ವರನಟ ರಾಜಕುಮಾರ್ ಅವರ ತಮ್ಮ ದಿವಂಗತ ಎಸ್ ಪಿ ವರದರಾಜ್ 
ಸಿನಿಮಾ ಸುದ್ದಿ

ವರದರಾಜು ಜೀವನ ಶೀಘ್ರದಲ್ಲೇ ಸಿನೆಮಾ ಆಗಲಿದೆ: ಶಿವರಾಜ್ ಕುಮಾರ್

ರಂಗಭೂಮಿ ಕಲಾವಿದರಾದ ಡಿಂಗ್ರಿ ನಾಗರಾಜು ಮತ್ತು ಕೊಟ್ಟೂರು ಕೋಮಲಮ್ಮ ಈ ವರ್ಷದ 'ಎಸ್ ಪಿ ವರದರಾಜು ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ.

ಬೆಂಗಳೂರು: ರಂಗಭೂಮಿ ಕಲಾವಿದರಾದ ಡಿಂಗ್ರಿ ನಾಗರಾಜು ಮತ್ತು ಕೊಟ್ಟೂರು ಕೋಮಲಮ್ಮ ಈ ವರ್ಷದ 'ಎಸ್ ಪಿ ವರದರಾಜು ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ಭಾನುವಾರ ಈ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜಕುಮಾರ್, ತಮ್ಮ ಚಿಕ್ಕಪ್ಪ ಎಸ್ ಪಿ ವರದರಾಜ್ ಅವರ ಜೀವನಾಧಾರಿತ ಸಿನೆಮಾವನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದಿದ್ದಾರೆ.

ಈ ಸಿನೆಮಾದ ಹೆಸರು 'ಅಪ್ಪಣ್ಣ' ಇರಬಹುದು ಎಂಬ ಸುಳಿವು ಕೂಡ ನೀಡಿದ್ದಾರೆ. ವರನಟ ರಾಜಕುಮಾರ್ ಅವರ ತಮ್ಮ ವರದರಾಜ್ ಅವರನ್ನು ಪ್ರೀತಿಯಿಂದ ಅಪ್ಪಣ್ಣ ಎಂದೆ ಕರೆಯಲಾಗುತ್ತಿತ್ತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ರಾಜಕುಮಾರ್ ಅವರ ಜೀವನ ರೂಪಿಸುವುದಕ್ಕೆ ಕಾರಣರಾದ ವರದರಾಜ್ ಅವರ ಕಾಣಿಕೆಗಳನ್ನು ನೆನಪಿಸಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

SCROLL FOR NEXT