ಯಶ್ 
ಸಿನಿಮಾ ಸುದ್ದಿ

ಯಶ್ ಸಿನೆಮಾದಿಂದ ಆದಿತ್ಯ ಔಟ್

ಹೇಶ್ ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಯಶ್ ನಟನೆಯ ಸಿನೆಮಾಗೆ ಹಲವಾರು ಬದಲಾವಣೆಗಳಾಗುತ್ತಿವೆ. ಈ ಸಿನೆಮಾದಲ್ಲಿ ಯಶ್ ಎದುರು ಪ್ರಮುಖ ಪಾತ್ರವೊಂದರಲ್ಲಿ

ಬೆಂಗಳೂರು: ಮಹೇಶ್ ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಯಶ್ ನಟನೆಯ ಸಿನೆಮಾಗೆ ಹಲವಾರು ಬದಲಾವಣೆಗಳಾಗುತ್ತಿವೆ. ಈ ಸಿನೆಮಾದಲ್ಲಿ ಯಶ್ ಎದುರು ಪ್ರಮುಖ ಪಾತ್ರವೊಂದರಲ್ಲಿ ನಟಿಸಬೇಕಿದ್ದ ಆದಿತ್ಯ ಕೊನೆ ಘಳಿಗೆಯಲ್ಲಿ ಯೋಜನೆಯಿಂದ ಹೊರಬಂದಿದ್ದಾರೆ. "ಬದಲಾಯಿಸಲು ಸಾಧ್ಯವಾಗದ ಕಾರಣಗಳಿಂದ ಯಶ್ ಸಿನೆಮಾದಿಂದ ಹೊರಬರಬೇಕಾಯಿತು... ತಂಡಕ್ಕೆ ಶುಭಾಶಯಗಳು!" ಎಂದು ಆದಿತ್ಯ ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ಮಹೇಶ್ ಹೇಳುವ ಪ್ರಕಾರ ನಟನಿಗೆ ಒಂದು ವಿಧವಾದ ಲುಕ್ ಬೆಳೆಸಿಕೊಳ್ಳಲು ಆದಿತ್ಯ ಅವರಿಗೆ ತಿಳಿಸಿದ್ದರಂತೆ. "ಅವರ ಮುಂದಿನ ಸಿನೆಮಾ 'ನಾನೇ ನೆಕ್ಸ್ಟ್ ಸಿ ಎಂ' ಮುಂದೂಡಲಾಗಿದೆ. ಅವರು ನಾನು ಹೇಳಿದ ಮುಖಛಾಯೆ ಹೊಂದಿದ್ದರೆ ಅವರ ಮುಂದಿನ ಸಿನೆಮಾಗೆ ಕಷ್ಟವಾಗುತ್ತದೆ. ನಾವು ಕೃತಕ ಗಡ್ಡ ಮೀಸೆಯೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ ಆದುದರಿಂದ ಈ ಧೃಢ ನಿರ್ಧಾರಕ್ಕೆ ಬರಬೇಕಾಯಿತು" ಎನ್ನುತ್ತಾರೆ.

ಆದುದರಿಂದ ಈ ಸಿನೆಮಾದ ನಿರ್ಮಾಪಕರು ಈಗ ಆದಿತ್ಯ ಜಾಗಕ್ಕೆ ಹೊಸ ಮುಖದ ಹುಡುಕಾಟದಲ್ಲಿದ್ದಾರೆ. ಅಲ್ಲದೆ ಸಿನೆಮ್ಯಾಟೋಗ್ರಾಫರ್ ಸುಧಾಕರ್ ರಾಜ್ ಅವರನ್ನು ಆಂಡ್ರ್ಯೂ ಬಾಬು ಬದಲಾಯಿಸಿದ್ದಾರೆ. "ಸುಧಾಕರ್ ಅವರು ನಂದಕಿಶೋರ್ ನಿರ್ದೇಶನದ 'ಟೈಗರ್' ಮುಗಿಸಬೇಕಿದೆ. ಮತ್ತು ಅವರು ಮುಂದಿನ ಸಿನೆಮಾ ಕೈಗೆತ್ತಿಕೊಳ್ಳುವ ಮೊದಲು ಸದ್ಯದ ಸಿನೆಮಾ ಮುಗಿಸುವಂತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರೂ ಕೂಡ ನನ್ನ ಗೆಳೆಯರಾಗಿರುವುದರಿಂದ ನನಗೆ ಕಷ್ಟ ಅರ್ಥವಾಗುತ್ತದೆ" ಎನ್ನುತ್ತಾರೆ ಮಹೇಶ್.

ಯಶ್ ಅವರ ಜನ್ಮ ದಿನವಾದ ಮಾರ್ಚ್ ೮ ರಂದು ಸಿನೆಮಾದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಮಹೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT