ಸಿನಿಮಾ ಸುದ್ದಿ

ಧನುಷ್ 'ವಿಐಪಿ ೨'ಗೆ ಹರಸಿದ ರಜನಿಕಾಂತ್; ಪುತ್ರಿ ಸೌಂದರ್ಯ ನಿರ್ದೇಶನ

Guruprasad Narayana
ಚೆನ್ನೈ: ತಮಿಳು ಚಿತ್ರರಂಗದ ಮೆಗಾಸ್ಟಾರ್ ರಜನಿಕಾಂತ್ ತಮ್ಮ ಅಳಿಯ ಧನುಷ್ ಅವರ ಮುಂದಿನ ತಮಿಳು ಚಿತ್ರ 'ವಿಐಪಿ ೨' ಗೆ ಆಶೀರ್ವದಿಸಿದ್ದಾರೆ. ಗುರುವಾರ ಈ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಿದೆ. 
ರಜನಿಕಾಂತ್ ಪುತ್ರಿ ಐಶ್ವರ್ಯ ಅವರನ್ನು ವರಿಸಿರುವ ಧನುಷ್ ಅವರ 'ವಿಐಪಿ ೨' ಚಿತ್ರವನ್ನು ಮೆಗಾಸ್ಟಾರ್ ಅವರ ಮತ್ತೊಬ್ಬ ಪುತ್ರಿ ಸೌಂದರ್ಯ ನಿರ್ದೇಶಿಸುತ್ತಿದ್ದಾರೆ. 
ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾದ ರಜನಿಕಾಂತ್ ಚಿತ್ರತಂಡಕ್ಕೆ ಆಶೀರ್ವದಿಸಿದ್ದಾರೆ. 
ಇದರ ಬಗ್ಗೆ ಟ್ವೀಟ್ ಮಾಡಿರುವ ಧನುಷ್ "ನಾನು ಇದಕ್ಕಿಂತಲೂ ಹೆಚ್ಚಿನದೇನು ಕೇಳಲು ಸಾಧ್ಯ? ಥಲೈವಾ ಧನ್ಯವಾದಗಳು. ನಿಮ್ಮ ಆಶೀರ್ವಾದದೊಂದಿಗೆ 'ವಿಐಪಿ ೨' ಇಂದಿನಿಂದ ಪ್ರಾರಂಭವಾಗಿದೆ. ರಘುವರನ್ ಹಿಂದಿರುಗಿದ್ದಾನೆ" ಎಂದು ಬರೆದಿದ್ದಾರೆ. 
ರಜನಿಕಾಂತ್ ಸಿನೆಮಾಗೆ ಕ್ಲಾಪ್ ಮಾಡಿರುವ ಚಿತ್ರವನ್ನು ಧನುಷ್ ಟ್ವೀಟ್ ಮಾಡಿದ್ದಾರೆ. 
"'ವಿಐಪಿ ೨' ತಂಡಕ್ಕೆ ಶುಭಾಶಯ ಕೋರುತ್ತಿದ್ದೇನೆ. ದೇವರು ಒಳ್ಳೆಯದನ್ನು ಮಾಡಲಿ" ಎಂದು ರಜನಿ ಟ್ವೀಟ್ ಮಾಡಿದ್ದಾರೆ. 
ಧನುಷ್ ಎದುರು ಈ ಸಿನೆಮಾದಲ್ಲಿ ನಟಿಸಲಿರುವ ಅಮಲಾ ಪಾಲ್ ಕೂಡ ಟ್ವೀಟ್ ಮಾಡಿದ್ದು "ಅದ್ಭುತ ಸಂತಸದ ದಿನ! ಥಲೈವಾ ಆಶೀರ್ವಾದದೊಂದಿಗೆ ಮತ್ತೆ 'ವಿಐಪಿ' ಪ್ರಯಾಣ ಪ್ರಾರಂಭವಾಗುತ್ತಿದೆ. ಇದಕ್ಕಿಂತ ಹೆಚ್ಚಿನದು ಕೇಳಲಿಕ್ಕೆ ಸಾಧ್ಯವಿಲ್ಲ" ಎಂದಿದ್ದಾರೆ. 
SCROLL FOR NEXT