ಸಿನಿಮಾ ಸುದ್ದಿ

ಬುಲೆಟ್ ಪ್ರಕಾಶ್ ಗೆ ಜೀವ ಬೆದರಿಕೆ: ದಿನಕರ್ ತೂಗುದೀಪ್ ವಿರುದ್ಧ ದೂರು

Vishwanath S

ಬೆಂಗಳೂರು: ನಿರ್ದೇಶಕ-ನಿರ್ಮಾಪಕ ದಿನಕರ್ ತೂಗುದೀಪ್ ಅವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಹಾಸ್ಯನಟ ಬುಲೆಟ್ ಪ್ರಕಾಶ್ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಅಮೃತಹಳ್ಳಿಯ ಪೊಲೀಸ್ ಠಾಣೆಯಲ್ಲಿ ಬುಲೆಟ್ ಪ್ರಕಾಶ್ ದಿನಕರ್ ಹಾಗೂ ಪಿಸ್ತಾ ಸೀನು ವಿರುದ್ಧ ಕೊಲೆ ಬೆದರಿಕೆ ದೂರು ದಾಖಲಿಸಿದ್ದಾರೆ.

ನಿನ್ನೆ ರಾತ್ರಿ ದಿನಕರ್ ತೂಗುದೀಪ ಹಾಗೂ ಅವರ ಸಹಚರರು ಕೆಂಪಾಪುರ ಬಳಿಯ ರಾಜನ್ ಸ್ಟುಡಿಯೋ ಮುಂದೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನನ್ನು ಜೀವಂತವಾಗಿರಲು ಬಿಡುವುದಿಲ್ಲ ಅಂತ ಪ್ರಾಣ ಬೆದರಿಕೆ ಹಾಕಿದ್ದರಂತೆ ಈ ಸಂಬಂಧ ದೂರು ದಾಖಲಿಸಿದ್ದಾರೆ.

ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾ ಸೆಟ್‍ನಲ್ಲಿ ದಿನಕರ್ ತೂಗುದೀಪ ಬುಲೆಟ್ ಪ್ರಕಾಶ್ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರಂತೆ. ಈ ವಿಷಯ ತಿಳಿದ ಬುಲೆಟ್ ಪ್ರಕಾಶ್ ಫೋನ್ ಮಾಡಿ ಮಾತನಾಡಿದಾಗ ದಿನಕರ್ ಬಾಯಿಗೆ ಬಂದಂತೆ ಬುಲೆಟ್ ಪ್ರಕಾಶ್‍ಗೆ ಬೈದಿದ್ದಾರೆ.

ಅಲ್ಲದೇ ಸಿನಿಮಾವೊಂದಕ್ಕೆ ದರ್ಶನ್ ಡೇಟ್ ಪಡೆದಿದ್ದರಿಂದ ಆಕ್ರೋಶಗೊಂಡಿರುವ ದಿನಕರ್, ಬುಲೆಟ್ ಪ್ರಕಾಶ್ ಅದು ಹೇಗೆ ಸಿನಿಮಾ ಮಾಡುತ್ತಾನೆ ನೋಡುತ್ತಿನಿ ಅಂತೆಲ್ಲಾ ಕೆಟ್ಟದಾಗಿ ಮಾತನಾಡಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ದಿನಕರ್ ಬುಲೆಟ್ ಪ್ರಕಾಶ್ ಮನೆಯ ಬಳಿ ಬರುವುದಾಗಿ ತಿಳಿಸಿದರು. ಆದರೆ ಮನೆ ಬಳಿ ಬರಲು ಒಪ್ಪದ ಬುಲೆಟ್ ಪ್ರಕಾಶ್ ರಾಜನ್ ಸ್ಟುಡಿಯೋ ಬಳಿ ಬರಲು ತಿಳಿಸಿದ್ದರು. ಇಲ್ಲಿಗೆ ದಿನಕರ್ ಹಾಗೂ ಅವರ ಸಹಚರರು ಬುಲೆಟ್ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.

SCROLL FOR NEXT