ಚಿರಂಜೀವಿ-ರೈ ಲಕ್ಷ್ಮಿ 
ಸಿನಿಮಾ ಸುದ್ದಿ

ಚಿರಂಜೀವಿ ಜೊತೆಗೆ ಹೆಜ್ಜೆ ಹಾಕಿದ್ದು ಕನಸು ನನಸಾದಂತೆ: ರೈ ಲಕ್ಷ್ಮಿ

ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಹೆಜ್ಜೆ ಹಾಕುವುದು ನಟಿ ರೈ ಲಕ್ಷ್ಮಿ ಅವರ ಬಹು ದಿನಗಳ ಆಸೆಯಾಗಿತ್ತು ಮತ್ತು ಈಗ ಆ ಆಸೆ 'ಖೈದಿ ನಂ ೧೫೦' ಸಿನೆಮಾದ ಮೂಲಕ ಸಾಕಾರಗೊಳ್ಳುತ್ತಿದು,

ಚೆನ್ನೈ: ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಹೆಜ್ಜೆ ಹಾಕುವುದು ನಟಿ ರೈ ಲಕ್ಷ್ಮಿ ಅವರ ಬಹು ದಿನಗಳ ಆಸೆಯಾಗಿತ್ತು ಮತ್ತು ಈಗ ಆ ಆಸೆ 'ಖೈದಿ ನಂ ೧೫೦' ಸಿನೆಮಾದ ಮೂಲಕ ಸಾಕಾರಗೊಳ್ಳುತ್ತಿದು, ನನ್ನ ಕನಸು ನನಸಾಗಿದೆ ಎಂದಿದ್ದಾರೆ ನಟಿ. 
ಟ್ವಿಟ್ಟರ್ ಮಾತುಕತೆಯಲ್ಲಿ ನಿಮ್ಮ ನೃತ್ಯ ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ ನನಗೆ ಈ ಅವಕಾಶ ಸಿಗಲಿದೆ ಎಂದು ಎಣಿಸಿಯೇ ಇರಲಿಲ್ಲ "ಇದು ನನ್ನ ಕನಸು ನನಸಾದಂತೆ. ಈ ದಂತಕತೆಯ ಜೊತೆಗೆ ಕುಣಿಯುವ ಅವಕಾಶ ಸಿಗಲಿದೆ ಎಂದು ಎಣಿಸಿರಲಿಲ್ಲ. ಆದರೆ ಈಗ ನೀವೆಲ್ಲ ನಂಬಲೇಬೇಕು" ಎಂದು ಲಕ್ಷ್ಮಿ ಬರೆದಿದ್ದಾರೆ. 
ವಿಶೇಷ ಹಾಡೊಂದಕ್ಕೆ ಚಿರಂಜೀವಿ ಜೊತೆಗೆ ಸಿನೆಮಾದಲ್ಲಿ ಲಕ್ಷ್ಮಿ ಹೆಜ್ಜೆ ಹಾಕಿದ್ದಾರೆ. 
ವಿವಿ ವಿನಾಯಕ್ ನಿರ್ದೇಶಿಸುತ್ತಿರುವ ಈ ಸಿನೆಮಾ ತಮಿಳು ಬ್ಲಾಕ್ ಬಸ್ಟರ್ ಚಿತ್ರ 'ಥನಿ ಒರುವಂ"ನ ರಿಮೇಕ್ . ಇದು ಚಿರಂಜೀವಿ ಅವರ ೧೫೦ನೆಯ ಚಿತ್ರ ಕೂಡ. 
ಚಿರಂಜೀವಿ ಜೊತೆಗೆ ಕಾಜಲ್ ಅಗರ್ವಾಲ್ ಮತ್ತು ತರುಣ ಅರೋರಾ ನಟಿಸಿದ್ದು, ಈ ಸಿನೆಮಾವನ್ನು ರಾಮ್ ಚರಣ್ ನಿರ್ಮಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT