ಸಿನಿಮಾ ಸುದ್ದಿ

ನಟ ಸುದೀಪ್‌ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು: ಹೆಬ್ಬುಲಿ ಚಿತ್ರೀಕರಣ ಸ್ಧಗಿತ

Vishwanath S

ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಹೆಬ್ಬುಲಿ ಚಿತ್ರದ ಚಿತ್ರೀಕರಣ ಸ್ಧಗಿತಗೊಂಡಿದೆ.

ಸುದೀಪ್ ಅಸಿಡಿಟಿ, ಜ್ವರದಿಂದ ಬಳಲುತ್ತಿದ್ದು ನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಜಕೇಸರಿ ಖ್ಯಾತಿಯ ಕೃಷ್ಣ ನಿರ್ದೇಶನದ ಹೆಬ್ಬಲಿ ಚಿತ್ರದ ಶೂಟಿಂಗ್ ನಲ್ಲಿ ಸುದೀಪ್ ಬ್ಯುಸಿಯಾಗಿದ್ದು, ಅನಾರೋಗ್ಯದ ಹಿನ್ನೆಲೆ ಚಿತ್ರೀಕರಣ ಸ್ಧಗಿತಗೊಳಿಸಲಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುದೀಪ್ ಅವರು ಅಭಿಮಾನಿಗಳು ಗಾಬರಿಪಡಬೇಕಾಗಿಲ್ಲ ಎಂದು ವಿನಂತಿಸಿಕೊಂಡಿರುವುದಾಗಿ ಮೂಲಗಳು ಹೇಳಿವೆ.

SCROLL FOR NEXT