ಬಾಲಿಕಾ ವಧು ಖ್ಯಾತಿಯ ನಟಿ ಪ್ರತ್ಯೂಷಾ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

"ಬಾಲಿಕಾವಧು" ನಟಿ ಪ್ರತ್ಯೂಷಾಗೆ ಕಿರುಕುಳ..?

ಕಿರುಕುಳ ನೀಡಿದ ಆರೋಪದ ಮೇಲೆ "ಬಾಲಿಕಾ ವಧು" ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಸೋಮವಾರ ರಾತ್ರಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ...

ಮುಂಬೈ: ಕಿರುಕುಳ ನೀಡಿದ ಆರೋಪದ ಮೇಲೆ "ಬಾಲಿಕಾ ವಧು" ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಸೋಮವಾರ ರಾತ್ರಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ  ಎಂದು ತಿಳಿದುಬಂದಿದೆ.

ಮುಂಬೈನ ಕಂಡಿವಾಲಿ ಪ್ರದೇಶದಲ್ಲಿರುವ ನಟಿ ಪ್ರತ್ಯೂಷಾ ಮನೆಗೆ ಪೊಲೀಸರು ಎಂದು ಹೇಳಿಕೊಂಡು ಬಂದ 8 ಮಂದಿ, ನಟ ರಾಹುಲ್ ರಾಜ್ ಸಿಂಗ್ ಬಗ್ಗೆ ವಿಚಾರಿಸಿದರು. ಆತ ಮನೆಯಲ್ಲಿ  ಇಲ್ಲ ಎಂದು ನಾನು ಹೇಳಿದ್ದೆ. ಆದರೆ ನನ್ನ ಮಾತನ್ನು ನಂಬದ ಅವರು, ಬಲವಂತವಾಗಿ ನನ್ನನ್ನು ತಳ್ಳಿ ಮನೆ ಪ್ರವೇಶಿಸಿದ್ದರು. ಅಲ್ಲದೆ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು ಎಂದು ನಟಿ ಪ್ರತ್ಯೂಷಾ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಘಟನೆಯಿಂದ ನಿಜಕ್ಕೂ ನಾನು ತುಂಬಾ ಅಸಮಾಧಾನಗೊಂಡಿದ್ದು, ಈ ಕೂಡಲೇ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಮಾಡಿ ದೂರು ಸಲ್ಲಿಸುತ್ತೇನೆ. ಸಾರ್ವಜನಿಕರೊಂದಿಗೆ  ಪೊಲೀಸರು ನಡೆದುಕೊಳ್ಳುವ ಪರಿ ಇದೆ ಏನೂ..? ಎಂದು ಪ್ರತ್ಯೂಷಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ 8 ಮಂದಿಯ ಪೈಕಿ ಮೂವರು ಪೊಲೀಸ್  ಪೇದೆಗಳಾಗಿದ್ದು, ಉಳಿದವರು ಪೊಲೀಸರೇ ಅಲ್ಲ. ಆದರೂ ಬಲವಂತವಾಗಿ ಮನೆಗೆ ನುಗ್ಗಿದ್ದರು. ಹೀಗಾಗಿ ನಟಿ ಪ್ರತ್ಯೂಷಾ ಪೊಲೀಸರು ಸೇರಿದಂತೆ ಎಲ್ಲ 8 ಮಂದಿ ವಿರುದ್ಧ ದೂರು  ದಾಖಲಿಸಿದ್ದಾರೆ.

ನಟ ರಾಹುಲ್ ರಾಜ್ ಸಿಂಗ್ ಇತ್ತೀಚೆಗೆ ಕಾರು ಖರೀದಿಗಾಗಿ ಬ್ಯಾಂಕ್ ನಿಂದ ಲೋನ್ ಪಡೆದಿದ್ದರು. ಆದರೆ ಈ ಸಾಲವನ್ನು ಅವರು ಸರಿಯಾಗಿ ತೀರಿಸಿರಲಿಲ್ಲ. ಇದೇ ಕಾರಣಕ್ಕಾಗಿ ರಾಹುಲ್  ರಾಜ್ ಸಿಂಗ್ ರನ್ನು ಹುಡುಕಿಕೊಂಡು ಸಾಲ ವಸೂಲಾತಿ ತಂಡದವರು ಮತ್ತು ಪೊಲೀಸರು ನಟಿ ಪ್ರತ್ಯೂಷಾ ಅವರ ಮನೆಗೆ ತೆರಳಿದ್ದರು. ಈ ವೇಳೆ ನಟಿ ಪ್ರತ್ಯೂಷಾ ಹಾಗೂ ಬ್ಯಾಂಕ್  ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT