ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಪುನೀತ್ ಚಿತ್ರ ನಿರ್ದೇಶಿಸಲಿರುವ ನಂದ ಕಿಶೋರ್

ಸಾಲು ಸಾಲು ಸಿನೆಮಾಗಳ ನಿರ್ದೇಶನದಲ್ಲಿ ನಿರತರಾಗಿರುವ ನಿರ್ದೇಶಕ ನಂದ ಕಿಶೋರ್, ಸದ್ಯಕ್ಕೆ ಪ್ರದೀಪ್ ನಟನೆಯ 'ಟೈಗರ್' ಸಿನೆಮಾದ ಹಾಡುಗಳ ಚಿತ್ರೀಕರಣದಲ್ಲಿ

ಬೆಂಗಳೂರು: ಸಾಲು ಸಾಲು ಸಿನೆಮಾಗಳ ನಿರ್ದೇಶನದಲ್ಲಿ ನಿರತರಾಗಿರುವ ನಿರ್ದೇಶಕ ನಂದ ಕಿಶೋರ್, ಸದ್ಯಕ್ಕೆ ಪ್ರದೀಪ್ ನಟನೆಯ 'ಟೈಗರ್' ಸಿನೆಮಾದ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಂತರ ಅವರು 'ಓ ಮೈ ಗಾಡ್' ಸಿನೆಮಾದ ಕನ್ನಡ ಅವತರಿಣಿಕೆ ನಿರ್ದೇಶಿಸಲಿದ್ದು, ಇದರಲ್ಲಿ ಸುದೀಪ್ ಮತ್ತು ಉಪೇಂದ್ರ ನಟಿಸುತ್ತಿದ್ದಾರೆ ಅವರ ಮುಂದಿನ ಚಿತ್ರದಲ್ಲಿ ಪುನೀತ್ ರಾಜಕುಮಾರ್ ನಟಿಸಲಿದ್ದಾರಂತೆ. ತೆಲುಗು ಮತ್ತು ತಮಿಳು ಸಿನೆಮಾಗಳನ್ನು ನಿರ್ಮಿಸುತ್ತಿದ್ದ ಎ ಎಂ ರತ್ನಂ ಈಗ ಮೊದಲ ಬಾರಿಗೆ ಈ ಸಿನೆಮಾದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರೋದ್ಯಮಕ್ಕೆ ಧುಮುಕಲಿದ್ದಾರೆ.

ಈ ಯೋಜನೆ ಮಾರ್ಚ್ ನಿಂದ ಪ್ರಾರಂಭವಾಗಲಿದ್ದು, ಶಿವ ನಿರ್ದೇಶನದ ಮತ್ತು ಅಜಿತ್ ನಟಿಸಿದ್ದ ತಮಿಳು ಚಿತ್ರ 'ವೇದಾಲಮ್'ನ ರಿಮೇಕ್ ಎನ್ನಲಾಗಿದೆ.

ಇದನ್ನು ಧೃಢೀಕರಿಸಿರುವ ನಂದ "ಹೌದು ಎ ಎಂ ರತ್ನಂ ನಿರ್ಮಿಸುತ್ತಿರುವ ಸಿನೆಮಾದಲ್ಲಿ ಪುನೀತ್ ಅವರನ್ನು ನಿರ್ದೇಶಿಸಲಿದ್ದೇನೆ. ಎಲ್ಲವೂ ಮಾತಿನಲ್ಲಿ ಒಪ್ಪಿಗೆಯಾಗಿದೆ. ಅವರು ಶಬರಿಮಲೈನಿಂದ ಬಂದ ಮೇಲೆ ನಿರ್ಮಾಪಕರು ಅಧಿಕೃತ ಘೋಷಣೆ ಮಾಡಲಿದ್ದಾರೆ" ಎಂದಿದ್ದಾರೆ.

"ಡಾ. ರಾಜಕುಮಾರ್ ಕುಟುಂಬದ ಸದಸ್ಯರೊಂದಿಗೆ ಕೆಲಸ ಮಾಡುವುದ ಗೌರವ" ಎನ್ನುತ್ತಾರೆ ನಂದ.

ಇವಿಷ್ಟೇ ಅಲ್ಲದೆ, ನಟ ಧೃವ್ ಅವರ ಒಂದು ಸಿನೆಮಾ ಕೂಡ ನಿರ್ದೇಶಿಸಲಿದ್ದು ಶರಣ್ ಮತ್ತು ಶ್ರೀಮುರಳಿ ಅವರ ಯೋಜನೆಗಳೂ ಕೂಡ ಸಾಲಿನಲ್ಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT