್ಲಿ ನಟಿಸುತ್ತಿದ್ದು, 'ಮಂಜರಿ' ಸಿನೆಮಾದ ಭಾಗವಾಗಿದ್ದಾರೆ ಕೂಡ. 
ಕನ್ನಡ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಿಶೋರ್ ಅವರಿಗೆ 8-10 ವರ್ಷಗಳ  ಅನುಭವವಿದ್ದು, ತಮಿಳು ಚಿತ್ರರಂಗದಲ್ಲಿ ಬಾಲಶೇಖರನ್ ಮತ್ತು ಶಶಿ ಅವರ ಜೊತೆಗೆ ಸಹನಿರ್ದೇಶಕನಾಗಿ ಕೂಡ ಕೆಲಸ ಮಾಡಿದ್ದಾರೆ. 
"ನಾನು ಸ್ಕ್ರಿಪ್ಟ್ ಬರೆಯುವುದರ ನಂತರ ನಿರ್ದೇಶಕರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತೇನೆ. ನಾನು ಸಿನೆಮಾದ ಸಂಪೂರ್ಣ ಪ್ರಕ್ರಿಯೆಯಲ್ಲಿ ನಿರ್ದೇಶಕರ ಜೊತೆಗೆ ದುಡಿದಿದ್ದೇನೆ" ಎನ್ನುತ್ತಾರೆ ಕಿಶೋರ್. 
"ಉಳಿದ ತಾರಾಗಣದ ಆಯ್ಕೆಯಲ್ಲಿ ನಿರತನಾಗಿದ್ದೇನೆ" ಎನ್ನುತ್ತಾರೆ ಕಿಶೋರ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT