ಅಜಯ್ ರಾವ್ 
ಸಿನಿಮಾ ಸುದ್ದಿ

ಕೃಷ್ಣ ರುಕ್ಕು: ರೋಮ್ಯಾನ್ಸ್ ಮತ್ತು ಸಾಹಸ ಮತ್ತು ಹುಲಿ!

ಅನಿಲ್ ಕುಮಾರ್ ನಿರ್ದೇಶನದ ಅಜಯ್ ರಾವ್ ಮತ್ತು ಅಮೂಲ್ಯ ನಟನೆಯ ಕೃಷ್ಣ ರುಕ್ಕು ಸಿನೆಮಾದ ಚಿತ್ರೀಕರಣದ ಸೆಟ್ ನಲ್ಲಿ ಹುಲಿಯೊಂದು ಸುಳಿದಾಡಿದರೂ ಚಿತ್ರೀಕರಣ

ಬೆಂಗಳೂರು: ಅನಿಲ್ ಕುಮಾರ್ ನಿರ್ದೇಶನದ ಅಜಯ್ ರಾವ್ ಮತ್ತು ಅಮೂಲ್ಯ ನಟನೆಯ ಕೃಷ್ಣ ರುಕ್ಕು ಸಿನೆಮಾದ ಚಿತ್ರೀಕರಣದ ಸೆಟ್ ನಲ್ಲಿ ಹುಲಿಯೊಂದು ಸುಳಿದಾಡಿದರೂ ಚಿತ್ರೀಕರಣ ಮುಂದುವರಿಸಲಾಯಿತಂತೆ.

ಈ ಚಿತ್ರೀಕರಣದ ಗಳಿಗೆಯ ರೋಚಕತೆಯನ್ನು ಹಂಚಿಕೊಳ್ಳುವ ನಿರ್ಮಾಪಕ ಉದಯ್ ಮೆಹ್ತಾ, "ಈ ಸಿನೆಮಾದ ಕೆಲವು ಭಾಗಗಳನ್ನು ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯನಗಿರಿ ಬೆಟ್ಟದ ತಪ್ಪಲಿನಲ್ಲಿರುವ ೩೦೦ ವರ್ಷ ಹಳೆಯ ಮನೆಯಲ್ಲಿ ನಡೆಸಲಾಗಿತ್ತು. ಈ ಭಾಗದಲ್ಲಿ ಹುಲಿಗಳಿರುವುದು ನಮ್ಮ ಚಿತ್ರತಂಡಕ್ಕೆ ತಿಳಿದಿತ್ತು. ಒಂದು ದಿನ ಅರಣ್ಯಾಧಿಕಾರಿಗಳಲ್ಲೊಬ್ಬರು ಬಂದು ಆ ಮನೆಯ ಸುತ್ತ ಹುಲಿಯಿರುವ ವಿಷಯ ತಿಳಿಸಿದರು"

"ಅದು ಚಿತ್ರೀಕರಣದ ಕೊನೆಯ ದಿನವಾಗಿತ್ತು. ಆ ಹಿಂದಿನ ರಾತ್ರಿ ಹುಲಿ ಮನೆಯ ಹತ್ತಿರವೇ ಸುಳಿದಾಡುತ್ತಿತ್ತು ಎಂದು ಆ ಮನೆಯ ಮಾಲೀಕ ತಿಳಿಸಿದರು. ಹೀಗಿದ್ದರೂ ನಾವು ಚಿತ್ರೀಕರಣವನ್ನು ನಿಲ್ಲಿಸದೆ, ಯಾರೂ ಒಬ್ಬಂಟಿಯಾಗಿ ಒಡಾಡದಂತೆ ತಿಳಿಸಿ, ಗುಂಪುಗಳಲ್ಲೇ ಎಲ್ಲ ಕೆಲಸವನ್ನು ಮಾಡಿಕೊಂಡು ಚಿತ್ರೀಕರಣ ಮುಗಿಸಿದೆವು" ಎಂದು ವಿವರಿಸುತ್ತಾರೆ ಮೆಹ್ತಾ.

ಈ ಪ್ರದೇಶ ಮುಥೋಡಿ ಅಭಯಾರಣ್ಯದಿಂದ ಕೇವಲ ೧೮ ಕಿಮೀ ದೂರದಲ್ಲಿದ್ದರಿಂದ ಹುಲಿ ಅಲ್ಲಿ ಓಡಾಡುವುದು ಸರ್ವೇ ಸಾಮಾನ್ಯ ಎಂದು ತಿಳಿದುಬಂತು ಎನ್ನುತಾರೆ ಮೆಹ್ತಾ.

ಹಾಗೆಯೇ ಚಲನಚಿತ್ರದ ಪ್ರಾರಂಭಿಕ ದೃಶ್ಯವನ್ನು ಜಲಪಾತದ ತುತ್ತತುದಿಯಲ್ಲಿ ಚಿತ್ರೀಕರಿಸಬೇಕಿದ್ದರಿಂದ, ಈ ತ್ರಾಸದ ಚಿತ್ರೀಕರಣಕ್ಕೆ ಹಲವಾರು ತಾಸುಗಳ ಸಮಯ ಹಿಡಿಯಿತಂತೆ.

ಈ ರೊಮ್ಯಾಂಟಿಕ್ ಚಿತ್ರದ ಹಿಂದಿನ ಸಾಹಸವನ್ನು ಜನ ಮೆಚ್ಚಲಿದ್ದಾರೆ ಎನ್ನುತ್ತಾರೆ ನಿರ್ಮಾಪಕ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT