'ರಾಗ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ರಾಗ' ಸಿನೆಮಾದಲ್ಲಿ ಅಂಧನ ಪಾತ್ರದಲ್ಲಿ ನಿರ್ಮಾಪಕ ಮಿತ್ರ

ಪಿ ಸಿ ಶೇಖರ್ ನಿರ್ದೇಶನದ ಸಂಗೀತಮಯ ಸಿನೆಮಾ 'ರಾಗ' ಮೊದಲ ನೋಟದಲ್ಲೇ ಹಲವು ಅಚ್ಚರಿಗಳನ್ನು ಮೂಡಿಸಿದೆ. ಈ ಸಿನೆಮಾದ ನಿರ್ಮಾಪಕ ಮಿತ್ರ ನಾಯಕನಟನಾಗಿರುವುದು ಅದರಲ್ಲಿ ಒಂದು.

ಬೆಂಗಳೂರು: ಪಿ ಸಿ ಶೇಖರ್ ನಿರ್ದೇಶನದ ಸಂಗೀತಮಯ ಸಿನೆಮಾ 'ರಾಗ' ಮೊದಲ ನೋಟದಲ್ಲೇ ಹಲವು ಅಚ್ಚರಿಗಳನ್ನು ಮೂಡಿಸಿದೆ. ಈ ಸಿನೆಮಾದ ನಿರ್ಮಾಪಕ ಮಿತ್ರ ನಾಯಕನಟನಾಗಿರುವುದು ಅದರಲ್ಲಿ ಒಂದು. 
ಹಾಗೆಯೇ ಮಿತ್ರ ಅವರು ಈ ಸಿನೆಮಾದಲ್ಲಿ ಅಂಧನ ಪಾತ್ರವನ್ನು ಪೋಷಿಸುತ್ತಿರುವುದು ವಿಶೇಷ. ಅವರು ಭಾಮಾ ಎದುರು ನಟಿಸಲಿದ್ದಾರೆ. 
ಹೋಟೆಲ್ ಮಾಲೀಕರು ಕೂಡ ಆಗಿರುವ ಮಿತ್ರ ಅವರ ೩೦ ಎಕರೆ ತೋಟದಲ್ಲಿ ಚಿತ್ರೀಕರಣಕ್ಕಾಗಿ ಆಕರ್ಷಕ್ ಸೆಟ್ ಹಾಕಲಾಗಿದೆ. ಈ ಸಿನೆಮಾದ ಕಲಾ ನಿರ್ದೇಶಕ ಗುಣ ಖ್ಯಾತ ಕಲಾವಿದ ಕೂಡ. ಪ್ರತಿ ದೃಶ್ಯವು ಒಂದು ಕಲಾಕೃತಿಯಂತೆ ಕಾಣಲು ಇಡೀ ಚಿತ್ರತಂಡ ಶ್ರಮವಹಿಸಿದೆಯಂತೆ. 
ಈ ಸಿನೆಮಾ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂದು ತಿಳಿಸುವ ನಿರ್ದೇಶಕ "ಈ ಸಿನೆಮಾಗೆ ಮತ್ತೊಂದು ದೊಡ್ಡ ಬೆಂಬಲ ಎಂದರೆ ಸಿನಿಮಾಟೋಗ್ರಾಫರ್ ವೈದಿ ಕೂಡ ಕಲಾವಿದನಾಗಿರುವದು" ಎನ್ನುತ್ತಾರೆ ಶೇಖರ್. 
೭೦% ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇನ್ನು ೮ ದಿನಗಳ ಚಿತ್ರೀಕರಣ ಬಾಕಿ ಉಳಿದಿರುವುದಾಗಿ ತಿಳಿಸುತ್ತದೆ. ಫೆಬ್ರವರಿಯಲ್ಲಿ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿದ್ದಾರೆ ನಿರ್ಮಾಪಕ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT