ಬಾಲಿವುಡ್ ನಟ ನಾಸಿರುದ್ದೀನ್ ಶಾ 
ಸಿನಿಮಾ ಸುದ್ದಿ

ಖ್ಯಾತ ಸಂಗೀತಗಾರರಾದ ಕಿಶೋರ್ ಕುಮಾರ್, ಬರ್ಮನ್ ಜೀವನಾಧಾರಿತ ಚಿತ್ರ ಮಾಡದಿದ್ದರೆ ಚೆನ್ನ: ನಾಸಿರುದ್ದೀನ್

ಖ್ಯಾತ ಸಂಗೀತಗಾರರಾದ ಕಿಶೋರ್ ಕುಮಾರ್ ಮತ್ತು ಆರ್.ಡಿ ಬರ್ಮನ್ ಅವರ ಜೀವನಚರಿತ್ರೆ ಚಿತ್ರವನ್ನು ಮಾಡದಿದ್ದರೆಯೇ ಚೆನ್ನಾಗಿರುತ್ತೆ ಎಂದು ಬಾಲಿವುಡ್ ನಟ ನಾಸಿರುದ್ದೀನ್...

ಮುಂಬೈ: ಖ್ಯಾತ ಸಂಗೀತಗಾರರಾದ ಕಿಶೋರ್ ಕುಮಾರ್ ಮತ್ತು ಆರ್.ಡಿ ಬರ್ಮನ್ ಅವರ ಜೀವನಚರಿತ್ರೆ ಚಿತ್ರವನ್ನು ಮಾಡದಿದ್ದರೆಯೇ ಚೆನ್ನಾಗಿರುತ್ತೆ ಎಂದು ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರು ಬುಧವಾರ ಹೇಳಿದ್ದಾರೆ.

ಸಾಧನೆಕಾರರ ಕುರಿತ ಜೀವನಚರಿತ್ರೆಯನ್ನು ಸಿನಿಮಾ ಮಾಡುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಖ್ಯಾತ ನಿರ್ದೇಶಕ ಗುರು ದತ್ ಅವರ ಜೀವನಚರಿತ್ರೆ ಕುರಿತಂತೆ ಸಿನಿಮಾ ನಿರ್ಮಾಣವಾಗುತ್ತಿರುವ ವಿಚಾರ ತಿಳಿಯಿತು. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಉದ್ದೇಶದಿಂದ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ರೀತಿಯ ಚಿತ್ರಗಳು ಅವರ ಜೀವನ ಚರಿತ್ರೆ ಹಾಗೂ ಸಾಧನೆಗಳನ್ನು ಹಾಳು ಮಾಡುತ್ತವೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಂಗೀತ ನಿರ್ದೇಶಕರಾದ ಕಿಶೋರ್ ಕುಮಾರ್ ಮತ್ತು ಆರ್.ಡಿ. ಬರ್ಮನ್ ಅವರ ಜೀವನಚರಿತ್ರೆ ಕುರಿತಂತೆ ನಿರ್ಮಾಣವಾಗಲಿರುವ ಚಿತ್ರ ಕುರಿತಂತೆ ಮಾತನಾಡಿರುವ ಅವರು, ಈ ಚಿತ್ರಗಳನ್ನು ಮಾಡದಿರುವುದೇ ಒಳ್ಳೆಯದು. ಮಿಲ್ಕಾ ಸಿಂಗ್ ಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ಗುರು ದತ್ ಅವರ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ವಿಚಾರ ತಿಳಿಯಿತು. ಈ ಚಿತ್ರಗಳನ್ನು ಮಾಡದಿದ್ದರೆಯೇ ಚೆನ್ನಾಗಿರುತ್ತದೆ.

ಹಾಡು ಹಾಗೂ ನೃತ್ಯಗಳನ್ನೇ ಸಿನಿಮಾ ಮಾಡುವುದು ಚೆನ್ನಾಗಿರುತ್ತದೆ. ವಾಣಿಜ್ಯ ಚಿತ್ರ ನಿರ್ಮಿಸಿರುವವರು ಈ ರೀತಿಯ ಗಂಭೀರವಾದ ವಿಚಾರಗಳನ್ನು ಮುಟ್ಟದಿದ್ದರೆಯೇ ಚೆನ್ನಾಗಿರುತ್ತದೆ. ಸಾಧಕರ ಕಥೆಗಳನ್ನು ಸಿನಿಮಾ ಮಾಡುವ ಮೂಲಕ ಅವುಗಳನ್ನು ನಾಶ ಮಾಡಿಬಿಡುತ್ತಾರೆ.

ಚಿತ್ರರಂಗಕ್ಕೆ ಅಗತ್ಯವಿದ್ದಾಗ ನಾನು ಚಿತ್ರರಂಗಕ್ಕೆ ಬಂದೆ. ದೇವರ ಆಶೀರ್ವಾದ ಜನರು ನನ್ನನ್ನು ಇಷ್ಟಪಟ್ಟರು. ನವಾಜುದ್ದೀನ್ ಅಥವಾ ಇರ್ಫಾನ್ ರಂತಹ ನಟರಷ್ಟು ನಾನು ಸುಧೀರ್ಘ ಹಾಗೂ ಕಠಿಣ ಶ್ರಮವನ್ನು ಪಟ್ಟಿಲ್ಲ. ಇದೀಗ ನಟರು ಯಶಸ್ವಿಯಾಗಿದ್ದಾರೆ. ಆದರೆ, ಸುಧೀರ್ಘ ಶ್ರಮದ ಬಳಿಕ ಎಂದು ಹೇಳಿದ್ದಾರೆ.

ನಾಸಿರುದ್ದೀನ್ ಅವರು ಶಾದ್ ಅಲಿ ನಿರ್ದೇಶಿಸುತ್ತಿರುವ ಆದಿತ್ಯಾ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟಿನೆಯ 'ಓಕೆ ಜಾನುಟ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT