ಬೆಂಗಳೂರು: ನಟ ದರ್ಶನ ತೂಗುದೀಪ್ ಅವರ ೫೦ ನೇ ಸಿನೆಮಾ ಆಗಲಿದೆ ಎಂದು ಘೋಷಿಸಲಾಗಿದ್ದ 'ಸರ್ವಾಂತರ್ಯಾಮಿ'ಗೆ ಅವರ ಸಹೋದರ ದಿನಕರ್ ತೂಗುದೀಪ್ ನಿರ್ದೇಶಕರಾಗಿದ್ದರು. ಈಗ ದಿನಕರ್ ಆ ಸಿನೆಮಾವನ್ನು ಮುಂದಕ್ಕೆ ಹಾಕಿದ್ದಾರೆ.
'ಸರ್ವಾಂತರ್ಯಾಮಿ' ತಡವಾಗುತ್ತಿರುವುದನ್ನು ಧೃಢೀಕರಿಸುವ ದಿನಕರ್ "ಈ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಲು ಇನ್ನಷ್ಟು ಸಮಯ ಬೇಕು. ನಾನು ಚಿಂತನ್ ಅವರ 'ಚಕ್ರವರ್ತಿ'ಯಲ್ಲಿ ನಟಿಸುತ್ತಿದ್ದರಿಂದ ಇದಕ್ಕೆ ಸಿಕ್ಕ ಸಮಯ ಕಡಿಮೆ. ಈ ಸಿನೆಮಾ 'ಮದುವೆಯ ಮಮತೆಯ ಕರೆಯೋಲೆ' ಬಿಡುಗಡೆ ಮಾಡಿದ ತಕ್ಷಣ ಬಂತು.
"ನನಗೆ ಈ ಹೊಸ ಸಿನೆಮಾದ ಸ್ಕ್ರಿಪ್ಟ್ ಗೆ ನೀಡಬೇಕಿದ್ದ ಸಮಯ ಸಿಗಲಿಲ್ಲ. ಆದುದರಿಂದಲೇ ಮುಂಡುತ್ತಿದ್ದೇನೆ" ಎಂದು ವಿವರಿಸುವ ದಿನಕರ್ "ಸ್ಕ್ರಿಪ್ಟ್ ಕೆಲಸ ಸಂಪೂರ್ಣವಾದ ನಂತರವಷ್ಟೇ ಇದನ್ನು ಕೈಗೆತ್ತಿಕೊಳ್ಳುತ್ತೇನೆ
"ಆದುದರಿಂದ ಇದು ದರ್ಶನ ಅವರ ಮುಂದಿನ ಸಿನೆಮಾ ಆಗಿರುವುದಿಲ್ಲ. ಮತ್ತು ಈ ಮೊದಲೇ ಹೇಳಿದ್ದಂತೆ ನನ್ನ ಪತ್ನಿ ಮಾನಸ ಬರೆದ ಮತ್ತೊಂದು ಸ್ಕ್ರಿಪ್ಟ್ ಇದೆ. 'ಸರ್ವಾಂತರ್ಯಾಮಿ'ಗಿಂತಲೂ ಮೊದಲು ಅದನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ" ಎನ್ನುತ್ತಾರೆ.
ಈಗ ದರ್ಶನ ಅವರ ೫೦ ನೆಯ ಸಿನೆಮಾವನ್ನು ಎಂ ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos