ನಟ ಶರಣ್ 
ಸಿನಿಮಾ ಸುದ್ದಿ

'ನಾನುಮ್ ರೌಡಿ ಧಾನ್' ಕನ್ನಡ ರಿಮೇಕ್ ನಲ್ಲಿ ಶರಣ್; ಪಿ ಸಿ ಶೇಖರ್ ನಿರ್ದೇಶನ

ತಮಿಳು ಸಿನೆಮಾ 'ನಾನುಮ್ ರೌಡಿ ಧಾನ್' ಕನ್ನಡಕ್ಕೆ ರಿಮೇಕ್ ಆಗಲಿದೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಮೂಲಗಳನ್ನು ನಂಬುವುದಾದರೆ ಈಗ ಕನ್ನಡ ಅವತರಣಿಕೆಯನ್ನು ಪಿ ಸಿ ಶೇಖರ್

ಬೆಂಗಳೂರು: ತಮಿಳು ಸಿನೆಮಾ 'ನಾನುಮ್ ರೌಡಿ ಧಾನ್' ಕನ್ನಡಕ್ಕೆ ರಿಮೇಕ್ ಆಗಲಿದೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಮೂಲಗಳನ್ನು ನಂಬುವುದಾದರೆ ಈಗ ಕನ್ನಡ ಅವತರಣಿಕೆಯನ್ನು ಪಿ ಸಿ ಶೇಖರ್ ನಿರ್ದೇಶಿಸಲಿದ್ದು, ಶರಣ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಇದು ಶೇಖರ್-ಶರಣ್ ಜೋಡಿಯ ಮೊದಲ ಚಿತ್ರ.
ಮತ್ತೊಂದು ಆಸಕ್ತಿದಾಯಕ ಅಂಶವೆಂದರೆ ಕನ್ನಡ ರಿಮೇಕ್ ಸಿನೆಮಾವನ್ನು ತಮಿಳು ನಟ ಧನುಶ್ ಅವರೇ ವಂಡರ್ ಬಾರ್ ಫಿಲಂಸ್ ಬ್ಯಾನರ್ ಅಡಿ ನಿರ್ಮಿಸಲಿದ್ದಾರಂತೆ. ನಿರ್ದೇಶಕ ಶೇಖರ್ ಮತ್ತು ನಟ ಶರಣ್ ಇದರ ಬಗ್ಗೆ ವಿವರ ನೀಡಲು ನಿರಾಕರಿಸಿದರು ಬಲ್ಲ ಮೂಲಗಳಿಂದ ತಮಿಳು ನಟ ಇದನ್ನು ನಿರ್ಮಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ. 
"ಮಾತುಕತೆಗಳು ನಡೆದಿವೆ ಮತ್ತು ಎರಡು ಕಡೆಯಿಂದ ಸಮಾನ ಆಸಕ್ತಿ ಇದೆ. ಆದರೆ ಅಧಿಕೃತ ಘೋಷಣೆಯಾಗುವವರೆಗೆ ಕಾಯಬೇಕಾಗುತ್ತದೆ" ಎನ್ನುತ್ತವೆ ಮೂಲಗಳು. 
ವಿಜ್ಞೇಶ್ ಶಿವಂ ನಿರ್ದೇಶಿಸಿದ್ದ, ವಿಜಯ್ ಸೇತುಪತಿ ಮತ್ತು ನಯನತಾರ ನಟಿಸಿದ್ದ 'ನಾನುಮ್ ರೌಡಿ ಧಾನ್' 2015 ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. 
ಶರಣ್ ಸದ್ಯಕ್ಕೆ ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ. ಇದು ಸೆಪ್ಟೆಂಬರ್ ಗೆ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಶೇಖರ್ ಕೂಡ ತಮ್ಮ ಮುಂದಿನ ಚಿತ್ರ 'ರಾಗ' ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಎಲ್ಲರ ಹುಬ್ಬೇರುವಂತೆ ಮಾಡಿದ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT