"ಉಪ್ಪಿ ಮತ್ತೆ ಹುಟ್ಟು ಬಾ...."ನಲ್ಲಿ ಹರ್ಷಿಕಾ ಪೂಣಚ್ಚ ಮತ್ತು ಉಪೇಂದ್ರ 
ಸಿನಿಮಾ ಸುದ್ದಿ

"ಉಪ್ಪಿ ಮತ್ತೆ ಹುಟ್ಟಿ ಬಾ...."ನಲ್ಲಿ ಹರ್ಷಿಕಾ ಪೂಣಚ್ಚ

ತಪ್ಪುಗಳು ಜೀವನದ ಭಾಗ ಎಂದು ಒಪ್ಪಿಕೊಳ್ಳುವ ನಟಿ ಹರ್ಷಿಕಾ ಪೂಣಚ್ಚ ಸುದೀರ್ಘ ಕಾಲ ವಿರಮಿಸಿ ವಿಮರ್ಶೆ ಮಾಡಿಕೊಂಡದ್ದು ಅವರಿಗೆ ಒಳ್ಳೆಯ ಫಲವನ್ನೇ ನೀಡಿದೆ.

ಬೆಂಗಳೂರು: ತಪ್ಪುಗಳು ಜೀವನದ ಭಾಗ ಎಂದು ಒಪ್ಪಿಕೊಳ್ಳುವ ನಟಿ ಹರ್ಷಿಕಾ ಪೂಣಚ್ಚ 
ಸುದೀರ್ಘ ಕಾಲ ವಿರಮಿಸಿ ವಿಮರ್ಶೆ ಮಾಡಿಕೊಂಡದ್ದು ಅವರಿಗೆ ಒಳ್ಳೆಯ ಫಲವನ್ನೇ ನೀಡಿದೆ. ಈ ವರ್ಷ ಕಂಡು ಕಾಣೆಯಾದಂತ 'ಭಲೇ ಜೋಡಿ', '..ರೇ' 'ಬೀಟ್' ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ ದೊಡ್ಡ ಸಿನೆಮಾದ ಭಾಗವಾಗಿದ್ದಾರೆ. ಉಪೇಂದ್ರ, ಪ್ರೇಮ, ಶ್ರುತಿ ಹರಿಹರನ್ ಜೊತೆಗೆ 'ಉಪ್ಪಿ ಮತ್ತೆ ಹುಟ್ಟಿ ಬಾ... ಇಂತಿ ಪ್ರೇಮ' ಸಿನೆಮಾದಲ್ಲಿ ಹರ್ಷಿಕಾ ನಟಿಸಲಿದ್ದಾರೆ. 
ಮಂಗಳವಾರ ಚಿತ್ರತಂಡ ಸೇರಿರುವ ಹರ್ಷಿಕಾ ತಮ್ಮ ತಾಳ್ಮೆ ಫಲ ನೀಡಿದೆ ಎನ್ನುತ್ತಾರೆ "ನನ್ನನ್ನು ಮತ್ತೆ ಗುರುತಿಸಲಾಗಿದೆ ಎಂದೆನಿಸುತ್ತಿದೆ. ಈಗ ಸದ್ಯಕ್ಕೆ ನನಗಾಗಿರುವ ಸಂತಸವನ್ನು ವಿವರಿಸಲು ಕಷ್ಟ" ಎನ್ನುತ್ತಾರೆ. 
ತಮ್ಮ ವ್ಯಕ್ತಿತ್ವದಲ್ಲಿ ಭಾರಿ ಬದಲಾವಣೆ ತಂದುಕೊಳ್ಳಲು ದೀರ್ಘ ವಿರಾಮ ತೆಗೆದುಕೊಂಡಿದ್ದಾಗಿ ತಿಳಿಸುವ ಹರ್ಷಿಕಾ ಈಗ ಹೆಚ್ಚು ಆತ್ಮವಿಶ್ವಾಸದಿಂದಿರುವುದಾಗಿ ತಿಳಿಸುತ್ತಾರೆ. "ನನ್ನ 15 ನೇ ವಯಸ್ಸಿನಲ್ಲಿ ನನ್ನ ವೃತ್ತಿಜೀವನ ಪ್ರಾರಂಭಿಸಿದ್ದು. ಆಗ ಸಿನೆಮಾ ಬಗ್ಗೆ ತಿಳಿದದ್ದೇ ಕಡಿಮೆ. ಈ ಎಂಟು ವರ್ಷಗಳಲ್ಲಿನ ಏರುಪೇರು ನನಗೆ ಸಾಕಷ್ಟು ಕಲಿಸಿದೆ. ನಾನು ನನ್ನ ವೃತ್ತಿಜೀವನದಲ್ಲಿ ಮಾಡಿದ ತಪ್ಪುಗಳನ್ನು ಮನಗಂಡು ಅವುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನಗೀಗ 23 ವರ್ಷಗಳಾಗಿದ್ದು ಹೊಸ ಬದಲಾವಣೆಯೊಂದಿಗೆ ನನ್ನ ಜೀವನದಲ್ಲಿ ಹೊಸ ಅಧ್ಯಾಯ ತೆರೆದುಕೊಂಡಂತಿದೆ" ಎನ್ನುತ್ತಾರೆ. 
ಬಾಲಿವುಡ್ ಗೆ ಕೂಡ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿರುವ ಹರ್ಷಿಕಾ "ಎಲ್ಲದ್ದಕ್ಕೂ ಸಮಯ ಹಿಡಿಯುತ್ತದೆ ಮತ್ತು ನಾನು ತಾಳ್ಮೆಯಿಂದಿದ್ದೇನೆ. ಸದ್ಯಕ್ಕೆ ಉಪೇಂದ್ರ ಸಿನೆಮಾದಲ್ಲಿ ಪಾತ್ರ ಪಡೆಯುವುದು ದೊಡ್ಡ ಸಂಗತಿ. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ನನ್ನ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುವೆ" ಎನ್ನುತ್ತಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT