ರಜನಿಕಾಂತ್ ಅವರ ಮುಂದಿನ ಬಹು ನಿರೀಕ್ಷಿತ ತಮಿಳು ವೈಜ್ಞಾನಿಕ ರೋಮಾಂಚಕ-ಸಾಹಸ ಚಿತ್ರ 2.0ನ ಚಿತ್ರೀಕರಣ ಚೆನ್ನೈಯಲ್ಲಿ ನಡೆಯುತ್ತಿದ್ದ ವೇಳೆ ಅವರ ಮೊಳಕಾಲಿಗೆ ಗಾಯವಾಗಿದೆ.ನಿನ್ನೆ ಸಂಜೆ ಘ ಘಟನೆ ನಡೆದಿದೆ.
ಚಿತ್ರದ ಪ್ರಮುಖ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಜನಿಕಾಂತ್ ಅವರ ಮೊಣಕಾಲಿಗೆ ಪೆಟ್ಟಾಗಿದೆ. ಅವರನ್ನು ಚೆಟ್ಟಿನಾಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಅವರು ಮನೆಗೆ ಹೋದರು ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಇದೀಗ ರಜನಿಕಾಂತ್ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಜನಿಕಾಂತ್ ಅವರ ಮ್ಯಾನೆಜರ್ ರಿಯಾಜ್ ಕೆ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ರಜನಿಕಾಂತ್ ಅವರು ಕೆರವಾನ್ ನಿಂದ ಹೊರಬಂದು ಜನರೆಡೆಗೆ ಕೈಬೀಸಿ ನಂತರ ಕಾರನ್ನು ಹತ್ತುವುದನ್ನು ಕಾಣಬಹುದು.
ಶಂಕರ್ ನಿರ್ದೇಶಿಸುತ್ತಿರುವ 400 ಕೋಟಿ ರೂಪಾಯಿ ಬಜೆಟ್ ನ ಚಿತ್ರ 2.0 ಆಗಿದ್ದು ಇದರಲ್ಲಿ ಅಕ್ಷಯ್ ಕುಮಾರ್, ಆಮಿ ಜಾಕ್ಸನ್, ಸುಧಾಂಶು ಪಾಂಡೆ ಮತ್ತು ಆದಿಲ್ ಹುಸೇನ್ ಮುಖ್ಯ ಪಾತ್ರದಲ್ಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos