'ಕಿರಿಕ್ ಪಾರ್ಟಿ' ಸಿನೆಮಾದ ಪೋಸ್ಟರ್ 
ಸಿನಿಮಾ ಸುದ್ದಿ

'ಕಿರಿಕ್ ಪಾರ್ಟಿ'ಗೆ ಕಿರಿಕ್; ಲಹರಿ ಮ್ಯೂಸಿಕ್ ಸಂಸ್ಥೆಯಿಂದ ನೋಟಿಸ್

ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ 'ಕಿರಿಕ್ ಪಾರ್ಟಿ' ಸಿನೆಮಾ ಬಿಡುಗಡೆಗೆ ಇನ್ನೆರಡೇ ದಿನಗಳು ಬಾಕಿಯಿದ್ದು, ಹೊಸದೊಂದು ವಿವಾದದಲ್ಲಿ ಸಿಕ್ಕಿಕೊಂಡಿದೆ. ಈ ಸಿನೆಮಾದ ಹಾಡು 'ಹೇ ವೂ ಆರ್ ಯು'

ಬೆಂಗಳೂರು: ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ 'ಕಿರಿಕ್ ಪಾರ್ಟಿ' ಸಿನೆಮಾ ಬಿಡುಗಡೆಗೆ ಇನ್ನೆರಡೇ ದಿನಗಳು ಬಾಕಿಯಿದ್ದು, ಹೊಸದೊಂದು ವಿವಾದದಲ್ಲಿ ಸಿಕ್ಕಿಕೊಂಡಿದೆ. ಈ ಸಿನೆಮಾದ ಹಾಡು 'ಹೇ ವೂ ಆರ್ ಯು' ಈಗ ವಿವಾದಕ್ಕೆ ಈಡಾಗಿದೆ. 
'ಹೇ ವೂ ಆರ್ ಯು' ಹಾಡಿನ ಟ್ಯೂನ್ ಗೆ ಲಹರಿ ಆಡಿಯೋ ಸಂಸ್ಥೆ ಆಕ್ಷೇಪಿಸಿದ್ದು, ಇದು ಅವರ  ಒಡೆತನದ 'ಶಾಂತಿ ಕ್ರಾಂತಿ' ಸಿನೆಮಾದ 'ಮಧ್ಯ ರಾತ್ರೀಲಿ' ಹಾಡಿನ ಟ್ಯೂನ್ ನ ನಕಲು ಎಂದು ಕಾನೂನು ನೋಟಿಸ್ ನೀಡಿದೆ. ಈ ಹಾಡನ್ನು ಸಿನೆಮಾದಿಂದ ತೆಗೆದು ಹಾಕಿದರೆ ಸಿನೆಮಾ ಬಿಡುಗಡೆಗೆ ಯಾವುದೇ ಆಕ್ಷೇಪ ಇಲ್ಲ ಎಂದು ಕೂಡ ಲಹರಿ ಸಂಸ್ಥೆ ನೀಡಿರುವ ನೋಟಿಸ್ ನಲ್ಲಿ ತಿಳಿಸಿದೆ. 
ಇದರ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ನಟ ರಕ್ಷಿತ್ ಶೆಟ್ಟಿ, ಈ ಹಾಡನ್ನು ತೆಗೆದುಹಾಕಿ ಸಿನೆಮಾ ಬಿಡುಗಡೆ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. "ಈ ಹಾಡನ್ನು ಹಲವು ವಾರಗಳ ಮೊದಲೇ ಬಿಡುಗಡೆ ಮಾಡಲಾಗಿತ್ತಾದರೂ, ಲಹರಿ ಮ್ಯೂಸಿಕ್ ಈ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದರಿಂದ, ನಮ್ಮ ವಾದವನ್ನು ನ್ಯಾಯಾಲಯಕ್ಕೆ ಹೇಳಲು ಸಮಯ ಇಲ್ಲವಾಗಿರುವುದರಿಂದ ಒತ್ತಾಯಪೂರ್ವಕವಾಗಿ ಈ ಹಾಡನ್ನು ಕತ್ತರಿಸಬೇಕಿದೆ. ಇದು ಬಹಳ ನೋವಿನ ಸಂಗತಿ. 'ಹೇ ವೂ ಆರ್ ಯು' ಹಾಡು, ಹಂಸಲೇಖ ಮತ್ತು ರವಿಚಂದ್ರನ್ ಅವರಿಗೆ ಗೌರವ ಸಲ್ಲಿಸಲು ಬರೆದಿದ್ದ ಹಾಡು. ಮೊದಲೇ ಹೇಳಿದಂತೆ ಈ ಇಬ್ಬರು ದಂತಕತೆಗಳಿಂದ ಸ್ಫುರ್ತಿ ಪಡೆದು ಹೊಸ ಹಾಡನ್ನು ಸೃಷ್ಟಿಸಿದ್ದೆವು. ನಾವು ಯಾವುದೇ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರಾಮಾಣಿಕವಾಗಿ ನಂಬಿದ್ದೇವೆ. ನಮ್ಮ ಉದ್ದೇಶವನ್ನು ತಪ್ಪಾಗಿ ಗ್ರಹಿಸಿರುವುದು ದುರಂತ. ಈ ಕಾನೂನು ವಿವಾದ ಬಗೆಹರಿದ ಮೇಲೆ ಈ ಹಾಡನ್ನು ಸಿನೆಮಾದಲ್ಲಿ ಒಳಗೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದೇವೆ. ನೀವು ಸಿನೆಮಾವನ್ನು ಇಷ್ಟ ಪಡುತ್ತೀರಾ ಎಂದು ನಂಬಿದ್ದೇನೆ. ನಿಮ್ಮೆಲ್ಲರ ಸಹಕಾರಕ್ಕೆ ಶರಣು" ಎಂದು ಬರೆದುಕೊಂಡಿದ್ದಾರೆ. 
ಈ ಹಾಡು ಸಾಮಾಜಿಕ ಜಾಲತಾಣದ್ಲಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT