ನಿರ್ದೇಶಕ ಎ ಹರ್ಷ 
ಸಿನಿಮಾ ಸುದ್ದಿ

ಜಯಣ್ಣ ಕಂಬೈನ್ಸ್ ನಿಂದ 'ಕಪಿ ಚೇಷ್ಟೆ'?

'ಜೈ ಮಾರುತಿ ೮೦೦' ನಂತರ ನಿರ್ದೇಶಕ ಎ ಹರ್ಷ ಹಾಗು ನಿರ್ಮಾಪಕರಾದ ಜಯಣ್ಣ ಭೋಗೇಂದ್ರ 'ಕಪಿ ಚೇಷ್ಟೆ' ಸಿನೆಮಾಗಾಗಿ ಮತ್ತೆ ಒಗ್ಗೂಡಲಿದ್ದಾರೆ ಎನ್ನುತ್ತದೆ...

ಬೆಂಗಳೂರು: 'ಜೈ ಮಾರುತಿ ೮೦೦' ನಂತರ ನಿರ್ದೇಶಕ ಎ ಹರ್ಷ ಹಾಗು ನಿರ್ಮಾಪಕರಾದ ಜಯಣ್ಣ ಭೋಗೇಂದ್ರ 'ಕಪಿ ಚೇಷ್ಟೆ' ಸಿನೆಮಾಗಾಗಿ ಮತ್ತೆ ಒಗ್ಗೂಡಲಿದ್ದಾರೆ ಎನ್ನುತ್ತದೆ ಗಾಂಧಿನಗರದ ವದಂತಿ. ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ಮೂಲಗಳ ಪ್ರಕಾರ ನಿರ್ಮಾಪಕ ಜಯಣ್ಣನವರಿಗೆ ಸ್ಕ್ರಿಪ್ಟ್ ಮತ್ತು ಹರ್ಷ ಅವರ ಕೆಲಸ ಮಾಡುವ ರೀತಿ ಇಷ್ಟವಾಗಿದ್ದು, ಜಯಣ್ಣ ಕಂಬೈನ್ಸ್ ಅಡಿ ಈ ಸಿನೆಮಾ ನಿರ್ಮಿಸಲು ಉತ್ಸುಕರಾಗಿದ್ದಾರಂತೆ.

ಈಗ ಹರ್ಷ 'ಜೈ ಮಾರುತಿ ೮೦೦' ಚಿತ್ರೀಕರಣದ ನಂತರದ ಕೆಲಸಗಳಲ್ಲಿ ನಿರತವಾಗಿದ್ದು, ಅದರ ಬಿಡುಗಡೆಯ ನಂತರವೇ 'ಕಪಿ ಚೇಷ್ಟೆ' ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ. 'ಜೈ ಮಾರುತಿ ೮೦೦' ಸಿನೆಮಾದ ಮುಖ್ಯ ತಾರಾಗಣದಲ್ಲಿ ಶರಣ್, ಶೃತಿ ಹರಿಹರನ್ ಮತ್ತು ಶುಭಾ ಪೂಂಜಾ ನಟಿಸುತ್ತಿದ್ದು, ನೃತ್ಯ ನಿರ್ದೇಶಕನಾಗಿ ಹರ್ಷ ಅವರ ಬಹು ದಿನದ ಗೆಳೆಯ ಮೋಹನ್ ಕುಮಾರ್ ಪಾದಾರ್ಪಣೆ ಮಾಡಲಿದ್ದಾರೆ.

'ಜೈ ಮಾರುತಿ ೮೦೦' ಸಿನೆಮಾಗೆ ಚಾಲನೆ ನೀಡುವ ವೇಳೆಯಲ್ಲಿ ಶಿವರಾಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ 'ಕಪಿ ಚೇಷ್ಟೆ' ಸಿನೆಮಾದ ಬಗ್ಗೆ ಘೋಷಣೆ ಮಾಡಿದ್ದರು ಹರ್ಷ. ಆಗ ಈ ಸಿನೆಮಾದಲ್ಲಿ ಅತಿಥಿ ನಟನಾಗಿ ನಟಿಸಲು ಆಸಕ್ತಿ ತೋರಿದ್ದವರು ಶಿವಣ್ಣ. ಶಿವಣ್ಣನಿಗೆ ಯಾವ ಪಾತ್ರ ಸಿಕ್ಕಬಹುದು ಎಂಬುದು ಕೂಡ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

'ಕಪಿ ಚೇಷ್ಟೆ' ಪ್ರೇಮ ಸಂದೇಶವುಳ್ಳ ಆಕ್ಷನ್ ಸಿನೆಮಾವಂತೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT