ಬಾಲಿಕಾ ವಧು ಖ್ಯಾತಿಯ ನಟಿ ಪ್ರತ್ಯೂಷಾ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

"ಬಾಲಿಕಾವಧು" ನಟಿ ಪ್ರತ್ಯೂಷಾಗೆ ಕಿರುಕುಳ..?

ಕಿರುಕುಳ ನೀಡಿದ ಆರೋಪದ ಮೇಲೆ "ಬಾಲಿಕಾ ವಧು" ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಸೋಮವಾರ ರಾತ್ರಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ...

ಮುಂಬೈ: ಕಿರುಕುಳ ನೀಡಿದ ಆರೋಪದ ಮೇಲೆ "ಬಾಲಿಕಾ ವಧು" ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಸೋಮವಾರ ರಾತ್ರಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ  ಎಂದು ತಿಳಿದುಬಂದಿದೆ.

ಮುಂಬೈನ ಕಂಡಿವಾಲಿ ಪ್ರದೇಶದಲ್ಲಿರುವ ನಟಿ ಪ್ರತ್ಯೂಷಾ ಮನೆಗೆ ಪೊಲೀಸರು ಎಂದು ಹೇಳಿಕೊಂಡು ಬಂದ 8 ಮಂದಿ, ನಟ ರಾಹುಲ್ ರಾಜ್ ಸಿಂಗ್ ಬಗ್ಗೆ ವಿಚಾರಿಸಿದರು. ಆತ ಮನೆಯಲ್ಲಿ  ಇಲ್ಲ ಎಂದು ನಾನು ಹೇಳಿದ್ದೆ. ಆದರೆ ನನ್ನ ಮಾತನ್ನು ನಂಬದ ಅವರು, ಬಲವಂತವಾಗಿ ನನ್ನನ್ನು ತಳ್ಳಿ ಮನೆ ಪ್ರವೇಶಿಸಿದ್ದರು. ಅಲ್ಲದೆ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು ಎಂದು ನಟಿ ಪ್ರತ್ಯೂಷಾ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಘಟನೆಯಿಂದ ನಿಜಕ್ಕೂ ನಾನು ತುಂಬಾ ಅಸಮಾಧಾನಗೊಂಡಿದ್ದು, ಈ ಕೂಡಲೇ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಮಾಡಿ ದೂರು ಸಲ್ಲಿಸುತ್ತೇನೆ. ಸಾರ್ವಜನಿಕರೊಂದಿಗೆ  ಪೊಲೀಸರು ನಡೆದುಕೊಳ್ಳುವ ಪರಿ ಇದೆ ಏನೂ..? ಎಂದು ಪ್ರತ್ಯೂಷಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ 8 ಮಂದಿಯ ಪೈಕಿ ಮೂವರು ಪೊಲೀಸ್  ಪೇದೆಗಳಾಗಿದ್ದು, ಉಳಿದವರು ಪೊಲೀಸರೇ ಅಲ್ಲ. ಆದರೂ ಬಲವಂತವಾಗಿ ಮನೆಗೆ ನುಗ್ಗಿದ್ದರು. ಹೀಗಾಗಿ ನಟಿ ಪ್ರತ್ಯೂಷಾ ಪೊಲೀಸರು ಸೇರಿದಂತೆ ಎಲ್ಲ 8 ಮಂದಿ ವಿರುದ್ಧ ದೂರು  ದಾಖಲಿಸಿದ್ದಾರೆ.

ನಟ ರಾಹುಲ್ ರಾಜ್ ಸಿಂಗ್ ಇತ್ತೀಚೆಗೆ ಕಾರು ಖರೀದಿಗಾಗಿ ಬ್ಯಾಂಕ್ ನಿಂದ ಲೋನ್ ಪಡೆದಿದ್ದರು. ಆದರೆ ಈ ಸಾಲವನ್ನು ಅವರು ಸರಿಯಾಗಿ ತೀರಿಸಿರಲಿಲ್ಲ. ಇದೇ ಕಾರಣಕ್ಕಾಗಿ ರಾಹುಲ್  ರಾಜ್ ಸಿಂಗ್ ರನ್ನು ಹುಡುಕಿಕೊಂಡು ಸಾಲ ವಸೂಲಾತಿ ತಂಡದವರು ಮತ್ತು ಪೊಲೀಸರು ನಟಿ ಪ್ರತ್ಯೂಷಾ ಅವರ ಮನೆಗೆ ತೆರಳಿದ್ದರು. ಈ ವೇಳೆ ನಟಿ ಪ್ರತ್ಯೂಷಾ ಹಾಗೂ ಬ್ಯಾಂಕ್  ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT