ಮುಂಗಾರು ಮಳೆ-2 ಸಿನೆಮಾದಲ್ಲಿ ಗಣೇಶ್ ಮತ್ತು ನೇಹಾ ಶೆಟ್ಟಿ 
ಸಿನಿಮಾ ಸುದ್ದಿ

ಶೀಘ್ರದಲ್ಲೇ ಮುಂಗಾರು ಮಳೆ-2 ಆಡಿಯೋ ಟೀಸರ್

ಕನ್ನಡದ ಸೂಪರ್ ಹಿಟ್ ಸಿನೆಮಾ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಯಶಸ್ಸಿಗೆ ಪೂರಕವಾಗಿದ್ದು ಸಿನೆಮಾದಲ್ಲಿದ್ದ ಮನೋಮೂರ್ತಿ ಅವರ ಸಂಗೀತ. 'ಮುಂಗಾರು ಮಳೆಯೇ

ಬೆಂಗಳೂರು: ಕನ್ನಡದ ಸೂಪರ್ ಹಿಟ್ ಸಿನೆಮಾ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಯಶಸ್ಸಿಗೆ ಪೂರಕವಾಗಿದ್ದು ಸಿನೆಮಾದಲ್ಲಿದ್ದ ಮನೋಮೂರ್ತಿ ಅವರ ಸಂಗೀತ. 'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ/ ಕುಣಿದು ಕುಣಿದು ಬಾರೆ/ ಅನಿಸುತಿದೆ ಯಾಕೋ ಇಂದು' ಹಾಡುಗಳು ಪ್ರೇಕ್ಷಕರು ಸದಾ ಉಲಿಯುವಂತೆ ಮಾಡಿದ್ದವು. 'ಮುಂಗಾರು ಮಳೆ-2' ಸಿನೆಮಾ ಈಗ ಶಶಾಂಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. 
ಈ ಸಿನೆಮಾಗೂ ಸಂಗೀತದ ಮೇಲೆ ಅಪಾರ ನಿರೀಕ್ಷೆ ಮೂಡಿದ್ದು ಈ ಭಾನುವಾರ 'ಮುಂಗಾರು ಮಳೆ-2' ಸಿನೆಮಾದ ಆಡಿಯೋ ಬಿಡುಗಡೆ ಮಾಡಲು ಶಶಾಂಕ್ ಮುಂದಾಗಿದ್ದಾರೆ. "ನನಗೆ ಹಲವಾರು ಹೊಳಹುಗಳು ಮೂಡಿವೆ. ಸಿನೆಮಾದ ಆಲ್ಬಮ್ ಹೆಚ್ಚಿನ ಜನಕ್ಕೆ ತಲುಪುವಂತೆ ಯೋಜನೆ ರೂಪಿಸುತ್ತಿದ್ದೇನೆ. ಆಲ್ಬಮ್ ನ ವಿವರಗಳುಳ್ಳ ಮೂರು ನಿಮಿಷದ ಟೀಸರ್ ಬಿಡುಗಡೆ ಮಾಡಲಿದ್ದು ಅದರಲ್ಲಿ ಗೀತರಚನಕಾರರ, ಹಾಡುಗಾರರ ಬಗ್ಗೆ ವಿವರಣೆ ಇರಲಿದೆ" ಎಂದು ವಿವರಿಸುತ್ತಾರೆ ಶಶಾಂಕ್. 
ಆಡಿಯೋ ಸಂಸ್ಥೆಯ ಜೊತೆಗೆ ಒಪ್ಪಂದ ಕೂಡ ಅಂತಿಮ ಹಂತಕ್ಕೆ ಬಂದಿದ್ದು ಆಡಿಯೋ ಟೀಸರ್ ಬಿಡುಗಡೆ ದಿನ ಆಡಿಯೋ ಆಲ್ಬಮ್ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುವುದಂತೆ. 
"ನಮ್ಮ ಸಿನೆಮಾ ಟೀಸರ್ ಅನ್ನು ನೀರಿಕ್ಷೆಗೂ ಮೀರಿ ಜನ ಸಂಭ್ರಮಿಸಿದ್ದಾರೆ ಮತ್ತು ಆಡಿಯೋ ಟೀಸರ್ ಮತ್ತು ಹಾಡುಗಳಿಗೂ ಅದೇ ಪ್ರತಿಕ್ರಿಯೆ ಬರಲಿದೆಯೆಂದು ನಂಬಿದ್ದೇನೆ" ಎನ್ನುತ್ತಾರೆ ಶಶಾಂಕ್. 
ಗಣೇಶ್ ಮತ್ತು ನೇಹಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ರವಿಚಂದ್ರನ್ ಗಣೇಶ್ ತಂದೆಯ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಜಿ ಗಂಗಾಧರ್ ನಿರ್ಮಿಸಿರುವ ಮುಂಗಾರು ಮಳೆ-2 ಸಿನೆಮಾದಲ್ಲಿ ಐಂದ್ರಿತಾ ರೇ, ರವಿಶಂಕರ್ ಮತ್ತು ಸಾಧು ಕೋಕಿಲಾ ಕೂಡ ನಟಿಸಿದ್ದು, ಶೇಖರ್ ಚಂದ್ರ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT